ಅಡ್ಕತ್ತಬೈಲು ಫೂಟ್ ಓವರ್ ಬ್ರಿಡ್ಜ್ ನಿರ್ಮಾಣ ವಿಳಂಬ

Contributed bycrastalp19@gmail.com|Vijaya Karnataka
Subscribe

ಅಡ್ಕತ್ತಬೈಲು ರಾಷ್ಟ್ರೀಯ ಹೆದ್ದಾರಿಯಲ್ಲಿ ಫೂಟ್‌ ಓವರ್‌ ಬ್ರಿಡ್ಜ್‌ ನಿರ್ಮಾಣ ವಿಳಂಬವಾಗಿದೆ. ಕೇಂದ್ರ ಸಚಿವರು ಭರವಸೆ ನೀಡಿದ್ದರೂ ಮುಂದಿನ ಪ್ರಕ್ರಿಯೆಗಳು ನಿಧಾನವಾಗಿವೆ. ನಾಗರಿಕರು ಮತ್ತು ಕ್ರಿಯಾ ಸಮಿತಿ ಪದಾಧಿಕಾರಿಗಳು ಆತಂಕಗೊಂಡಿದ್ದಾರೆ. ಹೆದ್ದಾರಿ ನಿರ್ಮಾಣದ ವೇಳೆ ಸೇತುವೆ ಮಂಜೂರು ಮಾಡಲು ಅಧಿಕಾರಿಗಳು ಹಿಂದೇಟು ಹಾಕಿದ್ದರು. ಮಹಿಳೆಯೊಬ್ಬರು ಮೃತಪಟ್ಟ ಬಳಿಕ ಬೇಡಿಕೆ ತೀವ್ರಗೊಂಡಿದೆ.

delay in the construction of adkattabai foot over bridge raises concerns among citizens

ವಿಕ ಸುದ್ದಿಲೋಕ ಕಾಸರಗೋಡು

ವಾಹನ ಅಪಘಾತಗಳು , ಅಪಘಾತ ಮರಣಗಳು ನಿತ್ಯ ಕಥೆಯಾದ ರಾಷ್ಟ್ರೀಯ ಹೆದ್ದಾರಿಯ ಅಡ್ಕತ್ತಬೈಲಿನಲ್ಲಿಫೂಟ್ ಓವರ್ ಬ್ರಿಡ್ಜ್ ನಿರ್ಮಿಸಬೇಕು ಎಂಬ ಬೇಡಿಕೆಗೆ ಕೇಂದ್ರ ಸಚಿವರಿಂದ ಭರವಸೆ ಲಭಿಸಿದರೂ ಮುಂದಿನ ಪ್ರಕ್ರಿಯೆಗಳು ವಿಳಂಬಗೊಳ್ಳುತ್ತಿರುವುದು ನಾಗರಿಕರಿಗೆ ಹಾಗೂ ಕ್ರಿಯಾ ಸಮಿತಿ ಪದಾಧಿಕಾರಿಗಳಿಗೆ ಆತಂಕ ಸೃಷ್ಟಿಸುತ್ತಿದೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಸಂದರ್ಭದಲ್ಲೇ ಅಡ್ಕತ್ತಬೈಲಿನಲ್ಲಿಫೂಟ್ ಓವರ್ ಬ್ರಿಡ್ಜ್ ಮಂಜೂರುಗೊಳಿಸಬೇಕು ಎಂದು ನಾಗರಿಕರು ಆಗ್ರಹಿಸಿದ್ದರು. ಇದಕ್ಕೆ ಕಿವಿಗೊಡಲು ಅಧಿಕಾರಿಗಳು ತಯಾರಾಗದ ಕಾರಣ ನಾಗರಿಕರನ್ನು ಒಗ್ಗೂಡಿಸಿ ಕ್ರಿಯಾಸಮಿತಿಯನ್ನು ರಚಿಸಿದ್ದು, ಪದಾಧಿಕಾರಿಗಳು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯವರನ್ನು ಕಂಡು ಮನವಿ ನೀಡಿದ್ದರು.

ಅಡ್ಕತ್ತಬೈಲು ಮುಹಿಯುದ್ದೀನ್ ಜಮಾಅತ್ ಸಮಿತಿ ಹಾಗೂ ಸುಬ್ರಹ್ಮಣ್ಯ ಕ್ಷೇತ್ರ ಸಮಿತಿಯು ಸಂಯುಕ್ತವಾಗಿ ಈ ವಿಷಯದಲ್ಲಿಮಧ್ಯಸ್ಥಿಕೆ ವಹಿಸಿ ಕ್ರಿಯಾ ಸಮಿತಿಯನ್ನು ರಚಿಸುವುದು, ಮನವಿ ಸಲ್ಲಿಸುವುದು ಮಾಡಿತ್ತು. ಮನವಿಗೆ ಸಚಿವರ ಧನಾತ್ಮಕ ಪ್ರತಿಕ್ರಿಯೆ ಲಭಿಸಿತ್ತು ಎಂದು ಪದಾಧಿಕಾರಿಗಳು ಹೇಳುತ್ತಿದ್ದಾರೆ. ಇದಕ್ಕೆ ಮುಂದಿನ ಕ್ರಮಗಳನ್ನು ಕೈಗೊಳ್ಳದಿರುವುದು ಇದೀಗ ನಾಗರಿಕರಲ್ಲಿಆತಂಕ ಸೃಷ್ಟಿಸುತ್ತಿದೆ. ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಮಧ್ಯೆ ಮಹಿಳೆ ಮೃತಪಟ್ಟ ಬಳಿಕ ಮೇಲ್ಸೇತುವೆಯ ಬೇಡಿಕೆ ಇನ್ನೂ ತೀವ್ರಗೊಂಡಿದೆ.

ಚಿತ್ರ: 29ಕೆಎಸ್ ಎಲ್ ಅಡ್ಕತ್ತಬೈಲು-ಅಡ್ಕತ್ತಬೈಲು ರಾಷ್ಟ್ರೀಯ ಹೆದ್ದಾರಿ.

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ