ಮತದಾರ ನೋಂದಣಿಗೆ ಸೂಚನೆ

Contributed bysantoshettyp@gmail.com|Vijaya Karnataka
Subscribe

ಧಾರವಾಡ, ಹಾವೇರಿ, ಗದಗ, ಉತ್ತರಕನ್ನಡ ಜಿಲ್ಲೆಯ ಪದವೀಧರರು ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ನೋಂದಣಿ ಮಾಡಿಕೊಳ್ಳಲು ನ.6 ಕೊನೆಯ ದಿನವಾಗಿದೆ. 2022ರ ನ.1ಕ್ಕೂ ಮೊದಲು ಪದವಿ ಪಡೆದವರು ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಬಿಜೆಪಿ ಮಹಿಳೆಗೆ ಟಿಕೆಟ್ ನೀಡಿದರೆ, ಪ್ರಜ್ಞಾವಂತ ಪದವೀಧರರು ಬೆಂಬಲಿಸಿದರೆ, ಬೀಬಿ ಆಯೇಷಾ ಮಹ್ಮದಸಾದಿಕ ಮುಜಾವರ ವಿಧಾನ ಪರಿಷತ್ತಿನಲ್ಲಿ ಪದವೀಧರರ ಸಮಸ್ಯೆಗಳಿಗೆ ಧ್ವನಿಯಾಗುವುದಾಗಿ ತಿಳಿಸಿದ್ದಾರೆ. ರೈತರು, ಶೋಷಿತರಿಗೆ ನ್ಯಾಯ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದಿದ್ದಾರೆ.

voters registration notification for the first time re education for degree holders

ವಿಕ ಸುದ್ದಿಲೋಕ ರಾಣೇಬೆನ್ನೂರ

ವಿಧಾನ ಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯ ಮತದಾರರ ಪಟ್ಟಿಗೆ ಅರ್ಹ ಪದವೀಧರ ಮತದಾರರು ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಬಿಜೆಪಿ ಟಿಕೆಟ್ ಆಕಾಂಕ್ಷಿ ಬೀಬಿ ಆಯೇಷಾ ಮಹ್ಮದಸಾದಿಕ ಮುಜಾವರ ಮನವಿ ಮಾಡಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಧಾರವಾಡ, ಹಾವೇರಿ, ಗದಗ ಮತ್ತು ಉತ್ತರಕನ್ನಡ ಜಿಲ್ಲೆಯ ಪದವೀಧರರು ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಹೆಸರು ನೋಂದಾಯಿಸಿಕೊಳ್ಳಲು ನ.6 ಕೊನೆಯ ದಿನವಾಗಿದೆ. ಹೀಗಾಗಿ 2022 ನ.1ಕ್ಕೂ ಮೊದಲು ಪದವಿಯಲ್ಲಿತೇರ್ಗಡೆಯಾಗಿರುವವರು ಘಟಿಕೋತ್ಸವ ಪ್ರಮಾಣ ಪತ್ರ/ ಮೂರು ವರ್ಷದ ಪದವಿಯ ಅಂಕಪಟ್ಟಿ, ಆಧಾರ್ ಕಾರ್ಡ್ , ಮತದಾರರ ಗುರುತಿನ ಚೀಟಿಗಳನ್ನು ಗೆಜೆಟೆಡ್ ಅಧಿಕಾರಿಗಳಿಂದ ದೃಢೀಕರಿಸಿಕೊಂಡು ಇತ್ತೀಚಿನ ಎರಡು ಕಲರ್ ಫೋಟೋದೊಂದಿಗೆ ಚುನಾವಣಾ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿ ಸ್ವೀಕೃತಿ ಪಡೆಯಬಹುದು ಎಂದರು.

ಬಿಜೆಪಿ ಮಹಿಳೆಗೆ ಟಿಕೆಟ್ ನೀಡಿದರೆ ಮತ್ತು ಪ್ರಜ್ಞಾವಂತ ಪದವಿಧರರು ಚುನಾವಣೆಯಲ್ಲಿನನ್ನನ್ನು ಬೆಂಬಲಿಸಿದರೆ ಪದವೀಧರರ ಸಮಸ್ಯೆಗಳಿಗೆ ವಿಧಾನ ಪರಿಷತನಲ್ಲಿಧ್ವನಿಯಾಗಿರುತ್ತೇನೆ. ರೈತರು, ಶೋಷಿತರಿಗೆ ನ್ಯಾಯ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಫೋಟೊ 31-ಆರ್ ಎನ್ ಆರ್ -01

ಬೀಬಿ ಆಯೇಷಾ ಮಹ್ಮದಸಾದಿಕ ಮುಜಾವರ.

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ