ಸೇಡಂ ಸುದ್ದಿ (ಗ್ರಾಮೀಣಕ್ಕೆ ಲೀಡ್ )

Contributed bysidduswami25@gmail.com|Vijaya Karnataka
Subscribe

ಸೇಡಂನಲ್ಲಿ ಕುಡಿತ, ಮಾದಕ ವಸ್ತು ಮತ್ತು ತಂಬಾಕು ಸೇವನೆ ನಿಯಂತ್ರಣಕ್ಕೆ ಮಹಿಳೆಯರ ಪಾತ್ರ ಮುಖ್ಯ ಎಂದು ಶಿವಯ್ಯಸ್ವಾಮಿ ಬಿಬ್ಬಳ್ಳಿ ಹೇಳಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜನಜಾಗೃತಿ ವೇದಿಕೆ ಸಹಯೋಗದಲ್ಲಿ ನಡೆದ ಸಮಾವೇಶದಲ್ಲಿ ಈ ವಿಷಯ ಪ್ರಸ್ತಾಪವಾಯಿತು. ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕೆ ಸಂಸ್ಥೆ ಶ್ರಮಿಸುತ್ತಿದೆ. ಕಾನೂನು ಅಡಿಯಲ್ಲಿ ವ್ಯವಹಾರ ಮಾಡುವ ಬಗ್ಗೆ ಮಹಾದೇವಪ್ಪ ದಿಡ್ಡಿಮನಿ ಮಾಹಿತಿ ನೀಡಿದರು. ಗಾಂಧಿಸ್ಮೃತಿ ಮತ್ತು ಜನಜಾಗೃತಿ ಜಾಥಾ ನಡೆಯಿತು.

the news of addiction women play a key role in controlling substance and tobacco consumption

ವಿಕ ಸುದ್ದಿಲೋಕ ಸೇಡಂ ಕುಡಿತ, ಮಾದಕ ವಸ್ತು ಮತ್ತು ತಂಬಾಕು ಸೇವನೆ ಸಮಾಜಕ್ಕೆ ಬೃಹತ್ ಪಿಡುಗಾಗಿ ಕಾಡುತ್ತಿದೆ. ಅದನ್ನು ನಿಯಂತ್ರಿಸುವಲ್ಲಿಮಹಿಳೆಯರ ಪಾತ್ರ ಮುಖ್ಯವಾಗಿದೆ ಎಂದು ಜಿಲ್ಲಾಜನಜಾಗೃತಿ ವೇದಿಕೆ ಉಪಾಧ್ಯಕ್ಷ ಶಿವಯ್ಯಸ್ವಾಮಿ ಬಿಬ್ಬಳ್ಳಿ ತಿಳಿಸಿದರು. ಪಟ್ಟಣದ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಪರಿಸರದಲ್ಲಿಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸೇಡಂ ಮತ್ತು ಚಿಂಚೋಳಿ ತಾಲೂಕು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ನಿವೃತ್ತ ಸರಕಾರಿ ನೌಕರರ ಸಂಘ, ವ್ಯಾಪಾರಸ್ಥರ ಸಂಘ, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಸಹಯೋಗದೊಂದಿಗೆ ಹಮ್ಮಿಕೊಂಡ ಗಾಂಧಿಸ್ಮೃತಿ ಮತ್ತು ಜನಜಾಗೃತಿ ಸಮಾವೇಶದಲ್ಲಿಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕುಡಿತ, ಮಾದಕ ವಸ್ತು ಮತ್ತು ತಂಬಾಕು ಸೆವನೆಯಂತಹ ದುಶ್ಚಟಗಳಿಂದ ಸಮಾಜದಲ್ಲಿಅನೇಕ ಸಮಸ್ಯೆಗಳು ತಲೆದೋರುತ್ತವೆ. ಸಂಸಾದಲ್ಲಿಯೂ ದುಷ್ಪರಿಣಾಮ ಬೀರುತ್ತದೆ. ಹಾಗಾಗಿ ದುಶ್ಚಟ ಮುಕ್ತ ಸಮಾಜ ನಿರ್ಮಾಣದ ಅಗತ್ಯವಿದೆ. ಈ ನಿಟ್ಟಿನಲ್ಲಿಧರ್ಮಸ್ಥಳ ಸಂಸ್ಥೆ ಶ್ರಮಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು. ಆರಕ್ಷಕ ವೃತ್ತ ನಿರೀಕ್ಷಕ ಮಹಾದೇವಪ್ಪ ದಿಡ್ಡಿಮನಿ ಮಾತನಾಡಿ, ಕಾನೂನಾತ್ಮಕ ವಿಚಾರಗಳ ಬಗ್ಗೆ, ಯೋಜನೆಯ ಕಾನೂನು ಅಡಿಯಲ್ಲಿಇರುವ ನಿಯಮಗಳ ಬಗ್ಗೆ, ಸದಸ್ಯರು ಕಾನೂನಿನ ತಿಳಿವಳಿಕೆಯನ್ನು ಅರಿತುಕೊಂಡು ಉತ್ತಮ ರೀತಿಯಲ್ಲಿವ್ಯವಹಾರ ಮಾಡುವ ಬಗ್ಗೆ ತಿಳಿಸಿದರು. ಜಿಲ್ಲಾನಿರ್ದೇಶಕ ಗಣಪತಿ ಮಾಳಂಜಿ ಮಾತನಾಡಿ, ಗಾಂಧಿಸ್ಮೃತಿ ಕಾರ್ಯಕ್ರಮದ ಬಗ್ಗೆ, ಯೋಜನೆಯ ಕಾರ್ಯಕ್ರಮಗಳ ಬಗ್ಗೆ, ಸ್ವಸಹಾಯ ಸಂಘದ ಪ್ರಯೋಜನದ ಬಗ್ಗೆ, ಯೋಜನೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾಜನಜಾಗೃತಿ ವೇದಿಕೆಯ ಅಧ್ಯಕ್ಷ ಸಿ.ಎನ್ . ಬಾಬಳಗಾಂವ ಮಾತನಾಡಿ, ಮಾಶಾಸನ ಕಾರ್ಯಕ್ರಮ, ಸುಜ್ಞಾನ ನಿಧಿ, ಶಿಷ್ಯವೇತನ, ಪ್ರಗತಿನಿಧಿ, ಜ್ಞಾನವಿಕಾಸ, ಗೆಳತಿ, ವಾತ್ಸಲ್ಯ, ಪ್ರಗತಿಬಂಧು, ಇತರೆ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು. ವೀರಶೈವ ಮಹಾಸಭಾದ ಅಧ್ಯಕ್ಷ ರಾಜಶೇಖರ ನಿಲಂಗಿ, ವರದಶಂಕರ ಸ್ವಾಮಿ ಹಿರೇಮಠ, ಕಾಶಪ್ಪ ಬಿ. ಪೂಜಾರಿ, ಶಿವಕುಮಾರ ಜಾಡರ್ , ಭಾಗ್ಯಲಕ್ಷ್ಮೀ ನಾಯಿಕೋಡಿ, ನರಸರೆಡ್ಡಿ, ರೇವಣಸಿದ್ಧ ಪಡಶಟ್ಟಿ, ಮಾರುತಿ ಗಂಜಿಗೇರಿ, ಗೋಪಾಲ, ಒಕ್ಕುಟದ ಅಧ್ಯಕ್ಷರು, ಸ್ವಸಹಾಯ ಸಂಘದ ಸದಸ್ಯರು, ಕೃಷಿ ಮೇಲ್ವಿಚಾರಕರು, ತಾಲೂಕು ವಿಚೇಕ್ಷಣ ಅಧಿಕಾರಿಗಳು, ಮೇಲ್ವಿಚಾರಕರು, ಸಿಬ್ಬಂದಿ ವರ್ಗ, ಸೇವಾ ಪ್ರತಿನಿಧಿಗಳು ಇತರರಿದ್ದರು. ಕಾರ್ಯಕ್ರಮಕ್ಕೂ ಮುನ್ನ ಬಸವೇಶ್ವರ ವೃತ್ತದ ಬಳಿ ಆರಕ್ಷಕ ಉಪನಿರಿಕ್ಷಕ ಉಪೇಂದ್ರಕುಮಾರ್ ಗಾಂಧಿಸ್ಮತಿ ಮತ್ತು ಜನಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು. ಬಸವೇಶ್ವರ ವೃತ್ತದಿಂದ ಪ್ರಾರಂಭವಾದ ಈ ಜಾಥಾ ಕೊತ್ತಲ ಬಸವೇಶ್ವರ ದೇವಸ್ಥಾನದವರೆಗೆ ನಡೆಯಿತು. ಚಿಂಚೋಳಿ ತಾಲೂಕಿನ ಯೋಜನಾಧಿಕಾರಿ ಶಕುಂತಲಾ ನಿರೂಪಿಸಿದರು. ಸೇಡಂ ತಾಲೂಕಿನ ಯೋಜನಾಧಿಕಾರಿ ಮಂಜುನಾಥ್ ಸ್ವಾಗತಿಸಿದರು. ಜಿಲ್ಲಾಜನಜಾಗೃತಿ ವೇದಿಕೆ ಸದಸ್ಯ ಸುರೇಶ ದೇಶಪಾಂಡೆ ವಂದಿಸಿದರು.

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ