ವಿಕ ಸುದ್ದಿಲೋಕ ಆಳಂದ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿವಿದ್ಯಾರ್ಥಿಗಳು ಸತತ ಅಧ್ಯಯನಶೀಲರಾಗಿ ಓದು ಮುಂದುವರಿಸಿದಾಗ ಮಾತ್ರ ಜೀವನದ ಭವಿಷ್ಯ ನಿರ್ಮಾಣವಾಗಲು ಸಾಧ್ಯ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ. ಶಿವಗಂಗಾ ರುಮ್ಮಾ ಹೇಳಿದರು. ಪಟ್ಟಣದ ಎ.ವಿ.ಪಾಟೀಲ್ ಕಲಾ, ವಿಜ್ಞಾನ, ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ2025-26 ನೇ ಸಾಲಿನ ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡೆ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ದೈನಂದಿನ ಚಟುವಟಿಕೆ ಉದ್ಘಾಟನೆ ಮತ್ತು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಮತ್ತು ಪುನಶ್ಚೇತನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಷ್ಟಪಟ್ಟು ಓದುವುದ ಕಿಂತ ಇಷ್ಟಪಟ್ಟು ಓದಬೇಕು, ಅಂದಾಗ ಮಾತ್ರ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು. ಕಾಲೇಜಿನ ಪ್ರಾಚಾರ್ಯ ಡಾ.ಎಸ್ .ಎಚ್ .ಹೊಸಮನಿ ಅವರು ಅಧ್ಯಕ್ಷತೆವಹಿಸಿ ಮಾತನಾಡಿದರು. ಪ್ರಾಧ್ಯಾಪಕರಾದ ಶರಣಬಸಪ್ಪ ಕಮ್ಮಾರ, ರಾಜಶೇಖರ ಬಾಬನೂರ, ಡಾ. ರಮೇಶ ಮಸರಬ್ , ಬಬ್ರುವಾಹನ ಪಾಟೀಲ್ , ಬಸವರಾಜ ಶ್ರೀಂಗೇರಿ, ರತ್ನಪ್ರಭಾ ಪಾಟೀಲ್ , ಟೀಕಪ್ಪ ಎಂ, ಜಯಪ್ರಕಾಶ ಭಾವಿಮನಿ, ಸಿದ್ರಾಮ ಬಿಜಾಪೂರ, ಪ್ರಮೋದ ಚಿಂಚನಸೂರ, ಸಂಗಮೇಶ ಸ್ವಾಮಿ ಇದ್ದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

