ಗೋಕುಲಂ ಗೋಶಾಲೆಯಲ್ಲಿ‘ಗಾಯನ ಅಭಿಷೇಕ’

Contributed byprasadsarali@gmail.com|Vijaya Karnataka
Subscribe

ಬೇಕಲದ ಗೋಕುಲಂ ಗೋಶಾಲೆಯಲ್ಲಿ ನಡೆದ ದೀಪಾವಳಿ ಸಂಗೀತೋತ್ಸವದ ಏಳನೇ ದಿನ ಯುವ ಗಾಯಕ ಅಭಿಷೇಕ್‌ ರಘುರಾಮ್‌ ತಮ್ಮ ಗಾಯನದಿಂದ ಪ್ರೇಕ್ಷಕರನ್ನು ರಂಜಿಸಿದರು. ಪಂಥುವರಾಳಿ ರಾಗವನ್ನು ಅವರು ವಿಸ್ತಾರವಾಗಿ ಹಾಡಿದರು. ಆರನೇ ದಿನ ಕಥಕ್ಕಳಿ ಕರ್ನಾಟಿಕ್‌ ಜುಗಲ್‌ಬಂದಿ ಕಲಾಪ್ರಿಯರಿಗೆ ಹೊಸ ಅನುಭವ ನೀಡಿತು. ವಿವಿಧ ಕಲಾವಿದರು ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

young singer abhishek raghuram performs carnatic kathakali at deepavali music festival

ಪೆರಿಯ: ಬೇಕಲ ಗೋಕುಲಂ ಗೋಶಾಲೆಯಲ್ಲಿನಡೆಯುತ್ತಿರುವ ದೀಪಾವಳಿ ಸಂಗೀತೋತ್ಸವದ ಏಳನೇ ದಿನದಂದು ಕರ್ನಾಟಕ ಶಾಸ್ತ್ರೀಯ ಸಂಗೀತದ ಯುವ ಗಾಯಕ ಅಭಿಷೇಕ್ ರಘುರಾಮ್ ತನ್ನ ಗಾಯನ ಶೈಲಿಯಿಂದ ಪ್ರೇಕ್ಷಕರ ಮನಗೆದ್ದರು.

ಪಂಥುವರಾಲಿ ರಾಗವನ್ನು ವಿಸ್ತಾರವಾಗಿ ಹಾಡಿದ ಅವರಿಗೆ ಬೆಂಗಳೂರಿನ ಅರ್ಜುನ್ ಕುಮಾರ್ ಮೃದಂಗದಲ್ಲಿ, ಡಾ.ಸುರೇಶ್ ವೈದ್ಯನಾಥನ್ ಘಟಂನಲ್ಲಿಹಾಗೂ ಎಲ್ .ರಾಮಕೃಷ್ಣನ್ ಪಿಟೀಲಿನಲ್ಲಿಸಾಥ್ ನೀಡಿದರು.

ಆರನೇ ದಿನ ನಡೆದ ಕಥಕ್ಕಳಿ ಕರ್ನಾಟಿಕ್ ಜುಗಲ್ ಬಂದಿ ಕಲಾಪ್ರಿಯರಿಗೆ ಹೊಸ ಅನುಭವ ನೀಡಿತು. ನೆಡುಂಪಲ್ಲಿರಾಮಮೋಹನ್ ಮತ್ತು ಶ್ರೀರಾಗ್ ವರ್ಮಾ ಕಥಕ್ಕಳಿ ಪ್ರದರ್ಶಿಸಿದರು. ದೀಪಾ ರಾಮಮೋಹನ್ ನಂದಿ ಮಂಟಪದಲ್ಲಿಕರ್ನಾಟಕ ಸಂಗೀತ ಹಾಡಿದರು.

ಏಳನೇ ದಿನ ಮಂಟಪದಲ್ಲಿಪಾರ್ವತಿ ಮರಂಗಾಡ್ , ಚೈತ್ರಾ ಅರವಿಂದ್ , ವಾಚಸ್ಪತಿ ಬೋನಾಳ, ಪಟ್ಟಾಭಿರಾಮ ಪಂಡಿತ್ , ಮಾನಸ ಶಾಸ್ತ್ರಿ, ಉಮೇಶ ಚೌಧರಿ ಗಾಯನ ನಡೆಸಿಕೊಟ್ಟರು. ಇಮಾನಿ ಲಲಿತಾ ಕೃಷ್ಣ ಪೂರ್ಣಿಮಾ ಕೃಷ್ಣ ಅವರಿಂದ ವೀಣಾ ವೇಣುಗಾನ, ಬೋನಾಳ ಶಂಕರ ಪ್ರಕಾಶ್ ಅವರಿಂದ ವೀಣಾ ಕಛೇರಿ ನಡೆಯಿತು.

ಫೊಟೋ 27 ಬಿಎ ಗೋಕುಲಂ

ಯುವ ಗಾಯಕ ಅಭಿಷೇಕ್ ರಘುರಾಮ್ ಸಂಗೀತ ಕಛೇರಿ ನಡೆಸಿಕೊಟ್ಟರು.

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ