ತುಮುಲ್ ನಲ್ಲಿಅಧಿಕಾರ ಬದಲಾವಣೆ ಚರ್ಚೆ

Contributed byshashidonihaklu@gmail.com|Vijaya Karnataka
Subscribe

ತುಮಕೂರು ಹಾಲು ಒಕ್ಕೂಟದಲ್ಲಿ (ತುಮುಲ್) ರಾಜಕೀಯ ಬಿರುಗಾಳಿ ಎದ್ದಿದೆ. ಮಧುಗಿರಿ ನಿರ್ದೇಶಕರ ಆಯ್ಕೆ ಹೈಕೋರ್ಟ್‌ನಿಂದ ಅಸಿಂಧುಗೊಂಡಿದೆ. ಇದರಿಂದ ಅಧ್ಯಕ್ಷ ಎಚ್.ವಿ. ವೆಂಕಟೇಶ್ ಅವರ ಸ್ಥಾನಕ್ಕೂ ಸಂಚಕಾರ ಎದುರಾಗಿದೆ. ಪಾವಗಡದಲ್ಲಿ ಮತ ಮರು ಎಣಿಕೆಗೆ ಆದೇಶ ನೀಡಲಾಗಿದೆ. ಇದರಿಂದ ಕಾಂಗ್ರೆಸ್ ಎರಡು ಸ್ಥಾನಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಜೆಡಿಎಸ್-ಬಿಜೆಪಿ ಮೈತ್ರಿ ಬಲ ಹೆಚ್ಚಿಸಿಕೊಂಡಿದೆ. ಇದರಿಂದ ತುಮುಲ್ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟ್ಟಿದೆ.

discussion on power change in tumkur

ವಿಕ ಸುದ್ದಿಲೋಕ ತುಮಕೂರು ತುಮಕೂರು ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ (ತುಮುಲ್ ) ಮಧುಗಿರಿ ತಾಲೂಕು ನಿರ್ದೇಶಕ ಬಿ.ನಾಗೇಶ್ ಬಾಬು ಆಯ್ಕೆಯನ್ನು ಹೈಕೋರ್ಟ್ ಅಸಿಂಧುಧಿಗೊಳಿಸಿದೆ. ಈ ಬೆನ್ನಲ್ಲೇ ಈಗ ಅಧ್ಯಕ್ಷ ಎಚ್ .ವಿ.ವೆಂಕಟೇಶ್ ಸ್ಥಾನಕ್ಕೆ ಕುತ್ತುಬರುವ ಸಾಧ್ಯತೆಯೂ ಎದುರಾಗಿದೆ. ತುಮುಲ್ ಮಧುಗಿರಿ ನಿರ್ದೇಶಕರಾಗಿ ಚುನಾಯಿತರಾಗಿದ್ದ ಕಾಂಗ್ರೆಸ್ ಬೆಂಬಲಿತ ಬಿ.ನಾಗೇಶ್ ಬಾಬು ಆಯ್ಕೆಯನ್ನು ಹೈಕೋರ್ಟ್ ಅಸಿಂಧುಗೊಳಿಸಿದ್ದು, ಪ್ರತಿಸ್ಪರ್ಧಿ ಮೈತ್ರಿಯ ಕೊಂಡವಾಡಿ ಚಂದ್ರಶೇಖರ್ ಸದ್ಯದಲ್ಲೇ ನೂತನ ನಿರ್ದೇಶಕರಾಗಿ ಅಧಿಕೃತ ಘೋಷಣೆಯಾಗಲಿದ್ದಾರೆ. ಅಲ್ಲದೆ ಪಾವಗಡ ತಾಲೂಕಿನ ಮತ ಮರು ಎಣಿಕೆಗೂ ಹೈಕೋರ್ಟ್ ಆದೇಶಿಸಿದ್ದು, ಅಲ್ಲಿಒಂದೇ ಒಂದು ಮತದ ಅಂತರದಿಂದ ಗೆದ್ದಿರುವ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಚಂದ್ರಶೇಖರ ರೆಡ್ಡಿ ಹಿನ್ನಡೆ ಅನುಭವಿಸಿ ಜೆಡಿಎಸ್ -ಬಿಜೆಪಿ ದೋಸ್ತಿ ಬೆಂಬಲಿತ ಅಭ್ಯರ್ಥಿ ಚನ್ನಮಲ್ಲಯ್ಯ ಗೆಲುವಿನ ನಗೆ ಬೀರಿದರೆ ಕಾಂಗ್ರೆಸ್ ಎರಡು ಸ್ಥಾನಗಳನ್ನು ಕಳೆದುಕೊಂಡಂತಾಗುತ್ತದೆ. ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿಜೆ.ಸಿ. ಮಾಧುಸ್ವಾಮಿ ಬಣದ ಬಿ.ಎನ್ .ಶಿವಪ್ರಕಾಶ್ ಬೆಂಬಲ ಸೇರಿ ಕಾಂಗ್ರೆಸ್ 7 ನಿರ್ದೇಶಕರ ಬಲ ಹೊಂದಿತ್ತು. ಮಧುಗಿರಿ, ಪಾವಗಡ ಕಳೆದುಕೊಂಡರೆ 5ಕ್ಕೆ ಕುಸಿಯಲಿದೆ. ಅಲ್ಲದೆ ಬಿ.ಎನ್ .ಶಿವಪ್ರಕಾಶ್ ‘ದೋಸ್ತಿ’ಗೆ ಕೈಜೋಡಿಸಿಧಿದರೆ ಕಾಂಗ್ರೆಸ್ ಗೆ ಚುನಾಯಿತರ ಬಲ 4. ಮಾಜಿ ಅಧ್ಯಕ್ಷ ತುರುವೇಕೆರೆಯ ಸಿ.ವಿ.ಧಿಮಹಾ ಲಿಂಗಯ್ಯ ಒಲವು ಕೂಡ ದೋಸ್ತಿ ಕಡೆಗಿದ್ದು, ಆ ದಾರಿಯಲ್ಲಿಮತ್ತೆ ಅಧ್ಯಕ್ಷರಾದರೆ ಅಚ್ಚರಿಯಿಲ್ಲ. ಹಾಗಾಗಿ, ನಾಮನಿರ್ದೇಶಿತ ನಿರ್ದೇಶಕರಾಗಿ ತುಮುಲ್ ಅಧ್ಯಕ್ಷರಾಗಿರುವ ಪಾವಗಡ ಶಾಸಕ ಎಚ್ .ವಿ. ವೆಂಕಟೇಶ್ ಅವರು ಬಲ ಪ್ರದರ್ಶಿಸಿ ಮುಂದುವರಿಯಧಿಬೇಕಾದ ಅಗ್ನಿಪರೀಕ್ಷೆ ಎದುರಾಗುವ ಸಾಧ್ಯತೆಯಿದೆ.

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ