ಅರುಣಾಚಲ ಪ್ರದೇಶ ಫ್ರಾಂಟಿಯರ್ ಹೆದ್ದಾರಿ ಯೋಜನೆ: ಕೋಟಿ ಕೋಟಿ ರೂಪಾಯಿಗಳ ಪರಿಹಾರ ಹಗರಣ ತನಿಖೆಗೆ ಉನ್ನತ ಮಟ್ಟದ ಸಮಿತಿ ರಚನೆ

Vijaya Karnataka
Subscribe

ಅರುಣಾಚಲ ಪ್ರದೇಶದ ಫ್ರಾಂಟಿಯರ್ ಹೆದ್ದಾರಿ ಯೋಜನೆಯಲ್ಲಿ ದೊಡ್ಡ ಭ್ರಷ್ಟಾಚಾರ ನಡೆದಿದೆ. ಕೋಟ್ಯಂತರ ರೂಪಾಯಿಗಳ ಪರಿಹಾರದಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಲಾಗಿದೆ. ಮುಖ್ಯಮಂತ್ರಿ ಪೆಮಾ ಖಂಡು ಅವರು ಈ ಬಗ್ಗೆ ತನಿಖೆ ನಡೆಸಲು ಉನ್ನತ ಮಟ್ಟದ ಸಮಿತಿ ರಚಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಶೀಘ್ರದಲ್ಲೇ ಅಮಾನತು ಆದೇಶ ಹೊರಡಲಿದೆ.

arunachal pradesh billion rupee corruption scandal committee formed for investigation
ಇಟಾನಗರ: ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಅವರು ಶುಕ್ರವಾರದಂದು ಫ್ರಾಂಟಿಯರ್ ಹೆದ್ದಾರಿ ಯೋಜನೆಯಲ್ಲಿ ಕೋಟ್ಯಂತರ ರೂಪಾಯಿಗಳ ನಷ್ಟಕ್ಕೆ ಕಾರಣವಾದ ಭ್ರಷ್ಟಾಚಾರದ ಆರೋಪಗಳ ತನಿಖೆಗಾಗಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಿರುವುದಾಗಿ ತಿಳಿಸಿದ್ದಾರೆ. ಲಡಾ (ಬಿಚೋಮ್) ನಿಂದ ಸಾರ್ಲಿ (ಕುರುಂಗ್ ಕುಮೇ) ವರೆಗಿನ ಹೆದ್ದಾರಿ ಯೋಜನೆಯ 1, 3 ಮತ್ತು 4ನೇ ಪ್ಯಾಕೇಜ್ ಗಳಲ್ಲಿ 130 ಕೋಟಿಗೂ ಹೆಚ್ಚು ರೂಪಾಯಿಗಳ ಭ್ರಷ್ಟಾಚಾರ ನಡೆದಿದೆ ಎಂದು ಹಲವು ಕಾರ್ಯಕರ್ತರು ಮತ್ತು ಸಂಘಟನೆಗಳು ಆರೋಪಿಸಿವೆ. ಈ ಪ್ರಕರಣದಲ್ಲಿ ಪೂರ್ವ ಕಾಮೆಂಗ್ ನ ಉಪ ಆಯುಕ್ತ ಹಿಮಾಂಶು ನಿಗಮ್ ಮತ್ತು ಜಿಲ್ಲಾ ಭೂ ಕಂದಾಯ ವಸಾಹತು ಅಧಿಕಾರಿ ತಕಂ ಕೆಚಕ್ ಅವರ ಶಾಮೀಲು ಇರುವುದಾಗಿ ಹೇಳಿ, ಅವರ ಬಂಧನಕ್ಕೆ ಮತ್ತು ವಿಚಕ್ಷಣಾ ತನಿಖೆಗೆ ಒತ್ತಾಯಿಸಿವೆ.

ಮುಖ್ಯಮಂತ್ರಿ ಖಂಡು ಅವರು, ಈ ಸಮಿತಿಯು ಈಗಾಗಲೇ ಪ್ರಾಥಮಿಕ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ ಮತ್ತು ಅದನ್ನು ಪರಿಶೀಲಿಸಲಾಗುತ್ತಿದೆ ಎಂದು ಹೇಳಿದ್ದಾರೆ. "ನಾನು ಈಗಾಗಲೇ ನಷ್ಟಕ್ಕೆ ಕಾರಣರಾದ ಎಲ್ಲರನ್ನೂ ಅಮಾನತುಗೊಳಿಸಲು ನಿರ್ದೇಶನ ನೀಡಿದ್ದೇನೆ. ಶೀಘ್ರದಲ್ಲೇ ಅಮಾನತು ಆದೇಶ ಹೊರಡಿಸಲಾಗುವುದು" ಎಂದು ಅವರು ತಿಳಿಸಿದ್ದಾರೆ.
ರಾಜ್ಯ ಸರ್ಕಾರವು ಭ್ರಷ್ಟಾಚಾರದ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿಯನ್ನು ಹೊಂದಿದೆ ಎಂದು ಪುನರುಚ್ಚರಿಸಿದ ಮುಖ್ಯಮಂತ್ರಿಗಳು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಕಾರ್ಯಕರ್ತ ಸೋಲ್ ಡೋಡುಂ ಅವರು ಹೆದ್ದಾರಿ ಯೋಜನೆಯಲ್ಲಿನ ಅಕ್ರಮಗಳ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ ನಂತರ ಈ ಆರೋಪಗಳು ವ್ಯಾಪಕವಾಗಿ ಹರಡಿದ್ದವು. ರಸ್ತೆ ಅಥವಾ ವಿದ್ಯುತ್ ಸಂಪರ್ಕವೇ ಇಲ್ಲದ ದಟ್ಟ ಅರಣ್ಯ ಪ್ರದೇಶದಲ್ಲಿ ಫುಟ್ಸಾಲ್ ಮೈದಾನ ನಿರ್ಮಾಣಕ್ಕೆ ಬಿಲ್ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಪೂರ್ವ ಕಾಮೆಂಗ್ ನ ಬಮೆಂಗ್ ವೃತ್ತದ 1 ಮತ್ತು 2ನೇ ಪ್ಯಾಕೇಜ್ ಗಳಲ್ಲಿ, ಭೂಮಿ ಒಡೆತನದ ದಾಖಲೆಗಳಿಲ್ಲದ ಜನರಿಗೆ ಪರಿಹಾರ ನೀಡಲಾಗಿದೆ, ಆದರೆ ಸುಮಾರು 50 ನಿಜವಾದ ಫಲಾನುಭವಿಗಳನ್ನು ಹೊರಗಿಡಲಾಗಿದೆ ಎಂದು ಅವರು ಹೇಳಿದ್ದಾರೆ.

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ