ವರ್ತಕರಿಗೆ ಎಲ್ಲರೀತಿ ಅನುಕೂಲ ಮಾಡಿಕೊಡಿ

Contributed bymallugoudra461987@gmali.com|Vijaya Karnataka
Subscribe

ಬೆಳಗಾವಿ ಎಪಿಎಂಸಿಯಲ್ಲಿ ಲೈಸೆನ್ಸ್ ರದ್ದಾದ ಜೈ ಕಿಸಾನ್ ತರಕಾರಿ ಮಾರುಕಟ್ಟೆಯ ವರ್ತಕರಿಗೆ ಅನುಕೂಲ ಕಲ್ಪಿಸುವಂತೆ ಸಂಸದ ಜಗದೀಶ ಶೆಟ್ಟರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ನ್ಯಾಯಾಲಯದ ಆದೇಶ ಬರುವವರೆಗೆ ವರ್ತಕರಿಗೆ ಎಲ್ಲ ರೀತಿಯ ಸಹಕಾರ ನೀಡಬೇಕು. ಭಾನುವಾರದ ರೈತರ ಸಂತೆಯಲ್ಲಿ ಮೂರು ತಿಂಗಳವರೆಗೆ ವರ್ತಕರಿಗೆ ಅವಕಾಶ ನೀಡಬೇಕು. ಮಳಿಗೆ ಹಂಚಿಕೆಯಲ್ಲಿ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

provide all kinds of facilities to the traders of jai kisan special vegetable market

ವಿಕ ಸುದ್ದಿಲೋಕ ಬೆಳಗಾವಿ ಲೈಸೆನ್ಸ್ ರದ್ದಾದ ಜೈ ಕಿಸಾನ್ ತರಕಾರಿ ಖಾಸಗಿ ಮಾರುಕಟ್ಟೆಯ ವರ್ತಕರಿಗೆ ಬೆಳಗಾವಿ ಎಪಿಎಂಸಿಯಲ್ಲಿಒದಗಿಸಲಾದ ಸೌಲಭ್ಯಗಳ ಪರಿಶೀಲನೆಗಾಗಿ ಸಂಸದ ಜಗದೀಶ ಶೆಟ್ಟರ್ ಅವರು ಬುಧವಾರ ಎಪಿಎಂಸಿ ಆವರಣಕ್ಕೆ ಭೇಟಿ ನೀಡಿ ವರ್ತಕರು ಮತ್ತು ಎಪಿಎಂಸಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ‘‘ಮಳಿಗೆ ನೀಡುವುದಾಗಿ ಖಾಸಗಿ ಮಾರುಕಟ್ಟೆಯ ವರ್ತಕರನ್ನು ಇಲ್ಲಿಗೆ ಕರೆಯಿಸಿದ್ದಾರೆ. ಆದರೆ, ಇಲ್ಲಿ24 ಮಳಿಗೆ ಮಾತ್ರ ಖಾಲಿ ಇವೆ. ನಾವು 200ಕ್ಕೂ ಅಧಿಕ ವರ್ತಕರು ಇದ್ದೇವೆ. ಟೆಂಡರ್ ನಲ್ಲಿಎಲ್ಲರೂ ಮಳಿಗೆ ಪಡೆಯುವುದು ಸಾಧ್ಯವಿಲ್ಲ. ಬೇಸ್ ಮೆಂಟ್ ನಲ್ಲಿಮಳಿಗೆಗಳಿದ್ದು, ನಮ್ಮ ಸಮಸ್ಯೆ ಬಗೆಹರಿಸಬೇಕು,’’ ಎಂದು ವರ್ತಕರು ಆಗ್ರಹಿಸಿದರು. ಸಮಸ್ಯೆ ಆಲಿಸಿ ಮಾತನಾಡಿದ ಸಂಸದ ಜಗದೀಶ ಶೆಟ್ಟರ್ , ‘‘ನ್ಯಾಯಾಲಯದ ಅಂತಿಮ ಆದೇಶ ಬರುವವರೆಗೆ ಖಾಸಗಿ ಜೈ ಕಿಸಾನ್ ತರಕಾರಿ ಮಾರುಕಟ್ಟೆಯ ವರ್ತಕರಿಗೆ ಎಲ್ಲಅನುಕೂಲ ನೀಡಬೇಕು. ಮೂರು ತಿಂಗಳ ವರೆಗೆ ಭಾನುವಾರದ ರೈತರ ಸಂತೆಯಲ್ಲಿವರ್ತಕರಿಗೆ ಸಹಕರಿಸಬೇಕು. ಜತೆಗೆ ಮಳಿಗೆ ಹಂಚಿಕೆಯಲ್ಲಿಅನ್ಯಾಯ ಆಗದಂತೆ ಕ್ರಮವಹಿಸಬೇಕು,’’ಎಂದು ಸೂಚಿಸಿದರು.

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ