ಕೊಟ್ಟೂರಲ್ಲಿಏಕತಾ ದಿನಾಚರಣೆ

Contributed bysureshdevaramani@gmail.com|Vijaya Karnataka
Subscribe

ಕೊಟ್ಟೂರಿನಲ್ಲಿ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ ಜನ್ಮ ದಿನವನ್ನು ಏಕತಾ ದಿನವನ್ನಾಗಿ ಆಚರಿಸಲಾಯಿತು. ತಾಲೂಕು ಕಚೇರಿಯಲ್ಲಿ ಪಟೇಲ್‌ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ದೇಶದ ಐಕ್ಯತೆ ಮತ್ತು ಭದ್ರತೆಗಾಗಿ ಪಟೇಲ್‌ ಅವರು ನೀಡಿದ ಕೊಡುಗೆಯನ್ನು ನೆನಪಿಸಲಾಯಿತು. ಪೊಲೀಸ್‌ ಇಲಾಖೆಯಿಂದ ಏಕತಾ ಓಟವನ್ನು ಸಹ ಹಮ್ಮಿಕೊಳ್ಳಲಾಗಿತ್ತು.

unity day celebration in kottur a heartfelt event commemorating patels birth anniversary

ಕೊಟ್ಟೂರಲ್ಲಿಏಕತಾ ದಿನಾಚರಣೆ

ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮ ದಿನಾಚರಣೆ

ವಿಕ ಸುದ್ದಿಲೋಕ ಕೊಟ್ಟೂರು

ತಾಲೂಕು ಕಚೇರಿಯ ಗಾಂಧೀಜಿ ಸಭಾಂಗಣದಲ್ಲಿಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮ ದಿನಾಚರಣೆ ನಿಮಿತ್ತ ಏಕತಾ ದಿನವನ್ನಾಗಿ ಶುಕ್ರವಾರ ಆಚರಿಸಲಾಯಿತು.

ಪಟೇಲ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ ಗ್ರೇಡ್ 2 ತಹಸೀಲ್ದಾರ್ ಎಂ.ಪ್ರತಿಭಾ ಮಾತನಾಡಿ, ದೇಶದಲ್ಲಿಒಗ್ಗಟ್ಟು ಹಾಗೂ ಐಕ್ಯತೆ ರೂಪಿಸುವುದಕ್ಕಾಗಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಕೈಗೊಂಡ ಕ್ರಮಗಳಿಂದಾಗಿ ರಾಜ ಆಡಳಿತ ಪ್ರದೇಶಗಳೆಲ್ಲಸ್ವತಂತ್ರ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಲೀನವಾದವು. ದೇಶದ ಐಕ್ಯತೆ, ಭದ್ರತೆ, ಸಮಗ್ರತೆ ಕಾಪಾಡಲು ತಮ್ಮನ್ನು ತಾವು ಅರ್ಪಿಸಿಕೊಂಡಿದ್ದರು. ಪಟೇಲರ ದೂರದೃಷ್ಟಿ ಮತ್ತು ಕಾರ್ಯಕ್ಷಮತೆಯಿಂದ ಸಾಧಿಸಿದ ರಾಷ್ಟ್ರೀಯ ಏಕೀಕರಣದ ಸ್ಫೂರ್ತಿಯನ್ನು ಕಾಪಾಡಿದ್ದರು. ಸ್ವತಂತ್ರ ಭಾರತದ ಮೊದಲ ಆಡಳಿತದಲ್ಲಿಗೃಹ ಸಚಿವರಾಗಿ ಅವರು ಮಾಡಿದ ಕಾರ್ಯದಿಂದ ದೇಶದಲ್ಲಿ

ಐಕ್ಯತೆ ಮೂಡಿದೆ. ಅವರ ಆಡಳಿತ ಎಲ್ಲರಿಗೂ ಮಾದರಿಯಾಗಿದೆ ಎಂದು ಹೇಳಿದರು.

ಕಚೇರಿ ಸಿಬ್ಬಂದಿಗಳಾದ ದೇವರಾಜ, ಮಂಜುನಾಥ, ದ್ಯಾಮವ್ವ ಇದ್ದರು.

ವಿಎನ್ ಆರ್ 31ಕೆಟಿಆರ್ 1: ಕೊಟ್ಟೂರಿನ ತಾಲೂಕು ಕಚೇರಿಯಲ್ಲಿಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮ ದಿನ ನಿಮಿತ್ತ ಏಕತಾ ದಿನ ಆಚರಣೆಯಲ್ಲಿಸಿಬ್ಬಂದಿ

ಪ್ರತಿಜ್ಞೆ ಮಾಡಿದರು.

ವಿಎನ್ ಆರ್ 31ಕೆಟಿಆರ್ 2: ಕೊಟ್ಟೂರಿನಲ್ಲಿಪೊಲೀಸ್ ಇಲಾಖೆಯಿಂದ ಏಕತಾ ದಿನದ ನಿಮಿತ್ತ ಸಿಪಿಐ ದುರುಗಪ್ಪ ನೇತೃತ್ವದಲ್ಲಿಸಿಬ್ಬಂದಿ, ಶಾಲೆ ಮಕ್ಕಳು

ಏಕತಾ ಓಟ ನಡೆಸಿದರು.

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ