ಕ್ರಿಮಿನಲ್ ಬುದ್ಧಿಯಿಂದ ಆರ್ ಎಸ್ ಎಸ್ ಬಗ್ಗೆ ಟೀಕೆ: ಶೆಟ್ಟರ್ ವಾಗ್ದಾಳಿ

Contributed byravi.gosavi@timesofindia.com|Vijaya Karnataka
Subscribe

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಅವರು ಕಾಂಗ್ರೆಸ್‌ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಆರ್‌ಎಸ್‌ಎಸ್‌ ಮೂರು ಬಾರಿ ನಿಷೇಧಗೊಂಡರೂ 100 ವರ್ಷ ಪೂರೈಸಿದೆ. ಕಾಂಗ್ರೆಸ್‌ ನವರಿಗೆ ಇದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಸಚಿವರಾದ ದಿನೇಶ ಗುಂಡೂರಾವ್‌ ಮತ್ತು ಪ್ರಿಯಾಂಕ್‌ ಖರ್ಗೆ ಅವರ ಟೀಕೆಗಳನ್ನು ಶೆಟ್ಟರ್‌ ಖಂಡಿಸಿದರು. ಕ್ರಿಮಿನಲ್‌ ಬುದ್ಧಿಯಿಂದ ಟೀಕೆ ಮಾಡುವುದರಿಂದ ಅವರ ವ್ಯಕ್ತಿತ್ವವೇ ಹಾಳಾಗುತ್ತದೆ ಎಂದು ಹೇಳಿದರು.

criticism of rss with criminal mindset shettars statement

ಬೆಳಗಾವಿ: ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿದ ಸಂದರ್ಭದಲ್ಲಿಆರ್ ಎಸ್ ಎಸ್ ಬ್ಯಾನ್ ಮಾಡಿದ್ದರು. ಹೀಗೆ, ಮೂರು ಬಾರಿ ನಿಷೇಧಗೊಂಡರೂ 100 ವರ್ಷ ಪೂರೈಸಿ ಫಲಕೊಡುತ್ತಿದೆ. ಇದನ್ನು ಕಾಂಗ್ರೆಸ್ ನವರಿಗೆ ಸಹಿಸಿಕ್ಕೊಳ್ಳಲು ಆಗುತ್ತಿಲ್ಲ. ಹೀಗಾಗಿ, ಬೆಳಗ್ಗೆಯಿಂದ ಸಂಜೆಯವರೆಗೂ ಆರ್ ಎಸ್ ಎಸ್ ವಿರೋಧಿಸುವುದೇ ಕಾಂಗ್ರೆಸ್ ಮನಸ್ಥಿತಿ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಜಗದೀಶ ಶೆಟ್ಟರ್ ವಾಗ್ದಾಳಿ ನಡೆಸಿದರು. ನಗರದಲ್ಲಿಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘‘ಆಂಧ್ರಪ್ರದೇಶ ಸರಕಾರ ಆರ್ ಎಸ್ ಎಸ್ ಬ್ಯಾನ್ ಮಾಡಿದ್ದಕ್ಕೆ ಹೈಕೋರ್ಟ್ ನಿಂದ ಛೀಮಾರಿ ಹಾಕಿಸಿಕೊಂಡಿತ್ತು. ಸಚಿವ ದಿನೇಶ ಗುಂಡೂರಾವ್ ಇದನ್ನು ತಿಳಿದಂತಿಲ್ಲ. ಸಚಿವ ಪ್ರಿಯಾಂಕ್ ಖರ್ಗೆ ರಾಜಕೀಯವಾಗಿ ಬಿಜೆಪಿ ವಿರುದ್ಧ ಹೋರಾಟ ಮಾಡಲಿ. ಆದರೆ, ಆರ್ ಎಸ್ ಎಸ್ ವಿರುದ್ದ ಏಕೆ ಮಾತನಾಡುತ್ತಿದ್ದಾರೆ ಎನ್ನುವುದು ಗೊತ್ತಾಗುತ್ತಿಲ್ಲ. ಅವರ ಚೈಲ್ಡೀಶ್ ಬುದ್ಧಿ ಮತ್ತು ಅಹಂಕಾರದಿಂದಲೇ ಮಲ್ಲಿಕಾರ್ಜುನ ಖರ್ಗೆ ಸೋತಿದ್ದಾರೆ. ಕ್ರಿಮಿನಲ್ ಬುದ್ಧಿಯಿಂದ ಆರ್ ಎಸ್ ಎಸ್ ಬಗ್ಗೆ ಟೀಕೆ ಮಾಡುವುದರಿಂದ ಅವರ ವ್ಯಕ್ತಿತ್ವವೇ ಹಾಳುಗುತ್ತದೆ ಹೊರತು, ಸಂಘ ಬಗ್ಗುವುದಿಲ್ಲ,’’ ಎಂದು ಶೆಟ್ಟರ್ ಹೇಳಿದರು.

(ಜಗದೀಶ್ ಶೆಟ್ಟರ್ ಫೋಟೊ)

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ