ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬಧಿದ್ಧ
* ಸಂಸದ ಶ್ರೇಯಸ್ ಪಟೇಲ್ ಹೇಧಿಳಿಧಿಕೆಧಿ*ಧಿಹಧಿಲವು ಅಧಿಭಿಧಿವೃದ್ಧಿ ಕಾಧಿಮಧಿಗಾಧಿರಿಗೆ ಚಾಧಿಲಧಿನೆ
ವಿಕ ಸುದ್ದಿಲೋಕ ಹಾಸನ
ಸಂಸದರ ಅನುದಾನದಲ್ಲಿಹಂತ ಹಂತವಾಗಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದರ ಮೂಲಕ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಸಂಸದ ಶ್ರೇಯಸ್ ಎಂ. ಪಟೇಲ್ ತಿಳಿಸಿದರು.
ಹೊಳೆನರಸೀಪುರ ತಾಲೂಕಿಧಿನ ಮಾರಗೌಡನಹಳ್ಳಿ, ಚಿಟ್ಟನಹಳ್ಳಿ, ಲಕ್ಷ್ಮೇಪುರ, ಲಕ್ಕೂರು, ಬಿಲ್ಲೆನಹಳ್ಳಿ, ಚಿಗಹಳ್ಳಿ, ಗ್ರಾಮಗಳಲ್ಲಿಸಂಸದರ ಅನುದಾನದಲ್ಲಿಕೈಗೆತ್ತಿಕೊಂಡಿರುವ ಬಸ್ ನಿಲ್ದಾಣ, ಕಾಂಕ್ರೀಟ್ ರಸ್ತೆ ಕಾಮಗಾರಿ, ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಶಂಕು ಸ್ಥಾಪನೆ ಸ್ಥಾಪನೆ ನೆರವೇರಿಸಿ ಮಾತನಾಡಿದರು.
‘‘ರಾಜ್ಯ ಸರಕಾರ ಅಸ್ತಿತ್ವಕ್ಕೆ ಬಂದ ತಕ್ಷಣ ವರ್ಷಕ್ಕೆ 56 ಸಾವಿರ ಕೋಟಿ ರೂ. ವೆಚ್ಚ ಮಾಡಿ ನಮ್ಮ ರಾಜ್ಯದ ಕೋಟ್ಯಂತರ ಕುಟುಂಬಗಳಿಗೆ ಅನುಕೂಲವಾಗುವಂತೆ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುವುದರ ಮೂಲಕ ಕಾರ್ಯಗತಗೊಳಿಸುವತ್ತ ಯಶಸ್ವಿ ಪಾತ್ರವಹಿಸಿದೆ. ಈ ಅಂಶವನ್ನು ತಾವುಗಳೆಲ್ಲರೂ ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳುವುದರ ಮೂಲಕ ನಮ್ಮ ಸರಕಾರದ ಸಾಧನೆ ಕುರಿತು ಜಾಗೃತಿ ಮೂಡಿಸುವತ್ತ ದಿಟ್ಟ ಹೆಜ್ಜೆ ಹಾಕಬೇಕು,’’ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್ . ಟಿ.ಲಕ್ಷ್ಮಣ, ಪುರಸಭೆ ಮಾಜಿ ಅಧ್ಯಕ್ಷ ಎಚ್ .ವಿ.ಪುಟ್ಟರಾಜು, ಎಂಜಿನಿಯರ್ ಪ್ರಶಾಂತ್ , ಪಾರ್ವತಿ, ಮುಖಂಡರಾದ ರವಿಕುಮಾರ್ , ಬಸವರಾಜು, ಕೃಷ್ಣಪ್ಪ, ಶಿವಣ್ಣ, ಸೇರಿದಂತೆ ಹಲವರು ಹಾಜರಿದ್ದರು.
ಫೋಟೊ
ಹೊಳೆನರಸೀಪುರ ತಾಲೂಕು ಮಾರಗೌಡನಹಳ್ಳಿ, ಚಿಟ್ಟನಹಳ್ಳಿ ಮತ್ತಿತರ ಗ್ರಾಮಗಳಲ್ಲಿನಾನಾ ಅಧಿಭಿಧಿವೃದ್ಧಿ ಕಾಧಿಮಧಿಗಾಧಿರಿಗೆ ಸಂಸದ ಶ್ರೇಯಸ್ ಎಂ.ಪಟೇಲ್ ಶಂಕುಸ್ಥಾಪನೆ ನೆರವೇರಿಸಿದರು.

