ನೆರೆ ಸಂತ್ರಸ್ತರಿಗೆ 2,500 ನೆರವಿನ ಕಿಟ್ ವಿತರಣೆ

Contributed bybhrahmanand.arali@timesgroup.com|Vijaya Karnataka
Subscribe

ಕಲಬುರಗಿ ಜಿಲ್ಲೆಯಲ್ಲಿ ನೆರೆಯಿಂದ ಸಂತ್ರಸ್ತರಾದವರಿಗೆ ಇನ್ಫೋಸಿಸ್‌ ಫೌಂಡೇಶನ್‌, ರಾಮಕೃಷ್ಣ ಆಶ್ರಮ ಮತ್ತು ರೋಟರಿ ಕ್ಲಬ್‌ ವತಿಯಿಂದ ಸುಮಾರು 2,500 ರೂ. ಮೌಲ್ಯದ ಮನೆ ಬಳಕೆಯ ವಸ್ತುಗಳ ಕಿಟ್‌ ವಿತರಿಸಲಾಗಿದೆ. ಹಿಪ್ಪರಗಿ, ಮಂದರವಾಡ, ಕೂಡಿ, ಹಾಗರಗುಂಡಗಿ, ಸರಡಗಿ(ಬಿ) ಹಾಗೂ ಫಿರೋಜಾಬಾದ್‌ ಗ್ರಾಮಗಳ ಸಂತ್ರಸ್ತರಿಗೆ ನೆರವು ನೀಡಲಾಗಿದೆ. ನಗರದ ಹಕ್ಕಿ ಪಿಕ್ಕಿ ಜನಾಂಗಕ್ಕೂ ಕಿಟ್‌ ಮೂಲಕ ಸಹಾಯ ಮಾಡಲಾಗಿದೆ. ಸರಕಾರದ ನೆರವು ತಲುಪಿಲ್ಲ ಎಂದು ದೂರಲಾಗಿದೆ.

around 2500 essential kits distributed to flood victims

ವಿಕ ಸುದ್ದಿಲೋಕ ಕಲಬುರಗಿ ಜಿಲ್ಲೆಯಲ್ಲಿಕಳೆದೆರಡು ತಿಂಗಳ ಹಿಂದೆ ಬಂದ ನೆರೆಯಿಂದ ಸಂತ್ರಸ್ತರಾದವರಿಗೆ ಇನ್ಫೋಸಿಸ್ ಫೌಂಡೇಶನ್ , ಪಾವಗಡದ ರಾಮಕೃಷ್ಣ ಆಶ್ರಮ ಮತ್ತು

ರೋಟರಿ ಕ್ಲಬ್ ಆಫ್ ಗುಲ್ಬರ್ಗ ಮಿಡ್ ಟೌನ್ ವತಿಯಿಂದ ಅಗತ್ಯ ವಸ್ತುಗಳ ಸುಮಾರು 850 ಕಿಟ್ ಹಂಚಿಕೆ ಮಾಡಲಾಗಿದೆ ಎಂದು ಕ್ಲಬ್ ಮಾಜಿ ಅಧ್ಯಕ್ಷೆ ಡಾ.ಸುಧಾ ಹಾಲಕಾಯಿ ತಿಳಿಸಿದರು. ನಗರದ ಪತ್ರಿಕಾ ಭವನದಲ್ಲಿಮಂಗಳವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿ, ನಿರಂತರ ಮಳೆ

ಹಾಗೂ ಮಹಾರಾಷ್ಟ್ರದ ಡ್ಯಾಂಗಳಿಂದ ಭೀಮೆಗೆ ನೀರು ಬಿಟ್ಟಿರುವ ಕಾರಣ ಜಿಲ್ಲೆಯ ಹಿಪ್ಪರಗಿ, ಮಂದರವಾಡ, ಕೂಡಿ, ಹಾಗರಗುಂಡಗಿ, ಸರಡಗಿ(ಬಿ) ಹಾಗೂ ಫಿರೋಜಾಬಾದ್ ಗ್ರಾಮಗಳಲ್ಲಿನ ಜನರು ಸಂಕಷ್ಠ ಅನುಭವಿಸುತ್ತಿದ್ದರು. ಈ ವೇಳೆ ಅಲ್ಲಿಗೆ ಬೇಟಿ ನೀಡಿದ ನಮ್ಮ ತಂಡ, ಎರಡು ಸಂಸ್ಥೆಗಳ ಸಹಯೋಗದಲ್ಲಿಸುಮಾರು 2,500 ರೂ. ಮನೆ ಬಳಕೆಯ ವಸ್ತುಗಳ ಕಿಟ್ ವಿತರಣೆ ಮಾಡಲಾಗಿದೆ. ನಗರದಲ್ಲಿವಾಸ ಮಾಡುವ ಹಕ್ಕಿ ಪಿಕ್ಕಿ ಜನಾಂಗದವರಿಗೂ ಕಿಟ್ ಮೂಲಕ ನೆರವು ನೀಡಲಾಗಿದೆ ಎಂದು ಹೇಳಿದರು. ಇನ್ಫೋಸಿಸ್ ನ ಸುಧಾ ಮೂರ್ತಿ ಮತ್ತು ಪಾವಗಡದ ರಾಮಕೃಷ್ಣ ಆಶ್ರಮದ ಜಪಾನಂದ ಸ್ವಾಮೀಜಿ ಅವರನ್ನು ಜಿಲ್ಲೆನೆರೆ ಸಂತ್ರಸ್ತರ ನೆರವಿಗೆ ಮನವಿ ಮಾಡಿದಾಗ ಅವರು ಸಹಾಯ ಮಾಡಿದ್ದರು. ಆದರೆ, ಸರಕಾರ ಮಾತ್ರ ಹೆಸರಿಗೆ ಮಾತ್ರ ಕಾಳಜಿ ಕೇಂದ್ರ ತೆರೆದಿದೆ. ಇಲ್ಲಿವರೆಗೆ ಬೇರೆ ಯಾವುದೇ ನೆರವು ನೀಡದೆ ನಿರ್ಲಕ್ಷ್ಯ ಮಾಡುತ್ತಿದೆ ಎಂದು ದೂರಿದರು. ರೋಟರಿ ಕ್ಲಬ್ ಆಫ್ ಗುಲ್ಬರ್ಗ ಮಿಡ್ ಟೌನ್ ಮಾಜಿ ಅಧ್ಯಕ್ಷ ಮುರಳೀಧರ ಮಾಗಲೂರ, ಮಾಜಿ ಖಜಾಂಚಿ ಸತೀಶ್ ಮುದಗಲ್ ಇದ್ದರು.

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ