ಅಫಜಲಪುರ ಸುದ್ದಿ

Contributed byskchoudhari121@gmail.com|Vijaya Karnataka
Subscribe

ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್ ಕಾರ್ಯಕ್ರಮಗಳಿಗೆ ಸರ್ಕಾರಿ ಸ್ಥಳಗಳಲ್ಲಿ ಅವಕಾಶ ನೀಡಬಾರದೆಂದು ಪತ್ರ ಬರೆದಿದ್ದಾರೆ. ಇದಕ್ಕೆ ಬಿಜೆಪಿ ಮತ್ತು ಸಂಘ ಪರಿವಾರದವರು ಸಚಿವರನ್ನು ವೈಯಕ್ತಿಕವಾಗಿ ಟೀಕಿಸುತ್ತಿದ್ದಾರೆ. ಕೆಕೆಆರ್‌ಟಿಸಿ ಅಧ್ಯಕ್ಷ ಅರುಣಕುಮಾರ ಎಂ.ವೈ.ಪಾಟೀಲ್ ಅವರು ಸಚಿವರ ಬೆಂಬಲಕ್ಕೆ ನಿಂತಿದ್ದಾರೆ. ಸಚಿವರು ಒಂಟಿಯಲ್ಲ, ದೇಶಭಕ್ತರು ಅವರೊಂದಿಗೆ ಇದ್ದಾರೆ ಎಂದು ಹೇಳಿದ್ದಾರೆ.

afzalpur news

ವಿಕ ಸುದ್ದಿಲೋಕ ಅಫಜಲಪುರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ 100ನೇ ವರ್ಷಾಚರಣೆ ಕಾರ್ಯಕ್ರಮಗಳನ್ನು ಸರ್ಕಾರಿ ಶಾಲೆ, ಕಾಲೇಜು, ಮುಜರಾಯಿ ಇಲಾಖೆ ದೇವಸ್ಥಾನಗಳು,ಸರ್ಕಾರಿ ಜಾಗಗಳಲ್ಲಿಮಾಡಲು ಅವಕಾಶ ಕೊಡಬಾರದು ಎಂದು ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಸರ್ಕಾರಕ್ಕೆ ಪತ್ರ ಬರೆದ ಹಿನ್ನೆಲೆ ಬಿಜೆಪಿ,ಸಂಘ ಪರಿವಾರದ ಜನರು ಸಚಿವರ ಬಗ್ಗೆ ವಯಕ್ತಿಕ ಟೀಕೆಗೆ ಇಳಿದಿದ್ದಾರೆ. ಇದಕ್ಕೆ ಹೆದರುವ ಗಂಡು ಪ್ರಿಯಾಂಕ್ ಖರ್ಗೆಯವರು ಇಲ್ಲ, ಇಂಥವರನ್ನು ಬಹಳ ಜನರನ್ನು ಅವರು ನೋಡಿದ್ದಾರೆ.ಸಚಿವ ಪ್ರಿಯಾಂಕ್ ಖರ್ಗೆ ಬೆನ್ನಿಗೆ ನಾವು ಇದ್ದೇವೆ ಎಂದು ಕೆಕೆಆರ್ ಟಿಸಿ ಅಧ್ಯಕ್ಷ ಅರುಣಕುಮಾರ ಎಂ.ವೈ.ಪಾಟೀಲ್ ಹೇಳಿದರು. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಸಚಿವ ಪ್ರಿಯಾಂಕ್ ಖರ್ಗೆಯವರಿಗೆ ನಿರಂತರವಾಗಿ ದೂರವಾಣಿ ಕರೆ ಮಾಡಿ ಅವಾಚ್ಯ ಪದಗಳಿಂದ ನಿಂದಿಸಿ ಜೀವ ಬೆದರಿಕೆ ಒಡ್ಡುತ್ತಿದ್ದಾರೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ವಿರೋಧಿ ನಡೆಯಾಗಿದೆ. ಸೈದ್ಧಾಂತಿಕವಾಗಿ ಎದುರಿಸಲಾಗದ ರಣ ಹೇಡಿಗಳು ವಯಕ್ತಿಕ ನಿಂದನೆಗೆ ಇಳಿದಿದ್ದು ಅತ್ಯಂತ ಹೇಯ ಕೃತ್ಯವಾಗಿದೆ. ಬಿಜೆಪಿ ಕೃಪಾ ಪೋಷಿತ ಉಡಾಳರ ಗುಂಪು ನಿಂದಿಸುವುದು, ಬೆದರಿಕೆ ಒಡ್ಡುವುದರಿಂದ ಸಚಿವ ಪ್ರಿಯಾಂಕ್ ಖರ್ಗೆ ಧ್ವನಿ ಅಡಗಿಸಬೇಕೆಂದುಕೊಳ್ಳುವುದು ಅವರ ಮೂರ್ಖತನದ ಪರಮಾವಧಿಯಾಗಿದೆ ಎಂದರು. ಪ್ರಿಯಾಂಕ್ ಖರ್ಗೆ ಸರ್ವ ಜನಾಂಗದ ನಾಯಕರಾಗಿದ್ದಾರೆ.ಅವರು ಹಿಂದು ಧರ್ಮ ವಿರೋಧಿ ಅಲ್ಲ.ಒಂದು ರಾಜಕೀಯ ಸಿದ್ದಾಂತಕ್ಕೆ ಜನ್ಮ ನೀಡಿದ ಸಂಘದ ವಿರೋಧಿ ಆಗಿದ್ದಾರೆ.ಅದನ್ನು ಧರ್ಮಕ್ಕೆ ಹೋಲಿಕೆ ಮಾಡೋದೆ ಮೂರ್ಖತನ, ಸಚಿವ ಖರ್ಗೆ ಒಂಟಿಯಲ್ಲಅವರೊಂದಿಗೆ ನಾಡಿನ ದೇಶದ ಅಸಂಖ್ಯಾತ ದೇಶಭಕ್ತರು ಜೊತೆಗಿದ್ದೇವೆ.ದ್ವೇಷ ಕಾರುವ ಕೃಪಾ ಪೋಷಿತ ಕಂಪನಿಯಿಂದ ಎಲ್ಲಾ ಸಮುದಾಯದ ಜನ ಅಂತರ ಕಾಯ್ದುಕೊಂಡು ಸಮಾಜದ ಸ್ವಾಸ್ಥ್ಯ ಹಾಳಾಗದಂತೆ ನೋಡಿಕೊಳ್ಳಬೇಕಿದೆ. ಮೊದಲೆಲ್ಲಾ ಬಿಜೆಪಿ ಧೋರಣೆ ಮತ್ತದರ ಮಾತೃ ಸಂಘದ ಧೋರಣೆಗಳು ಕೇವಲ ಸೈದ್ಧಾಂತಿಕವಾಗಿ ಬಹುಜನರ ವಿರೋಧಿ ಆಗಿದ್ದವು.ಆದರೆ ತೀರಾ ಇತ್ತೀಚಿಗೆ ಪ್ರಜಾಪ್ರಭುತ್ವ ವಿರೋಧಿಯೂ ಆಗುತ್ತಿವೆ,ಅವರ ಮೂಲ ಉದ್ದೇಶ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡುವುದಾಗಿದೆ.ಧರ್ಮದ ಹೆಸರಲ್ಲಿಜನರ ದಾರಿ ತಪ್ಪಿಸುವುದಾಗಿದೆ.ಅವರ ಷಡ್ಯಂತ್ರಕ್ಕೆ ಯುವ ಸಮೂಹ ಹಾಳಾಗಬಾರದು.ದೇಶದಲ್ಲಿಶಾಂತಿ,ಸಾಮರಸ್ಯ ಉಳಿಸಲು,ಸಂವಿಧಾನದ ಆಶಯಗಳನ್ನು ಉಳಿಸಲು ಎದುರಾಗಿರುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಧ್ವನಿಗೆ ಧ್ವನಿಗೂಡಿಸೋಣ ಎಂದರು.

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ