ದುಶ್ಟಟಕ್ಕೆ ಯುವಕರು ಬಲಿ
ವಿಕ ಸುದ್ದಿಲೋಕ ತೇರದಾಳ
‘‘ದೇಶದ ಸಂಪತ್ತು ಯುವ ಜನಾಂಗ ದುಶ್ಚಟಗಳಿಗೆ ಅಂಟಿಕೊಂಡು ತಮ್ಮ ಜೀವನವನ್ನೆ ಹಾಳು ಮಾಡಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆ’’ ಎಂದು ದಾನಿಗೊಂಡ ಸಮೂಹ ಶಿಕ್ಷಣ ಸಂಸ್ಥೆಗಳ ಚೇರಮನ್ ಡಾ.ಮಹಾವೀರ ದಾನಿಗೊಂಡ ಹೇಳಿದರು.
ದಾನಿಗೊಂಡ ನರ್ಸಿಂಗ್ ಹಾಗೂ ಫಾರ್ಮಸಿ ಕಾಲೇಜ್ ಆಶ್ರಯದಲ್ಲಿಹಮ್ಮಿಕೊಂಡಿದ್ದ ನಶಾ ಮುಕ್ತ ಭಾರತ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘‘ಡ್ರಗ್ಸ್ ಮಾಫಿಯಾ, ಧೂಮಪಾನ, ಮದ್ಯಪಾನಗಳಿಗೆ ಯುವಕರು ಹೆಚ್ಚಾಗಿ ಬಲಿಯಾಗುತ್ತಿದ್ದಾರೆ. ಯುವಕರು ಈ ಕುರಿತು ಜಾಗೃತರಾಗಬೇಕು. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕಠಿಣ ಕಾನೂನು ರಚಿಸುವುದು ಅಗತ್ಯವಾಗಿದೆ’’ ಎಂದು ಹೇಳಿದರು.
ಆಯುರ್ವೇದ ವೈದ್ಯಕೀಯ ಕಾಲೇಜಿನ ಅಧೀಕ್ಷಕ ಡಾ.ಪಿ.ಬಿ.ಅಪರಾಜ, ನರ್ಸಿಂಗ್ ಕಾಲೇಜ್ ಪ್ರಾಚಾರ್ಯ ಡಾ.ಅನ್ನಪೂರ್ಣ ಎಸ್ ., ಫಾರ್ಮಸಿ ಕಾಲೇಜ್ ಪ್ರಾಚಾರ್ಯ ಡಾ.ಲೋಕೇಶ್ವರ ಬಾಬು ಮತ್ತಿತರಿದ್ದರು.
ಫೋಟೊ ಫೈಲ್ ನೇಮ್ ಟಿಡಿಎಲ್ -28-1ಎ
ತೇರದಾಳದಲ್ಲಿನಶಾ ಮುಕ್ತ ಭಾರತ ಅಭಿಯಾನ ಜಾಥಾ ಕಾರ್ಯಕ್ರಮಕ್ಕೆ ಡಾ.ಮಹಾವೀರ ದಾನಿಗೊಂಡ ಚಾಲನೆ ನೀಡಿದರು.
