ಹುಲಿ ಯೋಜನೆಗೆ ವಿರೋಧ

Contributed byabhilash.gowda7707@gmail.com|Vijaya Karnataka
Subscribe

ಮಲೆ ಮಹದೇಶ್ವರಬೆಟ್ಟ ಅರಣ್ಯವನ್ನು ಹುಲಿ ಯೋಜನೆಗೆ ಸೇರಿಸುವ ಪ್ರಸ್ತಾವಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ತಮ್ಮ ಜೀವನೋಪಾಯಕ್ಕೆ, ಸ್ವಾತಂತ್ರ್ಯಕ್ಕೆ ಧಕ್ಕೆ ಬರುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಅರಣ್ಯಾಧಿಕಾರಿಗಳ ಭರವಸೆಗೂ ಮಣಿಯದೆ, ಯೋಜನೆ ಜಾರಿಗೆ ವಿರೋಧಿಸಿದ್ದಾರೆ. ಇದು 50 ಸಾವಿರಕ್ಕೂ ಹೆಚ್ಚು ಬುಡಕಟ್ಟು ಜನರ ಬದುಕಿಗೆ ಸಮಸ್ಯೆಯಾಗಲಿದೆ ಎಂದು ತಿಳಿಸಿದ್ದಾರೆ. ಯಾವುದೇ ತಜ್ಞರ ಸಮಿತಿ ರಚನೆಯಾಗಿಲ್ಲ ಎಂದು ದೂರಿದ್ದಾರೆ.

local uproar against tiger conservation plan

ವಿಕ ಸುದ್ದಿಲೋಕ ಹನೂರು ಮಲೆ ಮಹದೇಶ್ವರಬೆಟ್ಟ ಅರಣ್ಯವನ್ನು ಹುಲಿ ಯೋಜನೆ ವ್ಯಾಪ್ತಿಗೆ ತರುವ ಪ್ರಸ್ತಾಪಕ್ಕೆ ಸ್ಥಳೀಯರಿಂದ ಒಕ್ಕೊರಲ ವಿರೋಧ ವ್ಯಕ್ತವಾಯಿತು. ಮಲೆ ಮಹದೇಶ್ವರಬೆಟ್ಟ ಹಾಗೂ ಹನೂರು ಪಟ್ಟಣದಲ್ಲಿನಡೆದ ಎರಡು ಸಭೆಗಳಲ್ಲೂಸ್ಥಳೀಯರು, ಹುಲಿ ರಕ್ಷಿತಾರಣ್ಯ ನಿಯಮ ಜಾರಿಯಿಂದ ಎದುರಾಗಬಹುದಾದ ಸಮಸ್ಯೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಅಲ್ಲದೇ ತಮ್ಮ ಜನ ಜೀವನದ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುವ ಯೋಜನೆ ಜಾರಿ ಬೇಡ ಎಂಬುದಾಗಿ ವಿರೋಧಿಸಿದರು. ಈ ನಡುವೆ ಅರಣ್ಯಾಧಿಕಾರಿಗಳು ಯೋಜನೆ ಜಾರಿಯಿಂದ ಸ್ಥಳೀಯರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಅವರ ಹಕ್ಕುಗಳಿಗೆ ಚ್ಯುತಿಯಾಗುವುದಿಲ್ಲಎಂಬ ಭರವಸೆಗೂ ಸ್ಥಳೀಯರು ಮಣಿಯದೇ ಯೋಜನೆ ಜಾರಿಗೆ ವಿರೋಧಿಸಿದರು. ಸಭೆಯಲ್ಲಿಮಾತನಾಡಿದ ಸ್ಥಳೀಯ ಮುಖಂಡರು, ‘‘ನಾವು ತಲತಲಾಂತರದಿಂದಲೂ ಅರಣ್ಯದ ಹಾಡಿಗಳಲ್ಲಿವಾಸಿಸುತ್ತಿದ್ದೇವೆ. ಅರಣ್ಯ ಸಂಪನ್ಮೂಲಗಳಾದ ಗಿಡಮೂಲಿಕೆ, ಜೇನು, ಕಾಡುಹಣ್ಣು, ಮೀನು ಮುಂತಾದವುಗಳ ಮೇಲೆ ನಮ್ಮ ಜೀವನಾಧಾರ ಇದೆ. ಸಂರಕ್ಷಿತ ಅರಣ್ಯದ ನಿಯಮಗಳು ಇವುಗಳಿಗೆ ಪ್ರವೇಶವನ್ನು ನಿರ್ಬಂಧಿಸಿದರೆ ನಮ್ಮ ಜೀವನೋಪಾಯದ ಮೇಲೆ ತೀವ್ರವಾಗಿ ಪರಿಣಾಮ ಬೀರುತ್ತದೆ’’ ಎಂದರು ‘‘ಕೆಲವರು ಪುನರ್ವಸತಿ ಸೌಲಭ್ಯಗಳ ಕೊರತೆ, ಮಾನವ-ವನ್ಯಜೀವಿ ಸಂಘರ್ಷದ ಅಪಾಯ, ಮತ್ತು ಅರಣ್ಯ ಇಲಾಖೆಯ ಒತ್ತಡ, ಕಿರುಕುಳದ ಭೀತಿ,’’ ಕುರಿತೂ ಕಳವಳ ವ್ಯಕ್ತಪಡಿಸಿದರು. ‘‘ಹುಲಿ ಸಂರಕ್ಷಿತ ಅರಣ್ಯ ಎಂದು ಘೋಷಿಸುವ ನಿರ್ಧಾರವು ಸ್ಥಳೀಯವಾಗಿ 50 ಸಾವಿರಕ್ಕೂ ಹೆಚ್ಚು ಬುಡಕಟ್ಟು ಜನರ ಬದುಕಿಗೆ ಸಮಸ್ಯೆಯನ್ನು ತಂದೊಡ್ಡಲಿದೆ. ಅವರ ಸಂಸ್ಕೃತಿ, ಜೀವನೋಪಾಯ ಮತ್ತು ಹಕ್ಕುಗಳಿಗೆ ಧಕ್ಕೆ ಆಗಲಿದೆ,’’ ಎಂಬುದಾಗಿ ತಮ್ಮ ಅಭಿಪ್ರಾಯ ತಿಳಿಸಿದರು. ಯಾವುದೇ ಸಮಿತಿ ರಚಿಸಿಲ್ಲ: ಗಿರಿಜನ ಅಭಿವೃದ್ಧಿ ಸೋಲಿಗ ಸಂಘದ ಜಿಲ್ಲಾಕಾರ್ಯದರ್ಶಿ ಸಿ. ಮಾದೇಗೌಡ ಅವರು, ಹುಲಿ ರಕ್ಷಿತಾರಣ್ಯ ಜಾರಿ ಸಂಬಂಧಿಸಿದಂತೆ ಯಾವುದೇ ತಜ್ಞರ ಸಮಿತಿ ರಚನೆಯಾಗಿಲ್ಲ. ಪ್ರತಿ ಗ್ರಾಮದಲ್ಲೂತೆರಳಿ ಅಲ್ಲಿನ ಜನರ ನಿಜವಾದ ಅಭಿಪ್ರಾಯವನ್ನು ಕೇಳುವುದು ಸರಕಾರದ ಕರ್ತವ್ಯ. ಜಿಲ್ಲೆಯಲ್ಲಿಈಗಾಗಲೇ ಎರಡು ಹುಲಿ ಸಂರಕ್ಷಿತ ಅರಣ್ಯ ಪ್ರದೇಶಗಳಿವೆ. ಅವುಗಳ ಘೋಷಣೆಯ ಬಳಿಕ ಅಲ್ಲಿನ ಜನತೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ’ ಎಂದರು. ಸಭೆಯಲ್ಲಿಸಿಸಿಎಫ್ ರವಿಶಂಕರ್ , ಡಿಸಿಎಫ್ ಭಾಸ್ಕರ್ , ಜಿಲ್ಲಾಪರಿಶಿಷ್ಟ ವರ್ಗಗಳ ಕಲ್ಯಾಣಾಧಿ ಕಾರಿ ಬಿಂದ್ಯಾ, ಎಸಿಎಫ್ ವಿರಾಜ್ ಆರ್ ಎಫ್ ಒ ನಾಗರಾಜ್ ಇತರರು ಹಾಜರಿದ್ದರು.

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ