ಲಕ್ಷ ದೀಪೋತ್ಸವ ಸಂಪಧಿನ್ನ

Contributed byprasannanews1985@gmail.com|Vijaya Karnataka
Subscribe

ಗುಬ್ಬಿ ತಾಲೂಕಿನ ಸಿಎಸ್‌ ಪುರ ಹೋಬಳಿಯ ವೀರಣ್ಣನ ಗುಡಿಯಲ್ಲಿ ಶ್ರೀ ಭದ್ರ ಕಾಳಿ ಸಮೇತ ವೀರಭದ್ರಸ್ವಾಮಿಯವರ ಲಕ್ಷ ದೀಪೋತ್ಸವ ಸೋಮವಾರ ರಾತ್ರಿ ಅದ್ದೂರಿಯಾಗಿ ನಡೆಯಿತು. ಸಾವಿರಾರು ಭಕ್ತರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಶಾಸಕ ಬಿ. ಸುರೇಶ್‌ ಗೌಡ ಅವರು ದೇವಸ್ಥಾನದ ಇತಿಹಾಸವನ್ನು ಸ್ಮರಿಸಿದರು. ರೈತರು ಸಮೃದ್ಧಿಯಾಗಿರಲು ದೇವರಲ್ಲಿ ಪ್ರಾರ್ಥಿಸಲಾಯಿತು. ಮಾಜಿ ಶಾಸಕ ಮಸಾಲೆ ಜಯರಾಮ್‌ ಅವರು ಸಹ ತಮ್ಮ ಅಭಿಪ್ರಾಯ ಹಂಚಿಕೊಂಡರು.

sri veerabhadrashwami laksha deepotsava 1000 years of worship to deities in unity

ಗುಬ್ಬಿ: ತಾಲೂಕಿನ ಸಿಎಸ್ ಪುರ ಹೋಬಳಿಯ ವೀರಣ್ಣನ ಗುಡಿಯಲ್ಲಿಮಾಜಿ ಶಾಸಕ ದಿವಂಗತ ವೀರಣ್ಣಗೌಡರ ಜ್ಞಾಪಕಾರ್ಥವಾಗಿ ಶ್ರೀ ಭದ್ರ ಕಾಳಿ ಸಮೇತ ವೀರಭದ್ರಸ್ವಾಮಿಯವರ ಲಕ್ಷ ದೀಪೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿಸೋಮವಾರ ರಾತ್ರಿ ಅದ್ದೂರಿಯಾಗಿ ಜರುಗಿತು. ಲಕ್ಷ ದೀಪೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಬಿ. ಸುರೇಶ್ ಗೌಡ, ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನಕ್ಕೆ ಸುಮಾರು ಒಂದು ಸಾವಿರ ವರ್ಷಗಳ ಇತಿಹಾಸವಿದ್ದು, ಭಕ್ತರ ಧಾರ್ಮಿಕ ಪುಣ್ಯಕ್ಷೇತ್ರವಾಗಿದೆ. ಇಲ್ಲಿಪ್ರತಿ ವರ್ಷವೂ ಲಕ್ಷದೀಪೋತ್ಸವವನ್ನು ವಿಶೇಷವಾಗಿ ಮಾಡಲಾಗುತ್ತದೆ. ಶ್ರೀ ವೀರಭದ್ರಸ್ವಾಮಿ ಕೃಪೆಯಿಂದ ಒಳ್ಳೆಯ ಮಳೆ ಬೆಳೆಯಾಗಿ ನಾಡಿನ ರೈತರು ಸಮೃದ್ಧಿಯಾಗಿರಲಿ ಎಂದು ಆಶಿಸಿದರು. ಮಾಜಿ ಶಾಸಕ ಮಸಾಲೆ ಜಯರಾಮ್ , ಮುಖಂಡ ಬಿ.ಎಸ್ . ನಾಗರಾಜು ಮಾತನಾಡಿ, ಪುರಾತನ ಕಾಲದ ಇತಿಹಾಸ ಹೊಂದಿರುವ ಶ್ರೀ ವೀರಭದ್ರೇಶ್ವರ ಸ್ವಾಮಿಗೆ ನಾಡಿನಾದ್ಯಂತ ಭಕ್ತ ಸಮೂಹವಿದೆ. ಪ್ರತಿ ವರ್ಷ ಜಾತ್ರೆ ಹಾಗೂ ಲಕ್ಷ ದೀಪೋತ್ಸವದಲ್ಲಿಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ ಎಂದರು. ಶೈಲಜಾ ಸೋಮಣ್ಣ, ಸಮಿತಿ ಅಧ್ಯಕ್ಷ ಪುಟ್ಟಸ್ವಾಮಿ, ಕಾರ್ಯಾಧ್ಯಕ್ಷ ಎಂ.ವಿ. ಬಸವರಾಜು, ರಾಮಣ್ಣ, ಗುತ್ತಿಗೆದಾರ ರಮೇಶ್ , ಲೋಕೇಶ್ ಪಾಧಿಲ್ಗೊಂಡಿಧಿದ್ದಧಿರು.

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ