ಬಿಜೆಪಿ ಬಣ ಬಡಿದಾಟ, ತಪ್ಪಿಗೆ ಜನರ ಕ್ಷಮೆ ಕೇಳಲಿ

Contributed bymanjunath.lokanath@timesgroup.com|Vijaya Karnataka

ಜಿಲ್ಲಾ ಬಿಜೆಪಿಯಲ್ಲಿನ ಬಣ ಬಡಿದಾಟಕ್ಕೆ ಪಕ್ಷದ ಕಾರ್ಯಕರ್ತರು ಬೇಸರ ವ್ಯಕ್ತಪಡಿಸಿದ್ದಾರೆ. ಪಕ್ಷದ ವರ್ಚಸ್ಸಿಗೆ ಹಾನಿಯಾಗಿದೆ ಎಂದು ಅಟಲ್‌ ಬಿಹಾರಿ ವಾಜಪೇಯಿ ಅಭಿಮಾನಿ ಬಳಗ ಹೇಳಿದೆ. ಗುಂಪುಗಾರಿಕೆ ಮಾಡಿದ ನಾಯಕರು ತಮ್ಮ ತಪ್ಪಿಗೆ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು. ಜಿಲ್ಲಾಧ್ಯಕ್ಷರು ಹಾಗೂ ಹಿರಿಯರು ಎರಡೂ ಗುಂಪುಗಳನ್ನು ಒಂದುಗೂಡಿಸಬೇಕು ಎಂದು ಒತ್ತಾಯಿಸಲಾಗಿದೆ.

bjp ban bidata janara kshame kelal controversy

ಕಿಕ್ಕರ್ : ಅಟಲ್ ಬಿಹಾರಿ ವಾಜಪೇಯಿ ಅಭಿಮಾನಿ ಬಳಗ ಒತ್ತಾಯ

----

ಬಿಜೆಪಿ ಬಣ ಬಡಿದಾಟ, ತಪ್ಪಿಗೆ ಜನರ ಕ್ಷಮೆ ಕೇಳಲಿ

ವಿಕ ಸುದ್ದಿಲೋಕ ದಾವಣಗೆರೆ

ಜಿಲ್ಲಾಬಿಜೆಪಿಯಲ್ಲಿನ ಬಣ ಬಡಿದಾಟಕ್ಕೆ ಪಕ್ಷದ ನಿಷ್ಠಾವಂತ ಕಾರ್ಯಕರ್ತರು, ಅಟಲ್ ಬಿಹಾರಿ ವಾಜಪೇಯಿ ಅಭಿಮಾನಿ ಬಳಗದ ಪದಾಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಜತೆಗೆ ಪಕ್ಷದ ಗುಂಪುಗಾರಿಕೆ ಸರಿಯಲ್ಲಎಂದು ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಅಟಲ್ ಬಿಹಾರಿ ವಾಜಪೇಯಿ ಬಳಗದಿಂದ ಹೇಳಿಕೆ ನೀಡಿದ್ದು, ಪಕ್ಷಕ್ಕಾಗಿ, ಪಕ್ಷದ ಬೆಳವಣಿಗೆಗೆ ಹಗಲಿರುಳು ಮನೆ-ಮಠ, ವ್ಯವಹಾರ ತೊರೆದು ನಿಷ್ಠೆಯಿಂದ ಪ್ರಾಮಾಣಿಕವಾಗಿ ದುಡಿದ ಕಾರ್ಯಕರ್ತರಿಗೆ, ಈಗಿನ ಪಕ್ಷದ ಗುಂಪುಗಾರಿಕೆ ಕಂಡು ತೀವ್ರ ದುಃಖವಾಗುತ್ತದೆ. ಇವರ ಗುಂಪುಗಾರಿಕೆಯಿಂದ ಪಕ್ಷದ ವರ್ಚಸ್ಸಿಗೆ ಸರಿಪಡಿಸಲಾರದಷ್ಟು ಹಾನಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಧರ್ಮಸ್ಥಳದ ಮೇಲೆ ಆಣೆ ಮಾಡಲಿ:

ಇವರ ಗುಂಪುಗಾರಿಕೆಯಿಂದ ಪಕ್ಷದ ನಾಯಕರಾಗಿ ಹೊರ ಹೊಮ್ಮಬೇಕಾಗಿದ್ದ, ಪಕ್ಷಕ್ಕಾಗಿ ಬೆವರು ಹರಿಸಿದ ಅನೇಕ ಕಾರ್ಯಕರ್ತರು ಮೂಲೆ ಗುಂಪಾಗಿರುವುದು ವಿಷಾದನೀಯ. ನಮ್ಮ ಮುತ್ಸದ್ಧಿ ನಾಯಕರು ತಮ್ಮ ಬೇಳೆ ಬೇಯಿಸಿಕೊಳ್ಳಲು ಅಧಿಕಾರಕ್ಕೋಸ್ಕರ ಲೋಕಸಭೆ, ವಿಧಾನಸಭೆ ಚುನಾವಣೆಗಳಲ್ಲಿಕಾಂಗ್ರೆಸ್ ಪಕ್ಷದ ಒಳಗೊಳಗೆ ಶಾಮೀಲಾಗಿ ಪಕ್ಷವನ್ನು ಸೋಲಿಸಿದ್ದಾರೆ. ಆದರೂ ಕಾಂಗ್ರೆಸ್ ಜತೆ ಶಾಮೀಲಾಗಿಲ್ಲಎಂದು ಕಾರ್ಯಕರ್ತರನ್ನು ನಂಬಿಸುತ್ತಿದ್ದಾರೆ. ಇವರೆಲ್ಲಾಬಿಜೆಪಿ ಕಾರ್ಯಾಲಯಕ್ಕೆ ಬಂದು, ಧರ್ಮಸ್ಥಳ ಮಂಜುನಾಥನ ಮೇಲೆ ಆಣೆ ಮಾಡಿ ಕಾರ್ಯಕರ್ತರ ನಂಬಿಕೆ ಉಳಿಸಿಕೊಳ್ಳಲಿ ಎಂದು ಹೇಳಿದ್ದಾರೆ.

ಜಿಲ್ಲಾಧ್ಯಕ್ಷರು, ಪಕ್ಷದ ಹಿರಿಯರು ಎರಡೂ ಗುಂಪುಗಳನ್ನು ಒಂದು ಮಾಡುವ ಜವಾಬ್ದಾರಿ ತೋರಲಿ, ಗುಂಪುಗಾರಿಕೆ ಮಾಡಿರುವ ನಾಯಕರು ತಮ್ಮ ತಪ್ಪಿಗೆ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿ, ಶಿಸ್ತು ಬದ್ಧ ಪಕ್ಷಕ್ಕೆ ಶಿಸ್ತನ್ನು ಮರಳಿ ತರಬೇಕು ಎಂದು ನಿಷ್ಠಾವಂತ ಕಾರ್ಯಕರ್ತರು ಹಾಗೂ ಅಟಲ್ ಬಿಹಾರಿ ಅಭಿಮಾನಿ ಬಳಗದ ಗೌರವಾಧ್ಯಕ್ಷ ಅವರಗೊಳ್ಳದ ಷಣ್ಮುಖಯ್ಯ, ಅಧ್ಯಕ್ಷ ಕೃಷ್ಣಮೂರ್ತಿ ಪವಾರ್ , ಪ್ರಧಾನ ಕಾರ್ಯದರ್ಶಿ ಎಚ್ .ಎಸ್ . ಲಿಂಗರಾಜ್ , ಉಪಾಧ್ಯಕ್ಷ ಗೌಳಿ ಲಿಂಗರಾಜ್ , ಹಾಲೇಕಲ್ ಚಂದ್ರನಾಯಕ್ , ಎಚ್ .ಎನ್ . ಶಿವಕುಮಾರ್ ಒತ್ತಾಯಿಸಿದ್ದಾರೆ.

-------