ಮಕ್ಕಳಿಗೆ ಸಂಸ್ಕೃತಿಯ ಅರಿವು ಅಗತ್ಯ

Contributed byragh.pkn@gmail.com|Vijaya Karnataka
Subscribe

ಕೋಲಾರದ ಮೆಥೋಡಿಸ್ಟ್‌ ಪ್ರೌಢಶಾಲೆಯಲ್ಲಿ ನಡೆದ ಪ್ರಾಚ್ಯಪ್ರಜ್ಞೆ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮಕ್ಕಳಲ್ಲಿ ನಮ್ಮ ಇತಿಹಾಸ, ಸಂಸ್ಕೃತಿ, ಕಲೆ, ಸಾಹಿತ್ಯದ ಬಗ್ಗೆ ಅರಿವು ಮೂಡಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿ ಎಂದು ವಿಷಯ ಪರಿವೀಕ್ಷಕ ಸಮೀವುಲ್ಲಾ ತಿಳಿಸಿದರು. ಶಾಲಾ ಶಿಕ್ಷಣ ಇಲಾಖೆ ಕರ್ನಾಟಕ ದರ್ಶನದ ಮೂಲಕ ಸ್ಮಾರಕಗಳ ಪರಿಚಯ ಮಾಡಿಕೊಡುತ್ತಿದೆ. ಇದು ಮಕ್ಕಳ ಜ್ಞಾನ ವೃದ್ಧಿಗೆ ಸಹಕಾರಿ.

cultural awareness in children importance of ancient knowledge competitions

ಪ್ರಾಚ್ಯಪ್ರಜ್ಞೆ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ | ಸಮೀವುಲ್ಲಾ ಸಲಹೆ

ವಿಕ ಸುದ್ದಿಲೋಕ ಕೋಲಾರ

ಮಕ್ಕಳಲ್ಲಿನಮ್ಮ ಇತಿಹಾಸ ಸಾರುವ ಸ್ಮಾರಕಗಳು, ನಮ್ಮ ಹಿಂದಿನ ಸಂಸ್ಕೃತಿಯ ಅರಿವು ಮೂಡಿಸಿ ಅವರಲ್ಲಿಸಂಸ್ಕಾರ ಬೆಳೆಸಲು ಪ್ರಾಚ್ಯಪ್ರಜ್ಞೆ ಕಾರ್ಯಕ್ರಮ ಹೆಚ್ಚು ಸೂಕ್ತ ಎಂದು ವಿಷಯ ಪರಿವೀಕ್ಷಕ ಸಮೀವುಲ್ಲಾತಿಳಿಸಿದರು.

ನಗರದ ಮೆಥೋಡಿಸ್ಟ್ ಪ್ರೌಢಶಾಲೆಯಲ್ಲಿಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆಶ್ರಯದಲ್ಲಿಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ನಡೆದ ತಾಲೂಕು ಮಟ್ಟದ ಪ್ರಾಚ್ಯಪ್ರಜ್ಞೆ ಸ್ಪರ್ಧೆಗಳಲ್ಲಿವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು. ನಮ್ಮ ಇತಿಹಾಸವನ್ನು ಬಿಂಬಿಸುವ ಪುರಾತನ ಅರಮನೆಗಳು, ಕೋಟೆ, ದೇವಾಲಯಗಳು, ಮಸೀದಿಗಳು ನಮ್ಮ ಸಂಸ್ಕೃತಿಗೆ ಸಾಕ್ಷಿಯಾಗಿ ನಿಂತಿವೆ. ಈ ಪುರಾತನ ವೀರಗಲ್ಲುಗಳು, ಶಾಸನಗಳು ನಮ್ಮ ಐತಿಹಾಸಿಕ ಸೊಬಗನ್ನು ಬೆಳಕಿಗೆ ತರಲು ಸಾಕ್ಷಿಗಳಾಗಿ ನಿಂತಿದ್ದು, ಇವುಗಳ ಕುರಿತು ಅರಿವು ಮಕ್ಕಳಿಗೆ ಅಗತ್ಯವಿದೆ ಎಂದರು.

ಮಕ್ಕಳಲ್ಲಿಇತಿಹಾಸ ಪ್ರಜ್ಞೆ ಮೂಡಿಸಲು ಇಲಾಖೆ ಇಂತಹ ಸ್ಪರ್ಧೆಗಳನ್ನು ನಡೆಸುತ್ತಿದೆ. ರಾಜಮಹಾರಾಜರ ಆಳ್ವಿಕೆಯಲ್ಲಿಕಲೆ, ಸಾಹಿತ್ಯಕ್ಕೆ ನೀಡುತ್ತಿದ್ದ ಪ್ರೋತ್ಸಾಹ ಅವರ ಜೀವನ ಕೌಶಲ ಎಲ್ಲವನ್ನೂ ಅರಿಯಲು ಈ ಸ್ಪರ್ಧೆಗಳು ಸಹಕಾರಿಯಾಗಿವೆ ಎಂದು ಹೇಳಿದರು.

ಶಿಕ್ಷಣ ಸಂಯೋಜಕಿ ಹಾಗೂ ನೋಡಲ್ ಅಧಿಕಾರಿ ಲೇಖಾ ಮಾತನಾಡಿ, ಶಾಲಾ ಶಿಕ್ಷಣ ಇಲಾಖೆ ಮಕ್ಕಳಲ್ಲಿಪ್ರಾಚ್ಯಪ್ರಜ್ಞೆಯ ಅರಿವನ್ನು ಹೆಚ್ಚಿಸುವ ಮೂಲಕ ಅವರಲ್ಲಿನಮ್ಮ ಪುರಾತನ ಸಂಸ್ಕೃತಿ, ಅಂದಿನ ಕಲೆ,ಸಾಹಿತ್ಯ ವೈಭವದ ಕುರಿತು ಜ್ಞಾನ ಹೆಚ್ಚಿಸುವ ಕೆಲಸ ಮಾಡುತ್ತಿದ್ದು, ಮಕ್ಕಳು ಇದರ ಪ್ರಯೋಜನ ಪಡೆಯಬೇಕು ಎಂದರು.

ಸರಕಾರ ಕರ್ನಾಟಕ ದರ್ಶನದ ಮೂಲಕ ಮಕ್ಕಳಿಗೆ ನಮ್ಮ ಪ್ರಾಚ್ಯ ಸ್ಮಾರಕಗಳ ಪರಿಚಯ ಮಾಡಿಕೊಡುತ್ತಿದೆ. ಇದರಿಂದಾಗಿ ಸಾಮಾನ್ಯ ಜ್ಞಾನ ವೃದ್ಧಿಯ ಜತೆಗೆ ಹಿಂದಿನವರು ತಮ್ಮ ಬದುಕು ರೂಪಿಸಿಕೊಳ್ಳಲು ಅನುಸರಿಸುತ್ತಿದ್ದ ಕೌಶಲಗಳ ಅರಿವು ಸಿಗುತ್ತದೆ ಎಂದರು.

ಪ್ರಾಚ್ಯಪ್ರಜ್ಞೆ ಕಾರ್ಯಕ್ರಮಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಮಧುಮಾಲತಿ ಪಡುವಣೆ ಶುಭಕೋರಿದ್ದು, ತಾಲೂಕುಮಟ್ಟದ ಪ್ರಾಚ್ಯಪ್ರಜ್ಞೆ ಸ್ಪರ್ಧೆಗಳಲ್ಲಿಪ್ರಥಮ ಬಹುಮಾನ ಪಡೆದವರು ಮುಂದಿನ ದಿನಗಳಲ್ಲಿಜಿಲ್ಲಾಮಟ್ಟಕ್ಕೆ ಹೋಗಲು ಅರ್ಹತೆ ಪಡೆದುಕೊಂಡಿದ್ದಾರೆ ಎಂದರು.

ವಿಜೇತರ ವಿವರ: ಪ್ರಬಂಧ ಸ್ಪರ್ಧೆಯಲ್ಲಿತಾಲೂಕಿನ ಸಬರಮತಿ ಪ್ರೌಢಶಾಲೆ ಪ್ರಥಮ, ಚಿತ್ರಕಲೆ ಸ್ಪರ್ಧೆಯಲ್ಲಿಬೆಗ್ಲಿಹೊಸಹಳ್ಳಿ ಸರಕಾರಿ ಪ್ರೌಢಶಾಲೆ ಪ್ರಥಮ, ರಸಪ್ರಶ್ನೆ ಸ್ಪರ್ಧೆಗಳಲ್ಲಿಸಬರಮತಿ ಪ್ರೌಢಶಾಲೆ ಪ್ರಥಮ, ಭಾಷಣ ಸ್ಪರ್ಧೆಯಲ್ಲಿಸರಕಾರಿ ಪ್ರೌಢಶಾಲೆ ಮುದುವಾಡಿ ಪ್ರಥಮ ಸ್ಥಾನ ಪಡೆಯಿತು.

ಕಾರ್ಯಕ್ರಮದಲ್ಲಿಶಿಕ್ಷಕರಾದ ಮೆಥೋಡಿಸ್ಟ್ ಶಾಲೆಯ ಶಿಕ್ಷಕಿ ಮಂಜುಳಾ, ಶಿಕ್ಷಕರಾದ ಆನಂದ್ ಕುಮಾರ್ , ಗಂಗಾಧರಮೂರ್ತಿ, ಕಾಳಿದಾಸ ಸೇರಿದಂತೆ ತೀರ್ಪುಗಾರರು ಹಾಜರಿದ್ದರು.

=

ಫೋಟೋಕ್ಯಾಪ್ಷನ್ ; ಕೋಲಾರದ ಮೆಥೋಡಿಸ್ಟ್ ಪ್ರೌಢಶಾಲೆಯಲ್ಲಿಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ನಡೆದ ತಾಲೂಕು ಮಟ್ಟದ ಪ್ರಾಚ್ಯಪ್ರಜ್ಞೆ ಸ್ಪರ್ಧೆಗಳಲ್ಲಿವಿಜೇತರಿಗೆ ವಿಷಯ ಪರಿವೀಕ್ಷಕ ಸಮೀವುಲ್ಲಾ, ನೋಡಲ್ ಅಧಿಕಾರಿ ಲೇಖಾ ಬಹುಮಾನ ವಿತರಿಸಿದರು. (30ಕೆಪಿಎಚ್ 1)

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ