ವಿಕ ಸುದ್ದಿಲೋಕ ಚಿಕ್ಕನಾಯಕನಹಳ್ಳಿ ತುಮಕೂರು ವಿವಿಧಿಯಲ್ಲಿನಡೆದ ಅಂತರ ಕಾಲೇಜು ಪುರುಷರ ಮತ್ತು ಮಹಿಳೆಯರ ಕುಸ್ತಿ ಮತ್ತು ಭಾರ ಎತ್ತುವ ಸ್ಪರ್ಧೆಯಲ್ಲಿಚಿಕ್ಕನಾಯಕನಹಳ್ಳಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು 4 ಚಿನ್ನ, 6 ಬೆಳ್ಳಿ ಹಾಗೂ 3 ಕಂಚಿನ ಪದಕ ಪಡೆದು ಉತ್ತಮ ಸಾಧನೆ ಮಾಡಿ ತಾಲೂಕು ಹಾಗೂ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಕುಸ್ತಿ ಸ್ಪರ್ಧೆ ಪುರುಷರ ವಿಭಾಗ: ಲೇಖನ್ ಚಿನ್ನದ ಪದಕ ಪಡೆದು ಪಂಜಾಬಿನ ಚಂಡೀಗಢನಲ್ಲಿನಡೆಯಲಿರುವ ರಾಷ್ಟ್ರೀಯ ಮಟ್ಟದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಕುಸ್ತಿ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ರೇಣುಕಾ ಪ್ರಸಾದ್ ಅಂತಿಮ ಬೆಳ್ಳಿ ಪದಕ ಪಡೆದರು. ಕುಸ್ತಿ ಸ್ಪರ್ಧೆ ಮಹಿಳೆಯರ ವಿಭಾಗ : ಪ್ರೀತಿ ಎಸ್ . ಮತ್ತು ರಶ್ಮಿ ಆರ್ . ಬೆಳ್ಳಿ ಪದಕ, ದಿವ್ಯಾ, ಪ್ರಿಯಾಂಕ ಆರ್ . ಕಂಚಿನ ಪದಕ ಪಡೆದರು ಭಾರ ಎತ್ತುವ ಸ್ಪರ್ಧೆ ಪುರುಷರ ವಿಭಾಗ : ಚಂದನ್ ಬಿ.ಎಸ್ . ಚಿನ್ನದ ಪದಕ ಮತ್ತು ಅತ್ಯುತ್ತಮ ಕ್ರೀಡಾಪಟು ಪ್ರಶಸ್ತಿ ಪಡೆದು ಮಧ್ಯಪ್ರದೇಶದ ಭೂಪಾಲ್ ನಲ್ಲಿನಡೆಯಲಿರುವ ದಕ್ಷಿಣ / ಪಶ್ಚಿಮ ವಲಯ ಅಂತರ ವಿಶ್ವ ವಿದ್ಯಾಲಯ ಭಾರ ಎತ್ತುವ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ವರುಣ್ ಆರ್ . ಬೆಳ್ಳಿ ಪದಕ ಹಾಗೂ ಅಭಿಲಾಷ್ ಬಿ.ಎ. ಮತ್ತು ಶ್ರೀಧರ್ ಎಂ. ಕಂಚಿನ ಪದಕ ಪಡೆದರು. ಭಾರ ಎತ್ತುವ ಸ್ಪರ್ಧೆ ಮಹಿಳೆಯರ ವಿಭಾಗ: ಪ್ರೀತಿ ಎಸ್ . ಚಿನ್ನದ ಪದಕ ಮತ್ತು ಅತ್ಯುತ್ತಮ ಕ್ರೀಡಾಪಟು ಪ್ರಶಸ್ತಿಗೆ ಭಾಜನರಾದರೆ, ದಿವ್ಯಾ ಚಿನ್ನದ ಪದಕ, ಯಶಸ್ವಿನಿ ಎಸ್ . ಮತ್ತು ರಶ್ಮಿ ಆರ್ . ಬೆಳ್ಳಿ ಪದಕ ಜಯಿಸಿದರು. ಗೆಲುವು ಸಾಧಿಸಿ ಪ್ರಶಸ್ತಿ ಪಡೆದ ವಿಜೇತ ವಿದ್ಯಾರ್ಥಿಗಳಿಗೆ ಕಾಲೇಜು ಅಭಿವೃದ್ಧಿ ಸಮಿತಿ, ಪ್ರಾಂಶುಪಾಲರಾದ ಡಾ.ಜ್ಯೋತಿ ಎಂ.ಜಿ., ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ಮುಖ್ಯಸ್ಥರಾದ ಡಾ. ಶೈಲೇಂದ್ರ ಕುಮಾರ್ ಎಸ್ .ಜೆ., ಭೋದಕ ಮತ್ತು ಬೋಧಕೇತರ ವರ್ಗ ಹಾಗೂ ವಿದ್ಯಾರ್ಥಿ ವೃಂದ ಅಭಿನಂದನೆ ಸಲ್ಲಿಸಿದೆ.

