ಕಳೆಗಟ್ಟಿದ ಕಡಲೆಕಾಯಿ ಪರಿಷೆ

Contributed bypunyavathi.hp@timesgroup.com|Vijaya Karnataka
Subscribe

ಬಸವನಗುಡಿ ಕಡಲೆಕಾಯಿ ಪರಿಷೆ ಮಂಗಳವಾರವೂ ಜನರಿಂದ ತುಂಬಿತ್ತು. ಸಂಜೆ ರಸ್ತೆಗಳು ದೀಪಗಳಿಂದ ಕಂಗೊಳಿಸಿದವು. ಕಡಲೆಕಾಯಿ, ತಿಂಡಿ, ಆಟಿಕೆ, ಗೃಹೋಪಯೋಗಿ ವಸ್ತುಗಳ ವ್ಯಾಪಾರ ಜೋರಾಗಿತ್ತು. ರಾಮಕೃಷ್ಣ ಆಶ್ರಮದಿಂದ ಎನ್‌ಆರ್‌ ಕಾಲೊನಿವರೆಗೆ ವ್ಯಾಪಾರ ನಡೆಯಿತು. ಮಕ್ಕಳು, ಯುವಕರು, ಮಹಿಳೆಯರು, ಯುವತಿಯರು ವಿವಿಧ ವಸ್ತುಗಳ ಖರೀದಿಯಲ್ಲಿ ನಿರತರಾಗಿದ್ದರು. ಸಂಜೆ ಕುಟುಂಬ ಸಮೇತ ಜನ ಆಗಮಿಸಿದ್ದರಿಂದ ವ್ಯಾಪಾರ ಮತ್ತಷ್ಟು ಚುರುಕಾಗಿತ್ತು. ಪರಿಷೆ ನ.21ರವರೆಗೆ ನಡೆಯಲಿದೆ.

basavanagudi kadlekai parishe a unique experience and variety of goods

ವಿಕ ಸುದ್ದಿಲೋಕ ಬೆಂಗಳೂರು

ಬಸವನಗುಡಿಯ ಕಡಲೆಕಾಯಿ ಪರಿಷೆಯಲ್ಲಿಮಂಗಳವಾರವೂ ಸಾವಿರಾರು ಸಂಖ್ಯೆಯಲ್ಲಿಭಾಗವಹಿಸಿದ್ದರು.

ಸಂಜೆಯಾಗುತ್ತದ್ದಂತೆ ರಸ್ತೆಗಳು ವಿದ್ಯುದ್ದೀಪಗಳಿಂದ ಕಂಗೊಳಿಸುತ್ತಿದ್ದವು. ಕಡಲೆಕಾಯಿ, ಆಟಿಕೆಗಳು, ತಿಂಡಿಗಳು, ಗೃಹೋಪಯೋಗಿ ವಸ್ತುಗಳೂ ಸೇರಿದಂತೆ ವ್ಯಾಪಾರ ವಹಿವಾಟು ಬಿರುಸಾಗಿ ಸಾಗಿತ್ತು.

ರಾಮಕೃಷ್ಣ ಆಶ್ರಮದ ವೃತ್ತದಿಂದ ಹಿಡಿದು ಎನ್ ಆರ್ ಕಾಲೊನಿವರೆಗಿನ ರಸ್ತೆ ತುಂಬ ವ್ಯಾಪಾರ ವಹಿವಾಟು ಜೋರಾಗಿತ್ತು. ಪುಟ್ಟಮಕ್ಕಳ ದೃಷ್ಟಿ ಬಲೂನು, ಮಿಠಾಯಿ ಕಡೆ ಹಾಯ್ದರೆ, ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವಜನರು ಬಜ್ಜಿ, ಬೋಂಡ, ಕಬ್ಬಿನಹಾಲು, ಗೋಬಿ ಮಂಚೂರಿ, ಬೇಲ್ ಪುರಿ, ಮಸಾಲೆಪುರಿ ಅಂಗಡಿಗಳ ಮುಂದೆ ನಿಂತು ಬಾಯಿ ಚಪ್ಪರಿಸುತ್ತ ತಿನ್ನುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಪರಿಷೆಯಲ್ಲಿಗೃಹಾಲಂಕಾರಿಕ ವಸ್ತುಗಳಿಗೆ ಮನಸೋತ ಮಹಿಳೆಯರು ಬಾಗಿಲು, ಕಿಟಕಿ, ಗೋಡೆಗಳನ್ನು ಅಲಂಕರಿಸುವ ವಸ್ತುಗಳ ಖರೀದಿಯಲ್ಲಿನಿರತರಾಗಿದ್ದರು.

ಯುವತಿಯರು ಉಡುಗೆ ತೊಡುಗೆಯೊಂದಿಗೆ ಬಳೆ, ಸರ ಸೇರಿದಂತೆ ಅಲಂಕಾರಿಕ ವಸ್ತುಗಳನ್ನು ಕೊಳ್ಳುವುದರಲ್ಲಿಮಗ್ನರಾಗಿದ್ದರು. ಶಾಲಾ- ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಸ್ಥರು ಸಂಜೆ ಕುಟುಂಬ ಸಮೇತರಾಗಿ ಪರಿಷೆಗೆ ಆಗಮಿಸಿದ್ದರಿಂದ ಸಂಜೆಯಾಗುತ್ತಲೇ ವ್ಯಾಪಾರ ಮತ್ತಷ್ಟು ಚುರುಕಾಗಿತ್ತು.

ಈ ಬಾರಿ ಐದು ದಿನ ಪರಿಷೆ ಆಯೋಜಿಸಿದ್ದು, ನ.21ರವರೆಗೆ ನಡೆಯಲಿದೆ.

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ