ರಾಜ್ಯದಲ್ಲಿ32 ಸಾವಿರ ಕಟ್ಟಡಗಳು ಅಸುರಕ್ಷಿತ

Contributed bysuresha.yg@timesgroup.com|Vijaya Karnataka
Subscribe

ರಾಜ್ಯದ 32 ಸಾವಿರಕ್ಕೂ ಹೆಚ್ಚು ಬಹುಮಹಡಿ ಕಟ್ಟಡಗಳು ಅಗ್ನಿ ಸುರಕ್ಷತೆ ಇಲ್ಲದೆ ಅಪಾಯಕಾರಿಯಾಗಿವೆ. ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಈ ಸಮಸ್ಯೆ ಹೆಚ್ಚಾಗಿದೆ. ಕಟ್ಟಡ ಮಾಲೀಕರು ಎನ್‌ಒಸಿ ಮತ್ತು ಅಗ್ನಿ ಸುರಕ್ಷತಾ ಸಮಾಪನ ಪತ್ರ ಪಡೆಯದೆ ಕಟ್ಟಡಗಳನ್ನು ಬಳಸುತ್ತಿದ್ದಾರೆ. ಅಗ್ನಿಶಾಮಕ ಇಲಾಖೆ ನೋಟಿಸ್ ನೀಡಿದ್ದರೂ ನಿರ್ಲಕ್ಷ್ಯ ಮುಂದುವರೆದಿದೆ. ಇದು ಜನರ ಜೀವದ ಜತೆ ಚೆಲ್ಲಾಟವಾಗಿದೆ.

in the state 32 thousand disaster beginnings

* ಬಹುಮಹಡಿ ಕಟ್ಟಡಗಳಿಗೆ ಎನ್ ಒಸಿ, ಅಗ್ನಿ ಸುರಕ್ಷತಾ ಸಮಾಪನ ಪತ್ರವಿಲ್ಲ* ಜವಾಬ್ದಾರಿ ಮರೆತ ಮಾಲೀಕರು

ಜೆ.ಆರ್ .ಗಿರೀಶ್ ಬೆಂಗಳೂರು

ಜಜ್ಟಿಜಿsh.್ಜ್ಟಃಠಿಜಿಞಛಿsಟ್ಛಜ್ಞಿdಜಿa.್ಚಟಞ

ರಾಜ್ಯದ 32 ಸಾವಿರಕ್ಕೂ ಹೆಚ್ಚು ಬಹುಮಹಡಿ ಕಟ್ಟಡಗಳಲ್ಲಿಅಗ್ನಿ ಸುರಕ್ಷತೆಯನ್ನು ನಿರ್ಲಕ್ಷಿಸಲಾಗಿದ್ದು, ಇದು ಎಚ್ಚರಿಕೆಯ ಕರೆಗಂಟೆಯಾಗಿದೆ. ಅಗ್ನಿ ಸುರಕ್ಷತಾ ಸಮಾಪನ ಪತ್ರವೇ ಇಲ್ಲದೆ ಈ ಕಟ್ಟಡಗಳನ್ನು ಬಳಕೆ ಮಾಡಲಾಗುತ್ತಿದ್ದು, ಅಪಾಯಕಾರಿ ಕಟ್ಟಡಗಳು ಜನರ ಜೀವಕ್ಕೆ ಕಂಟಕವಾಗಿವೆ.

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಎರಡನೇ ಹಂತದ ನಗರಗಳ ಬಹುಮಹಡಿ ಕಟ್ಟಡಗಳಲ್ಲಿಅಗ್ನಿ ಅವಘಡಗಳು ಮರುಕಳಿಸುತ್ತಿದ್ದು, ಪದೇಪದೆ ಸಾವು ನೋವು ಸಂಭವಿಸುತ್ತಿವೆ. ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಎಚ್ಚರಿಕೆ ನಡುವೆಯೂ ಕಟ್ಟಡಗಳ ಮಾಲೀಕರು ಅಗ್ನಿ ಸುರಕ್ಷತೆಯನ್ನು ಉಪೇಕ್ಷಿಸಿ, ಜನರ ಜೀವದ ಜತೆ ಚೆಲ್ಲಾಟವಾಡುತ್ತಿದ್ದಾರೆ.

ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಮಾಹಿತಿ ಪ್ರಕಾರ, ರಾಜ್ಯದಲ್ಲಿಸುಮಾರು 60 ಸಾವಿರ ಬಹುಮಹಡಿ ಕಟ್ಟಡಗಳಿದ್ದು, ಈ ಪೈಕಿ ಶೇ.50ಕ್ಕೂ ಹೆಚ್ಚು ಕಟ್ಟಡಗಳು ಅಸುರಕ್ಷಿತವಾಗಿವೆ. ಬೆಂಗಳೂರಿನ ಜಿಬಿಎ, ಮೈಸೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ, ಬಳ್ಳಾರಿ, ವಿಜಯಪುರ, ದಾವಣಗೆರೆ, ಮಂಗಳೂರು, ಶಿವಮೊಗ್ಗ, ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿಇಲಾಖೆಯು ಸಮೀಕ್ಷೆ ನಡೆಸಿದ್ದು, ಈ ಕಟ್ಟಡಗಳಿಗೆ ಅಗ್ನಿ ಸುರಕ್ಷತಾ ಸಮಾಪನ ಪತ್ರವನ್ನೇ ಪಡೆಯದಿರುವ ಆತಂಕಕಾರಿ ಸಂಗತಿ ಬಯಲಾಗಿದೆ.

ಶೇ.53ರಷ್ಟು ಕಟ್ಟಡಗಳಲ್ಲಿಉಪೇಕ್ಷೆ:

ನೆಲಮಹಡಿ ಸೇರಿ ಏಳು ಅಂತಸ್ತಿನ ಕಟ್ಟಡ ಹಾಗೂ 15 ಮೀಟರ್ ಗಿಂತ ಎತ್ತರದ ಕಟ್ಟಡಗಳಲ್ಲಿಅಗ್ನಿ ಸುರಕ್ಷತಾ ಕ್ರಮಗಳಿರುವಂತೆ ನೋಡಿಕೊಳ್ಳುವುದು ಮಾಲೀಕರ ಜವಾಬ್ದಾರಿ. ಕರ್ನಾಟಕ ಅಗ್ನಿಶಾಮಕ ಸೇವೆಗಳ ಕಾಯಿದೆ-1964 ಹಾಗೂ ರಾಷ್ಟ್ರೀಯ ಕಟ್ಟಡ ನೀತಿಯಲ್ಲಿ(ಎನ್ ಬಿಸಿ) ಕಟ್ಟಡಗಳ ಸುರಕ್ಷತಾ ಕ್ರಮಗಳ ಬಗ್ಗೆ ಉಲ್ಲೇಖಿಸಲಾಗಿದೆ. ಹೊಸ ಕಟ್ಟಡ ನಿರ್ಮಿಸುವಾಗ ಮಾಲೀಕರು ಸಲ್ಲಿಸುವ ಅರ್ಜಿಯನ್ನು ಪರಿಶೀಲಿಸುವ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಅಧಿಕಾರಿಗಳು, ಅಗ್ನಿ ಸುರಕ್ಷತಾ ಮಾರ್ಗಸೂಚಿ ಪಾಲನೆಯ ಷರತ್ತಿನೊಂದಿಗೆ ನಿರಾಕ್ಷೇಪಣಾ ಪತ್ರ (ಎನ್ ಒಸಿ) ನೀಡುತ್ತಾರೆ.

ಕಟ್ಟಡ ಸಂಪೂರ್ಣ ನಿರ್ಮಾಣವಾದ ನಂತರ ಮಾಲೀಕರು ಮತ್ತೆ ಅಗ್ನಿಶಾಮಕ ಇಲಾಖೆಯಿಂದ ಅಗ್ನಿ ಸುರಕ್ಷತಾ ಸಮಾಪನ ಪ್ರಮಾಣಪತ್ರ ಪಡೆಯಬೇಕು. ಆ ನಂತರವೇ ಕಟ್ಟಡವನ್ನು ಬಳಕೆ ಮಾಡಬೇಕು. ಜತೆಗೆ, ಎರಡು ವರ್ಷಕ್ಕೊಮ್ಮೆ ಅಗ್ನಿ ಸುರಕ್ಷತಾ ಸಮಾಪನ ಪತ್ರವನ್ನು ನವೀಕರಿಸಿಕೊಳ್ಳಬೇಕು.

‘‘ರಾಜ್ಯದ ಶೇ.88ರಷ್ಟು ಬಹುಮಹಡಿ ಕಟ್ಟಡಗಳಿಗೆ ಎನ್ ಒಸಿ ಪಡೆಯಲಾಗಿದೆ. ಶೇ.53ರಷ್ಟು ಕಟ್ಟಡಗಳ ಮಾಲೀಕರು ಎನ್ ಒಸಿ ಮಾತ್ರ ಪಡೆದು, ಅಗ್ನಿ ಸುರಕ್ಷತಾ ಸಮಾಪನ ಪತ್ರವನ್ನು ಉಪೇಕ್ಷಿಸಿದ್ದಾರೆ. ಶೇ.12ರಷ್ಟು ಬಹುಮಹಡಿ ಕಟ್ಟಡಗಳಿಗೆ ಎನ್ ಒಸಿಯೂ ಇಲ್ಲ, ಅಗ್ನಿ ಸುರಕ್ಷತಾ ಸಮಾಪನ ಪತ್ರವನ್ನೂ ಪಡೆದಿಲ್ಲ. ಆದರೂ ಈ ಕಟ್ಟಡಗಳನ್ನು ವಾಣಿಜ್ಯ ವಹಿವಾಟು, ವಸತಿ, ಕಚೇರಿ ಸೇರಿದಂತೆ ವಿವಿಧ ಉದ್ದೇಶಕ್ಕೆ ಬಳಕೆ ಮಾಡಲಾಗುತ್ತಿದೆ,’’ ಎಂದು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

---ಬಾಕ್ಸ --

ಮಾಲೀಕರಿಗೆ ನೋಟಿಸ್ :

ಅಗ್ನಿ ಸುರಕ್ಷತಾ ಮಾರ್ಗಸೂಚಿ ಪಾಲಿಸದ, ಅಗ್ನಿ ಸುರಕ್ಷತಾ ಸಮಾಪನ ಪತ್ರ ಪಡೆಯದ ಹಾಗೂ ಕಾಲಕಾಲಕ್ಕೆ ನವೀಕರಿಸಿಕೊಳ್ಳದ ಬಹುಮಹಡಿ ಕಟ್ಟಡಗಳ ಮಾಲೀಕರಿಗೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯು ಈಗಾಗಲೇ ನೋಟಿಸ್ ಜಾರಿ ಮಾಡಿದೆ. ಕಟ್ಟಡಗಳ ಮಾಲೀಕರು ಈ ನೋಟಿಸ್ ಗೆ ಪ್ರತಿಕ್ರಿಯಿಸದಿದ್ದರೆ ಇಲಾಖೆಯು ಎರಡನೇ ಹಾಗೂ ಅಂತಿಮ ನೋಟಿಸ್ ಜಾರಿ ಮಾಡಲಿದೆ. ಆ ನಂತರವೂ ನಿರ್ಲಕ್ಷ್ಯ ಕಂಡು ಬಂದರೆ ಕಟ್ಟಡಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಇಂಧನ ಇಲಾಖೆಗೆ ಶಿಫಾರಸು ಮಾಡಲು ಅವಕಾಶವಿದೆ.

ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯು ಅಗ್ನಿ ಸುರಕ್ಷತೆ ವಿಚಾರದಲ್ಲಿಅಪಾಯಕಾರಿಯಾಗಿರುವ ಬಹುಮಹಡಿ ಕಟ್ಟಡಗಳನ್ನು ಈ ಹಿಂದೆಯೇ ಗುರುತಿಸಿತ್ತು. ಅಲ್ಲದೆ, ಪ್ರತಿ ಕಟ್ಟಡದ ಬಗ್ಗೆ ಪ್ರತ್ಯೇಕ ವರದಿ ಸಿದ್ಧಪಡಿಸಿ ಆಯಾ ಪಾಲಿಕೆಗಳಿಗೆ ಸಲ್ಲಿಸಿತ್ತು. ಜತೆಗೆ, ಈ ಕಟ್ಟಡಗಳ ವಾಣಿಜ್ಯ ಪರವಾನಗಿ ರದ್ದುಪಡಿಸುವಂತೆ ಶಿಫಾರಸು ಮಾಡಿತ್ತು. ಈ ವರದಿ ಮೂಲೆ ಸೇರಿದ್ದು, ಕಟ್ಟಡಗಳಲ್ಲಿಅಗ್ನಿ ಸುರಕ್ಷತೆ ಖಾತರಿಪಡಿಸುವಲ್ಲಿವ್ಯವಸ್ಥೆ ವಿಫಲವಾಗಿದೆ.

ಬಾಕ್ಸ್ ...

ಬೆಂಗಳೂರಲ್ಲೇ ಹೆಚ್ಚು

ರಾಜಧಾನಿ ಬೆಂಗಳೂರಿನಲ್ಲಿಬಹುಮಹಡಿ ಕಟ್ಟಡಗಳು (ಸುಮಾರು 42 ಸಾವಿರ) ಹೆಚ್ಚಿವೆ. ಈ ಪೈಕಿ 26 ಸಾವಿರಕ್ಕೂ ಹೆಚ್ಚು ಕಟ್ಟಡಗಳಲ್ಲಿಅಗ್ನಿ ಸುರಕ್ಷತಾ ವ್ಯವಸ್ಥೆಯೇ ಇಲ್ಲ. ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಆಡಿಟಿಂಗ್ ಪ್ರಕಾರ, 12 ಸಾವಿರ ಕಟ್ಟಡಗಳ ಮಾಲೀಕರು ಎನ್ ಒಸಿ ಮಾತ್ರ ಪಡೆದಿದ್ದಾರೆ. ಉಳಿದ ಸುಮಾರು 30 ಸಾವಿರ ಕಟ್ಟಡಗಳಿಗೆ ಎನ್ ಒಸಿಯೂ ಇಲ್ಲಹಾಗೂ ಅಗ್ನಿ ಸುರಕ್ಷತಾ ಸಮಾಪನ ಪತ್ರವನ್ನೂ ಪಡೆದಿಲ್ಲ.

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ