ನಾಳೆ ಪಾಂಡುರಂಗ ಜ್ಯೋತಿ ಪಾದಯಾತ್ರೆ

Contributed bynijaguni.dindalkoppa@timesofindia.com|Vijaya Karnataka
Subscribe

ಧಾರವಾಡದ ಯಾಲಕ್ಕಿಶೆಟ್ಟರ ಕಾಲೊನಿಯ ಶ್ರೀ ಕಾನಡಾ ವಿಠ್ಠಲ ರುಕ್ಷಮಿಣಿ ಮಂದಿರ ಸಮಿತಿ ವತಿಯಿಂದ ನ. 2ರಂದು ಮಧ್ಯಾಹ್ನ 2ಕ್ಕೆ ಪಾಂಡುರಂಗ ಜ್ಯೋತಿಯೊಂದಿಗೆ ಪಾದಯಾತ್ರೆ ನಡೆಯಲಿದೆ. ಧಾರವಾಡ ಶಂಕರಾಚಾರ್ಯ ಮಠದಿಂದ ಆರಂಭಗೊಳ್ಳುವ ಈ ಯಾತ್ರೆ ಯಾಲಕ್ಕಿಶೆಟ್ಟರ ಕಾಲೊನಿ, ಕಾನಡಾ ವಿಠ್ಠಲ ಮಂದಿರ, ಸಿಎಂಡಿಆರ್‌ ಕಚೇರಿ, ಅಂಬೇಡ್ಕರ್‌ ನಗರ ಮಾರ್ಗವಾಗಿ ಸಂಚರಿಸಲಿದೆ. ಮಹಿಳೆಯರು ದಿಂಡಿ ಉತ್ಸವದಲ್ಲಿ ಭಾಗವಹಿಸಲಿದ್ದಾರೆ. ಸಾಯಂಕಾಲ ಪ್ರವಚನ ಮತ್ತು ಕೀರ್ತನೆ ನಡೆಯಲಿದೆ.

panduranga jyoti padayatra taking place in dharwad on friday

ವಿಕ ಸುದ್ದಿಲೋಕ ಧಾರವಾಡ

ನಗರದ ಯಾಲಕ್ಕಿಶೆಟ್ಟರ ಕಾಲೊನಿಯ ಶ್ರೀ ಕಾನಡಾ ವಿಠ್ಠಲ ರುಕ್ಷಮಿಣಿ ಮಂದಿರ ಸಮಿತಿ ವತಿಯಿಂದ ನ. 2ರಂದು ಮಧ್ಯಾಹ್ನ 2ಕ್ಕೆ ಪಾಂಡುರಂಗ ಜ್ಯೋತಿಯೊಂದಿಗೆ ಪಾದಯಾತ್ರೆ ನಡೆಯಲಿದೆ ಎಂದು ಪಾಂಡುರಂಗನ ಭಕ್ತರಾದ ಸುನೀತಾ ದತ್ತವಾಡ ಹೇಳಿದರು.

ಶುಕ್ರವಾರ ಸುದ್ದಿಗೋಷ್ಟಿಯಲ್ಲಿಮಾತನಾಡಿದ ಅವರು ‘‘ ಧಾರವಾಡ ಶಂಕರಾಚಾರ್ಯ ಮಠದಿಂದ ಪಾದಯಾತ್ರೆ ಆರಂಭಗೊಳ್ಳಲಿದೆ. ಯಾಲಕ್ಕಿ ಶೆಟ್ಟರ ಕಾಲೊನಿ, ಕಾನಡಾ ವಿಠ್ಠಲ ಮಂದಿರ, ಸಿಎಂಡಿಆರ್ ಕಚೇರಿ, ಅಂಬೇಡ್ಕರ್ ನಗರ, ಯಾಲಕ್ಕಿಶೆಟ್ಟರ್ ಕಾಲೊನಿ ಮಾರ್ಗವಾಗಿ ಸಂಚರಿಸಲಿದೆ. ಹಿಂಗುಲಾಂಬಿಕಾ ಮಹಿಳಾ ಮಂಡಳದ ಅಧ್ಯಕ್ಷೆ ಗೀತಾ ಹಂಚಾಟೆ, ಭಾಗ್ಯಶ್ರೀ ಮಧುಸೂದನ ಪಿಸೆ, ವಿಜಯಾ ನಾಯಕ, ಮೃಣಾಲ ಜೋಶಿ ಅವರು ಪಾಂಡುರಂಗನ ಪವಿತ್ರ ಜ್ಯೋತಿ ಬೆಳಗಿಸುವರು. ಕಾರ್ಯಕ್ರಮದ ಹಿನ್ನೆಲೆಯಲ್ಲಿಪ್ರಸಾದ ವ್ಯವಸ್ಥೆ ಇರುತ್ತದೆ. ಸಾಯಂಕಾಲ ಪ್ರವಚನ ವಿಠ್ಠಲ ರುಕ್ಮಿಣಿ ಬಗ್ಗೆ ಕೀರ್ತನೆ ನಡೆಯಲಿದೆ’’ ಎಂದು ತಿಳಿಸಿದರು.

ಮಹಿಳೆಯರೆಲ್ಲರೂ ದಿಂಡಿ ಉತ್ಸವದಲ್ಲಿಭಾಗಿಯಾಗಲಿದ್ದಾರೆ. ಸಾರ್ವಜನಿಕರು ಯಾಲಕ್ಕಿ ಶೆಟ್ಟರ ಕಾಲೊನಿಯಲ್ಲಿನ ವಿಠ್ಠಲ ರುಕ್ಮಿಣಿ ಮಂದಿರಕ್ಕೆ ಬಂದು ದೇವರ ದರ್ಶನ ಪಡೆಯಬಹುದು ಎಂದು ತಿಳಿಸಿದರು. ಕೋಮಲ ವಿಜಯ ಭಿಸೆ, ನಮ್ರತಾ ಕುಮಾರ್ , ಮಾರುತಿ ಭಿಸೆ ಇದ್ದರು.

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ