ಶಹಾಬಾದ್ ಸುದ್ದಿ

Contributed byvasu.chavan1234@gmail.com|Vijaya Karnataka
Subscribe

ಚಿತ್ತಾಪೂರ ಮತಕ್ಷೇತ್ರದ ಮುಗಳನಾಗಾವಿ ಕೆರೆಗೆ ಕಾಗಿಣಾ ನದಿಯಿಂದ ನೀರು ಹರಿಸುವ ಮಹತ್ವಪೂರ್ಣ ಯೋಜನೆ ಜಾರಿಗೊಳಿಸಲು ಸಚಿವ ಪ್ರಿಯಾಂಕ್‌ ಖರ್ಗೆ ಅವರಿಗೆ ಮನವಿ ಮಾಡಲಾಗಿದೆ. ಈ ಯೋಜನೆಯಿಂದ ರೈತರು ಹಾಗೂ ಜಾನುವಾರುಗಳಿಗೆ ಅನುಕೂಲವಾಗಲಿದೆ. ಸಚಿವರ ದೂರದೃಷ್ಟಿಯಿಂದ ಈ ಯೋಜನೆ ಜಾರಿಗೊಳಿಸಲು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಸ್ಥಳೀಯರು ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

shahabad news

ವಿಕ ಸುದ್ದಿಲೋಕ ಶಹಾಬಾದ್ ಚಿತ್ತಾಪೂರ ಮತಕ್ಷೇತ್ರದ ಮುಗಳನಾಗಾವಿ ಕೆರೆ ಕಲಬುರಗಿ ಜಿಲ್ಲೆಯಲ್ಲಿಯೇ ಹಳೆಯದಾದ ಕೆರೆಯಾಗಿದ್ದು, ಹಲವಾರು ವರ್ಷಗಳಿಂದ ರೈತರಿಗೆ ಹಾಗೂ ಜಾನುವಾರಗಳಿಗೆ ಈ ಕೆರೆಯ ನೀರು ಪೂರಕವಾಗಿದ್ದು, ಕಾಗಿಣಾ ನದಿಯಿಂದ ಬಸವೇಶ್ವರ ಕೆರೆಗೆ ನೀರು ಹರಿಸುವ ಮಹತ್ವಪೂರ್ಣ ಯೋಜನೆ ಜಾರಿಗೊಳಿಸಬೇಕು ಎಂದು ತಾಪಂ ಮಾಜಿ ಸದಸ್ಯ ನಾಮದೇವ ರಾಠೋಡ ಅವರು ಸಚಿವ ಪ್ರಿಯಾಂಕ್ ಖರ್ಗೆಅವರಿಗೆ ಮನವಿ ಮಾಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿತ್ತಾಪುರ ಮತಕ್ಷೇತ್ರದ ಮುಗಳನಾಗಾವಿಯ ಭಾಗಕ್ಕೆ ಹಲವಾರು ವರ್ಷಗಳಿಂದ ತಲೆದೋರಿದ್ದ ಕುಡಿಯುವ ನೀರಿನ ಸಮಸ್ಯೆಗೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಶಾಶ್ವತ

ಪರಿಹಾರ ಒದಗಿಸಿದ್ದಾರೆ. ಸಚಿವರ ದೂರದೃಷ್ಟಿಯಿಂದ ಅವರ ಕನಸಿನ ಯೋಜನೆ ಮುಗಳನಾಗಾಂವ ಬಸವೇಶ್ವರ ಕೆರೆ ಹಾಗೂ ಪೇಠಶಿರೂರ್ ಕೆರೆ ತುಂಬುವ ಯೋಜನೆ ಜಾರಿ ಕುರಿತು ಇಂದು ಕಾಟ್ಟಮ್ಮ ದೇವರ ಹಳ್ಳಿ ಕಾಗಿಣಾ ನದಿಯ ಹಾಗೂ ಬಸವೇಶ್ವರ ಕೆರೆಯ ಹತ್ತಿರ ರೈತರ ಸಮಸ್ಯೆಯನ್ನು ಸಣ್ಣ ನಿರಾವರಿ ಇಲಾಖೆ ಅಧಿಕಾರಿಗಳು ಪರಶೀಲನೆ ಮಾಡಿದ್ದಾರೆ ಎಂದರು. ಪ್ರಮುಖ ಮುಖಂಡರಾದ ಶರಣಗೌಡ ಮಾಲಿಪಾಟೀಲ್ , ತಾಪಂ ಮಾಜಿ ಸದಸ್ಯ ಶಿವಯ್ಯ ಗುತ್ತೇದಾರ ಗ್ರಾಪಂ ಅಧ್ಯಕ್ಷ ಲೋಹಿತ ಬೋರಿ, ಹೀರಾಸಿಂಗ ಕಾರಬಾರಿ, ಧನ್ನು ರಾಠೋಡ, ಭಾರತ ರಾಠೋಡ, ಚಂದು ಜಾಧವ, ಶರಣು ಜಿಡಗಿ, ವಸಂತ ಚೂರಿ, ಭೀಮರಾಯ ವಾಲಿಕಾರ, ವಿಜಯ್ ರಾಠೋಡ, ದೀಪಕ ಪವಾರ, ಸಾಗರ ರಾಠೋಡ, ಉಪಸ್ಥಿತರಿದ್ದರು.

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ