(ಬೆಂಗಳೂರಿಗೆ) ಹಾಸನಾಂಬ ದರ್ಶನ ಪಡೆದ ಬಾನು ಮುಷ್ತಾಕ್

Contributed byprakashvkhsn@gmail.com|Vijaya Karnataka
Subscribe

ಬೂಕರ್‌ ಪ್ರಶಸ್ತಿ ಪುರಸ್ಕೃತೆ ಲೇಖಕಿ ಬಾನು ಮುಷ್ತಾಕ್‌ ಅವರು ಕುಟುಂಬ ಸಮೇತರಾಗಿ ಹಾಸನಾಂಬ ದರ್ಶನ ಪಡೆದರು. ಹಾಸನಾಂಬ ಜಾತ್ರೆ ಭಾವೈಕ್ಯತೆಯ ಸಂಕೇತ ಎಂದು ಅವರು ಹೇಳಿದರು. ಹಿಂದಿನಿಂದಲೂ ಮುಸ್ಲಿಮರು ಈ ಜಾತ್ರೆಯಲ್ಲಿ ಉತ್ಸಾಹದಿಂದ ಭಾಗವಹಿಸುತ್ತಿದ್ದರು. ಇದು ಸ್ನೇಹ, ಪ್ರೀತಿ, ಸಹಬಾಳ್ವೆ, ಸಾಮಾಜಿಕ ಸಾಮರಸ್ಯ ಬೆಸೆಯುವ ತಾಣವಾಗಿದೆ. ಈಗ ಮತ್ತೆ ಸರ್ವ ಧರ್ಮದವರು ದೇವಿಯ ದರ್ಶನಕ್ಕೆ ಬರುತ್ತಿದ್ದಾರೆ.

banu mushtaq visits hassanamba

ವಿಕ ಸುದ್ದಿಲೋಕ ಹಾಸನ ಬೂಕರ್ ಪ್ರಶಸ್ತಿ ಪುಧಿರಧಿಸ್ಕೃಧಿತ ಲೇಖಕಿ ಬಾನು ಮುಷ್ತಾಕ್ ಕುಟುಂಬ ಸಮೇತರಾಗಿ ಬುಧವಾರ ಹಾಸನಾಂಬ ದರ್ಶನ ಪಡೆದರು. ‘‘ಹಾಸನಾಂಬ ಜಾತ್ರೆ ಭಾವೈಕ್ಯತೆಯ ಸಂಕೇತ. ಚಿಕ್ಕಂದಿನಿಂದಲೂ ನನ್ನ ತಾಯಿಯ ಕೈಬೆರಳು ಹಿಡಿದುಕೊಂಡು ದೇವಿ ದರ್ಶನಕ್ಕೆ ಬರುತಿದ್ದೆ. ಆಗ ನಾನು ಯಾರೆಂದು ಯಾರಿಗೂ ಗೊತ್ತಾಗುತ್ತಿರ ಲಿಲ್ಲ. ಈಗ ಗೊತ್ತಾಗುತ್ತಿದೆ,’’ ಎಂದು ಹೇಳಿದರು. ‘‘ಬಹಳ ಹಿಂದಿನಿಂದಲೂ ಮುಸ್ಲಿಮರು ಹಸನ್ ಬಿ ಹುಸೇನ್ ಬಿ ಎಂದು ನಂಬುವ ಕಾಲವಿತ್ತು. ನಮ್ಮ ಪೂರ್ವಿಕರು ಮುಸ್ಲಿಂ ಹೆಣ್ಣು ಮಕ್ಕಳನ್ನು ಕರೆದುಕೊಂಡು ಬಂದು ಧಾರ್ಮಿಕ ನಂಬಿಕೆಯನ್ನು ತಿಳಿಸುತ್ತಿದ್ದರು. ಹಾಸ ನಾಂಬ ಜಾತ್ರೆ ಎಂದರೆ ಅದು ನಮ್ಮೂರ ಹಬ್ಬ ಎಂದು ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ. ಅದರಲ್ಲಿತಪ್ಪೇನಿದೆ,’’ ಎಂದರು. ‘‘ಭಕ್ತಿ, ಭಾವೈಕ್ಯತೆಯ ನೆಮ್ಮದಿಯ ತಾಣವಿದು. ಸ್ನೇಹ, ಪ್ರೀತಿ, ಸಹಬಾಳ್ವೆ, ಸಾಮಾಜಿಕ ಸಾಮರಸ್ಯ ಬೆಸೆಯುವ ಸ್ಥಳ. ಮುಸ್ಲಿಂ ಸಮುದಾಯದವರು ಹಿಂದೆ ಬಹಳಷ್ಟು ಮಂದಿ ಬರುತ್ತಿದ್ದರು. ಆಗ ಅವರ ಗ್ರಹಿಕೆ ಬೇರೆಯಾಗಿತ್ತು. ಸಕ್ಕರೆ ಊದು ಕಡ್ಡಿ ತಂದು ಊದಿಸುತ್ತಿದ್ದರು. ಮಧ್ಯದಲ್ಲಿಸ್ವಲ್ಪ ಕಡಿಮೆಯಾಗಿತ್ತು. ಈಗ ಮತ್ತೆ ದೇವಿಯ ದರ್ಶನಕ್ಕೆ ಸರ್ವ ಧರ್ಮದವರು ಬರುತ್ತಿದ್ದಾರೆ,’’ ಎಂದು ತಿಳಿಸಿದರು.

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ