ಎಲ್ಲಸಮಾಜದವರನ್ನು ತುಳಿಯುವ ಪಿತೂರಿ

Contributed bybrarakeri@rediffmail.com|Vijaya Karnataka

ಬಿಡಿಸಿಸಿ ಬ್ಯಾಂಕ್‌ ಚುನಾವಣೆಯಲ್ಲಿ ನಾಟಕ ನಡೆಯುತ್ತಿದೆ. ರಾಯಬಾಗ ತಾಲೂಕಿನ ಸ್ವಾಭಿಮಾನಕ್ಕೆ ಧಕ್ಕೆಯಾಗಬಾರದು. ಶಾಸಕ ಮಹೇಂದ್ರ ತಮ್ಮಣ್ಣವರ ಅವರನ್ನು ರಾಜಕೀಯವಾಗಿ ಮುಗಿಸುವ ಪ್ರಯತ್ನ ನಡೆದಿದೆ. ಜಿಲ್ಲೆಯಲ್ಲಿ ಎಲ್ಲ ಸಮಾಜದವರನ್ನೂ ಮೂಲೆಗುಂಪು ಮಾಡುವ ಪಿತೂರಿ ನಡೆಯುತ್ತಿದೆ ಎಂದು ಮಾಜಿ ಸಂಸದ ರಮೇಶ ಕತ್ತಿ ಆರೋಪಿಸಿದರು. ಈ ಬಗ್ಗೆ ಬ್ಯಾಂಕ್‌ ಚುನಾವಣೆ ಸಭೆಯಲ್ಲಿ ಅವರು ಮಾತನಾಡಿದರು.

pituri that divides all communities

ವಿಕ ಸುದ್ದಿಲೋಕ ಹಾರೂಗೇರಿ ಜಗತ್ತಿನಲ್ಲೇ ಇಲ್ಲದ ನಾಟಕ ಕಂಪನಿಗಳು ನಮ್ಮ ಜಿಲ್ಲೆಯಲ್ಲಿವೆ. ಬಿಡಿಸಿಸಿ ಬ್ಯಾಂಕ್ ಚುನಾವಣೆ ಯಲ್ಲಿನಾಟಕ ಶುರುವಾಗಿದೆ ಎಂದು ಮಾಜಿ ಸಂಸದ ರಮೇಶ ಕತ್ತಿ ಹೇಳಿದರು. ಪಟ್ಟಣದಲ್ಲಿಬುಧವಾರ ನಡೆದ ಬಿಡಿಸಿಸಿ ಬ್ಯಾಂಕ್ ಚುನಾವಣೆ ಸಭೆಯಲ್ಲಿರಾಯಬಾಗ ತಾಲೂಕು ಅಭ್ಯರ್ಥಿ ಬಸಗೌಡ ಆಸಂಗಿ ಪರ ಪ್ರಚಾರ ಕೈಗೊಂಡು ಅವರು ಮಾತನಾಡಿದರು. ‘‘ರಾಯಬಾಗ ತಾಲೂಕಿನ ಸ್ವಾಭಿಮಾನಕ್ಕೆ ಧಕ್ಕೆಯಾಗಬಾರದು. ಶಾಸಕ ಮಹೇಂದ್ರ ತಮ್ಮಣ್ಣವರ ಅವರನ್ನು ರಾಜಕೀಯವಾಗಿ ಮುಗಿಸುವ ಪ್ರಯತ್ನ ನಡೆದಿದೆ. ಈ ನೆಪದಲ್ಲಿಕೆಲವರು ಕುಡಚಿ ಕ್ಷೇತ್ರಕ್ಕೆ ಕಾಲಿಡುವ ಹುನ್ನಾರ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲ, ಜಿಲ್ಲೆಯಲ್ಲಿಎಲ್ಲಸಮಾಜದವರನ್ನೂ ಮೂಲೆಗುಂಪು ಮಾಡುವ ಪಿತೂರಿ ನಡೆಯುತ್ತಿದೆ’’, ಎಂದು ಆರೋಪಿಸಿದರು. ಮಾಜಿ ಸಂಸದ ಅಮರಸಿಂಹ ಪಾಟೀಲ, ಶಾಸಕ ಮಹೇಂದ್ರ ತಮ್ಮಣ್ಣವರ ಮಾತನಾಡಿದರು. ಅಣ್ಣಪ್ಪಗೌಡ ಪಾಟೀಲ, ಎ.ಬಿ. ಪಾಟೀಲ, ರಾಜಶೇಖರ ಪಾಟೀಲ, ಸಂಜು ಅವಕ್ಕನವರ, ಅಶೋಕ ಗುಡೋಡಗಿ, ಈರಣ್ಣಗೌಡ ಪಾಟೀಲ, ಮಹಾಂತೇಶ ಪಾಟೀಲ, ಈರಗೌಡ ಪಾಟೀಲ, ಮಹಾದೇವ ಶಿರಗೂರ, ಶಿವರಾಜ ಬುಸಗುಂಡೆ ಹಾಗೂ ರಾಯಬಾಗ ತಾಲೂಕಿನ ಎಲ್ಲ

ಪಿಕೆಪಿಎಸ್ ಅಧ್ಯಕ್ಷರು, ನಿರ್ದೇಶಕರು ಉಪಸ್ಥಿತರಿದ್ದರು.