ನಾಳೆ ಮೊಗಳ್ಳಿ ಗಣೇಶ್ ನುಡಿ ನಮನ ಕಾರ್ಯಕ್ರಮ

Contributed bynaikharsha6@gmail.com|Vijaya Karnataka
Subscribe

ಖ್ಯಾತ ಸಾಹಿತಿ ಮೊಗಳ್ಳಿ ಗಣೇಶ್‌ ಅವರಿಗೆ ನುಡಿನಮನ ಸಲ್ಲಿಸಲು ನಮ್ಮವರು ತಂಡ ಕಾರ್ಯಕ್ರಮ ಹಮ್ಮಿಕೊಂಡಿದೆ. ಅ.17ರಂದು ಬೆ.10ಕ್ಕೆ ಡಾ. ಬಿ.ಆರ್‌. ಅಂಬೇಡ್ಕರ್‌ ಭವನದಲ್ಲಿ ಕಾರ್ಯಕ್ರಮ ನಡೆಯಲಿದೆ. ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಅಧ್ಯಕ್ಷತೆ ವಹಿಸಲಿದ್ದು, ಚಿಂತಕ ಡಾ. ಬಂಜಗೆರೆ ಜಯಪ್ರಕಾಶ್‌ ಚಾಲನೆ ನೀಡುವರು. ಸಾಹಿತಿ ಡಾ. ನಟರಾಜ ಹುಳಿಯಾರ್‌ ಮತ್ತು ಡಾ. ಎನ್‌.ಕೆ. ಲೋಲಾಕ್ಷಿ ಅವರು ಮೊಗಳ್ಳಿ ಅವರ ಬದುಕು-ಸಾಹಿತ್ಯ ಕುರಿತು ಮಾತನಾಡಲಿದ್ದಾರೆ. ಪುಸ್ತಕ ಪ್ರದರ್ಶನ ಮತ್ತು ಮಾರಾಟವೂ ಇರಲಿದೆ.

mogalli ganesh nudi namana karyakrama

ರಾಮನಗರ : ಇತ್ತೀಚೆಗಷ್ಟೇ ನಿಧನ ಹೊಂದಿದ ಖ್ಯಾತ ಸಾಹಿತಿ ಮೊಗಳ್ಳಿ ಗಣೇಶ್ ಅವರ ನುಡಿನಮನ ಕಾರ್ಯಕ್ರಮವನ್ನು ನಮ್ಮವರು ತಂಡ ಹಮ್ಮಿಕೊಂಡಿದೆ. ಅ.17ರಂದು ಶುಕ್ರವಾರ ಬೆ.10 ಗಂಟೆಗೆ ನಗರದ ಡಾ. ಬಿ.ಆರ್ . ಅಂಬೇಡ್ಕರ್ ಭವನದಲ್ಲಿಕಾರ್ಯಕ್ರಮ ನಡೆಯಲಿದೆ.

ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ (ಶಶಿ) ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಚಿಂತಕ ಡಾ. ಬಂಜಗೆರೆ ಜಯಪ್ರಕಾಶ್ ಅವರು ಚಾಲನೆ ನೀಡಲಿದ್ದಾರೆ. ಸಾಹಿತಿ ಹಾಗೂ ವಿಮರ್ಶಕ ಡಾ. ನಟರಾಜ ಹುಳಿಯಾರ್ ಮತ್ತು ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕಿ ಡಾ. ಎನ್ .ಕೆ. ಲೋಲಾಕ್ಷಿ ಅವರು ಮೊಗಳ್ಳಿ ಅವರ ಸಾಹಿತ್ಯ ಮತ್ತು ಬದುಕಿನ ವಿವಿಧ ಮಗ್ಗುಲುಗಳ ಕುರಿತು ಮಾತನಾಡಲಿದ್ದಾರೆ.

ಶೋಭಾ ಮೊಗಳ್ಳಿ ಗಣೇಶ್ ಅವರು ಕಾರ್ಯಕ್ರಮದಲ್ಲಿಉಪಸ್ಥಿತರಿರಲಿದ್ದಾರೆ. ದಲಿತಪರ, ರೈತಪರ, ಕನ್ನಡಪರ, ಮಹಿಳಾಪರ, ಜನಪರ ಸಂಘಟನೆಗಳು ಹಾಗೂ ಸಂಘ, ಸಂಸ್ಥೆಗಳು ಕಾರ್ಯಕ್ರಮಕ್ಕೆ ಕೈಜೋಡಿಸಿವೆ. ಮೊಗಳ್ಳಿ ಅವರು ಬರೆದಿರುವ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಕೂಡ ಇರಲಿದೆ ಎಂದು ನಮ್ಮವರು ತಂಡದ ಪ್ರಕಟಣೆ ತಿಳಿಸಿದೆ.

ಫೋಟೋ:

15್ಕN್ಕಏ02

ಮೊಗಳ್ಳಿ ಗಣೇಶ್ , ಖ್ಯಾತ ಸಾಹಿತಿ

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ