ವಿಕ ಸುದ್ದಿಲೋಕ ಹುಣಸೂರು ಮಂಗಳವಾರ ರಾತ್ರಿಯಿಂದ ನಾಪತ್ತೆಯಾಗಿದ್ದ ಹುಣಸೂರು ವಕೀಲರೊಬ್ಬರ ಮೃಧಿತಧಿದೇಹ ತಾಲೂಕಿನ ಹೊಸರಾಮನಹಳ್ಳಿ ಬಳಿಯ ಲಕ್ಷ್ಮಣ ತೀರ್ಥ ನದಿ ಸೇತುವೆ ಕೆಳಗೆ ಪತ್ತೆಯಾಗಿದೆ. ಹುಣಸೂರಿನ ಗೋಕುಲ ಬಡಾವಣೆ ನಿವಾಸಿ, ಗುತ್ತಿಗೆದಾರರಾಗಿದ್ದ ದಿ.ಕುಳ್ಳಪ್ಪ ಅವರ ಪುತ್ರ ವಕೀಲ ಕೆ.ರಾಜ (52) ಮೃತರು. ಇಧಿವಧಿರಿಗೆ ಪತ್ನಿ, ಇಬ್ಬರು ಪುತ್ರಿಯರು ಇದ್ದಾರೆ. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮಂಗಳವಾರ ಮನೆಯಿಂದ ನ್ಯಾಯಾ ಲಯಕ್ಕೆ ಹೋಗಿದ್ದ ಕೆ.ರಾಜ ಮನೆಗೆ ವಾಪಸ್ ಆಗಿರಲಿಲ್ಲ. ಬುಧವಾರ ನ್ಯಾಯಾಲಯಕ್ಕೆ ಗೈರಾಗಿದ್ದರು. ವಕೀಲರ ಗೈರು ಹಾಜರಿ ಸಹೋ ದ್ಯೋಗಿ ವಕೀಲರಲ್ಲಿಹಾಗೂ ಕುಟುಂಬದವರಲ್ಲಿಆತಂಕ ಉಂಟುಮಾಡಿತ್ತು. ಸೇತುವೆ ಬಳಿ ಕಾರು ಪತ್ತೆ: ತಾಲೂಕಿನ ಬಿಳಿಕೆರೆ-ಕೆ.ಆರ್ .ನಗರ ಮುಖ್ಯರಸ್ತೆಯ ಹೊಸರಾಮನಹಳ್ಳಿಯ ಲಕ್ಷ್ಮಣತೀರ್ಥ ನದಿಯ ಸೇತುವೆ ಬಳಿ ಬುಧವಾರ ಬೆಳಗ್ಗೆಯಿಂದ ಸಂಜೆವರೆಗೂ ಕಾರು ನಿಂತಿರುವುದನ್ನು ಕಂಡ ಗ್ರಾಮಸ್ಥರು ಬಿಳಿಕೆರೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಾರನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದ ವೇಳೆ ಮೊಬೈಲ್ , ವಾಚ್ , ಐ.ಡಿ.ಕಾರ್ಡ್ ಪತ್ತೆಯಾಗಿತ್ತು. ಕುಟುಂಬದವರನ್ನು ಸಂಪರ್ಕಿಸಿದ ಪೊಲೀಸರು ವಿಚಾರಿಸಿಧಿದಾಗ ರಾತ್ರಿ ಮನೆಗೆ ಬಾರದಿರುವ ಬಗ್ಗೆ ಮಾಹಿತಿ ನೀಡಿದ್ದರು. ಗುರುವಾರ ಬೆಳಗ್ಗೆ ಪತ್ನಿ ವಸಂತಲಕ್ಷ್ಮಿ ಬಿಳಿಕೆರೆ ಠಾಣೆಗೆ ಪತಿ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದರು. ನದಿಯಲ್ಲಿಹುಡುಕಾಟ: ಕಾರು ಸೇತುವೆ ಬಳಿ ಸಿಕ್ಕಿದ್ದರಿಂದ ನದಿಯಲ್ಲಿಬಿದ್ದಿ ರಬಹುದೆಂದು ಶಂಕಿಸಿದ ಪೊಲೀಸರು ನದಿಯಲ್ಲಿಮೃಧಿತಧಿದೇಧಿಹಕ್ಕಾಗಿ ಅಗ್ನಿಶಾಮಕ ಸಿಬ್ಬಂದಿ ಮುಳುಗು ತಜ್ಞರ ನೆರವಿನಿಂದ ಶೋಧ ಕಾರ್ಯ ನಡೆಸಿದ್ದರು. ಸಂಜೆ ವೇಳೆಗೆ ಸೇತುವೆ ಬಳಿಯೇ ಶವ ಪತ್ತೆಯಾಗಿದೆ. ಹುಣಸೂರು ಶವಾಗಾರಕ್ಕೆ ಸಾಗಿಸಿದ್ದು, ಶುಕ್ರವಾರ ಅಂತ್ಯಕ್ರಿಯೆ ನಡೆಯಲಿದೆ ಎಂದು ವಕೀಲ ಸ್ನೇಹಿತರು ತಿಳಿಸಿದ್ದಾರೆ. ಮಂಗಳವಾರ ರಾತ್ರಿ 10ರವರೆಗೂ ತಮ್ಮ ಕಚೇರಿಯಲ್ಲಿಸಹೋ ದ್ಯೋಗಿಗಳೊಂದಿಗೆ ಕೆಲಸ ಮಾಡಿದ್ದರು. ಆದರೆ, ರಾತ್ರಿ 10ರ ನಂತರ ಮೊಬೈಲ್ ಸ್ವಿಚ್ ಆಫ್ ಆಗಿತ್ತು.

