** ಕರ್ನಾಟಕ ಆಯುರ್ವೇದ ಮೆಡಿಕಲ… ಕಾಲೇಜು ಆಸ್ಪತ್ರೆ: ಸಂಧಿವಾತ ಜಾಗೃತಿ,ಉಚಿತ ವೈದ್ಯಕೀಯ ಶಿಬಿರ

Contributed bystevan.rego@timesgroup.com|Vijaya Karnataka
Subscribe

ಮಂಗಳೂರಿನ ಕರ್ನಾಟಕ ಆಯುರ್ವೇದ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ವಿಶ್ವ ಸಂಧಿವಾತ ದಿನಾಚರಣೆಯ ಪೂರ್ವಭಾವಿಯಾಗಿ ಜಾಗೃತಿ ಹಾಗೂ ಉಚಿತ ವೈದ್ಯಕೀಯ ಶಿಬಿರವನ್ನು ಆಯೋಜಿಸಲಾಯಿತು. ಈ ಶಿಬಿರದಲ್ಲಿ ಸಂಧಿವಾತದ ಬಗ್ಗೆ ಮಾಹಿತಿ ನೀಡಲಾಯಿತು. ಉಚಿತ ಆಯುರ್ವೇದ ಔಷಧಗಳನ್ನು ವಿತರಿಸಲಾಯಿತು. ಕಾಲೇಜಿನ ಪ್ರಿನ್ಸಿಪಾಲ್‌ ಡಾ. ಸಜಿತ್‌ ಮಂಗಲಶೇರಿ ಅವರು ಶಿಬಿರವನ್ನು ಉದ್ಘಾಟಿಸಿದರು. ವೈದ್ಯಕೀಯ ಅಧೀಕ್ಷಕ ಡಾ. ಉದಯ… ಡಿ.ಕೆ. ಉಪಸ್ಥಿತರಿದ್ದರು.

karnataka ayurveda medical college free medical camp and arthritis awareness

ಅರವಿಂದ್ ನಮ್ಮ ಕುಡ್ಲ

ವಿಕ ಸುದ್ದಿಲೋಕ ಮಂಗಳೂರು

ಅಶೋಕ ನಗರದ ಕರ್ನಾಟಕ ಆಯುರ್ವೇದ ಮೆಡಿಕಲ… ಕಾಲೇಜು ಆಸ್ಪತ್ರೆಯ ಕಾಯಚಿಕಿತ್ಸಾ ವಿಭಾಗದ ಸ್ನಾತಕೋತ್ತರ ಅಧ್ಯಯನ ವಿಭಾಗದ ವತಿಯಿಂದ ಗುರುವಾರ ವಿಶ್ವ ಸಂಧಿವಾತ ದಿನಾಚರಣೆಯ ಪೂರ್ವಸಂಧ್ಯೆಯಲ್ಲಿಸಂಧಿವಾತ ಜಾಗೃತಿ ಹಾಗೂ ವೈದ್ಯಕೀಯ ಉಚಿತ ಶಿಬಿರ ನಡೆಯಿತು.

ಕಾಲೇಜಿನ ಪ್ರಿನ್ಸಿಪಾಲ್ ಡಾ. ಸಜಿತ್ ಮಂಗಲಶೇರಿ ಶಿಬಿರ ಉದ್ಘಾಟಿಸಿದರು. ವೈದ್ಯಕೀಯ ಅಧೀಕ್ಷಕ ಡಾ. ಉದಯ… ಡಿ.ಕೆ. ಉಪಸ್ಥಿತರಿದ್ದರು. ಕಾಯಚಿಕಿತ್ಸಾ ವಿಭಾಗದ ಪ್ರಾಧ್ಯಾಪಕ ಡಾ.ಕೆ. ರವೀಂದ್ರ ಭಟ್ ಸ್ವಾಗತಿಸಿದರು. ಕಾಯಚಿಕಿತ್ಸಾ ವಿಭಾಗದ ಪ್ರಾಧ್ಯಾಪಕಿ ಮತ್ತು ವಿಭಾಗದ ಮುಖ್ಯಸ್ಥರಾದ ಡಾ. ವಹೀದಾ ಭಾನು ಕಾರ್ಯಕ್ರಮದ ಪರಿಚಯ ಶಿಬಿರದಲ್ಲಿಡಾ. ವಹೀದಾ ಭಾನು ಮತ್ತು ಡಾ. ರವೀಂದ್ರ ಭಚ್ ಸಹ-ಮಾರ್ಗದರ್ಶಕರಾಗಿ ಸಲಹೆ ಕಾರ್ಯದಲ್ಲಿಭಾಗವಹಿಸಿದರು. ಉಚಿತ ಆಯುರ್ವೇದ ಔಷಧಗಳನ್ನು ಹಂಚಲಾಯಿತು. ಕಾಯಚಿಕಿತ್ಸಾ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಕೃತಿ ಎನ್ .ಕೆ ವಂದಿಸಿದರು. ಉಪ ವೈದ್ಯಕೀಯ ಅಧೀಕ್ಷಕರಾದ ಡಾ.ಅರ್ಚನಾ ಪಿ., ಇಂಟರ್ನ್ ಡಾ. ಸಂಜನಾ ಪ್ರಾರ್ಥಿಸಿದರು.

ಚಿತ್ರ: 30ಎಂ-ಎಸ್ ಇಎಸ್

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ