*ಫಾಲೋಅಪ್ ವರದಿ*
ವಿಕ ಸುದ್ದಿಲೋಕ ತರೀಕೆರೆ
‘ ಕುಸುಮ್ ಯೋಜನೆ ಜಾಗ ಗುಳುಂ’ ಶೀರ್ಷಿಕೆಯಡಿ ಅ.31ರಂದು ‘ವಿಜಯ ಕರ್ನಾಟಕ ’ ಪ್ರಕಟಿಸಿದ ವಿಶೇಷ ವರದಿ ಹಿನ್ನೆಲೆಯಲ್ಲಿಎಚ್ಚೆತ್ತ ಗ್ರಾಮಸ್ಥರು, ಕುಸುಮ್ -ಸಿ ಯೋಜನೆಗೆ ಮೀಸಲಿಟ್ಟ ಭೂಮಿಯನ್ನು ಉಳಿಸಿ ಸರಕಾರದ ವಶಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.
ತಾಲೂಕಿನ ನಂದಿ ಗ್ರಾಮದ ಸ.ನಂ. 140, 141, 139ರಲ್ಲಿರುವ ಸರಕಾರಿ ಜಾಗದಲ್ಲಿಕಳೆದ ಒಂದು ವಾರದಿಂದ ಕೆಲವರು ರಾತ್ರೋರಾತ್ರಿ ಉಳುಮೆ ಮಾಡುತ್ತಿದ್ದಾರೆ. ಕುಸುಮ್ -ಸಿ ಯೋಜನೆಗೆ ಮೀಸಲಿಟ್ಟ ಈ ಜಾಗವನ್ನು ಸರಕಾರ ಉಳಿಸಿಕೊಳ್ಳಬೇಕು ಎಂದು ಒತ್ತಾಯಿಸಿ ಭಾರತೀಯ ಕಿಸಾನ್ ಸಂಘದ ಕರ್ನಾಟಕ ಪ್ರದೇಶ ಸಮಿತಿ ವತಿಯಿಂದ ಪಟ್ಟಣದ ತಹಸೀಲ್ದಾರ್ ಕಚೇರಿಗೆ ಆಗಮಿಸಿ, ಶಿರಸ್ತೇದಾರ್ ನಟರಾಜ್ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭ ಭಾರತೀಯ ಕಿಸಾನ್ ಸಂಘದ ತಾಲೂಕು ಅಧ್ಯಕ್ಷ ಚಂದಪ್ಪ, ಕಾರ್ಯದರ್ಶಿ ಬಸವರಾಜಪ್ಪ, ಪದಾಧಿಕಾರಿಗಳಾದ ಶ್ರೀಧರ್ , ನವೀನ್ ಕುಮಾರ್ , ಹರೀಶ್ , ನಂದೀಶ್ , ದಿಲೀಪ್ ಹಾಗೂ ಇತರರಿದ್ದರು.
31ತರೀಕೆರೆ1 :
ತರೀಕೆರೆ ತಾಲೂಕಿನ ನಂದಿ ಗ್ರಾಮದಲ್ಲಿರುವ ಸರಕಾರಿ ಜಾಗ ಉಳಿಸಿಕೊಳ್ಳಬೇಕು ಎಂದು ಒತ್ತಾಯಿಸಿ ಭಾರತೀಯ ಕಿಸಾನ್ ಸಂಘದ ವತಿಯಿಂದ ಶಿರಸ್ತೇದಾರ್ ನಟರಾಜ್ ಅವರಿಗೆ ಮನವಿ ಸಲ್ಲಿಸಲಾಯಿತು.

