ವಿಕ ಸುದ್ದಿಲೋಕ ಕಲಬುರಗಿ ಚಿತ್ತಾಪುರ ಪೊಲೀಸ್ ಠಾಣೆ ಮುಂಭಾಗದಲ್ಲಿ2019ರ ಆಗಸ್ಟ್ ನಲ್ಲಿಪೊಲೀಸರ ಮೇಲೆ ಕಲ್ಲುತೂರಾಟ ನಡೆಸಿದ ಪ್ರಕರಣ ಹಿಂಪಡೆದ ರಾಜ್ಯ ಸರಕಾರದ ಸಂಪುಟ ನಿರ್ಣಯಕ್ಕೆ ಕಲಬುರಗಿ ಹೈಕೋರ್ಟ್ ಪೀಠ ಮಂಗಳವಾರ ತಡೆ ನೀಡಿದೆ. ಇದರಿಂದ ರಾಜ್ಯ ಸರಕಾರಕ್ಕೆ ಮತ್ತೊಂದು ಹಿನ್ನಡೆಯಾಗಿದೆ. ಪ್ರಕರಣ ಹಿಂಪಡೆದರೆ ಪೊಲೀಸರ ಆತ್ಮಸ್ಥೈರ್ಯ ಕುಂದುತ್ತದೆ. ಆದ್ದರಿಂದ ಕಲ್ಲುತೂರಾಟ ಪ್ರಕರಣ ಹಿಂಪಡೆಯಬಾರದು ಎಂದು ಬೆಂಗಳೂರಿನ ಗಿರೀಶ್ ಭಾರದ್ವಾಜ್ ಎಂಬುವವರು ಸರಕಾರದ ನಿರ್ಧಾರದ ವಿರುದ್ಧ ಹೈಕೋರ್ಟ್ ನಲ್ಲಿಅರ್ಜಿ ಸಲ್ಲಿಕೆ ಮಾಡಿದ್ದರು. ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್ ಶಂಕರ ಅವರಿದ್ದ ಪೀಠ ವಿಚಾರಣೆ ನಡೆಸಿ, ರಾಜ್ಯ ಸರಕಾರದ ನಿರ್ಧಾರಕ್ಕೆ ತಡೆ ನೀಡಿ ಮುಂದಿನ ವಿಚಾರಣೆ ಡಿ.4ಕ್ಕೆ ಮುಂದೂಡಿದೆ. ಅರ್ಜಿ ಮಾನ್ಯದ ಸವಾಲು: ಸರಕಾರದ ಪರ ವಾದ ಮಂಡನೆ ಮಾಡಿದ್ದ ಸಿದ್ದು ಪಾಟೀಲ್ , ಅರ್ಜಿದಾರರು ಪ್ರಕರಣಕ್ಕೆ ಸಂಬಂಧ ಇಲ್ಲದ ಕಾರಣ ಅರ್ಜಿ ವಿಚಾರಣೆಗೆ ಯೋಗ್ಯವಲ್ಲಎಂದು ತಿಳಿಸಿದ್ದರು. ಈ ವೇಳೆ ಅರ್ಜಿದಾರರ ಪರ ಸುಹಾಸ್ ದೀಕ್ಷಿತ್ ವಾದ ಮಂಡನೆ ಮಾಡಿ, ಪೊಲೀಸ್ ವ್ಯವಸ್ಥೆಯ ಆತ್ಮಬಲ ಹೆಚ್ಚಳ ಮಾಡುವ ಅರ್ಜಿ ಇದಾಗಿದೆ ಎಂದು ಹೇಳಿದ್ದರು. ಅರ್ಜಿಯನ್ನು ಮಾನ್ಯ ಮಾಡಿದ ಹೈಕೋರ್ಟ್ , ಸರಕಾರದ ನಿರ್ಧಾರಕ್ಕೆ ತಡೆ ನೀಡಿತು. ಏನಿದು ಪ್ರಕರಣ?: 2019ರ ಬಧಿಕ್ರೀದ್ ಹಧಿಬ್ಬದ ವೇಳೆ ಆ.11ರಂದು ಚಿತ್ತಾಪುರದಲ್ಲಿಗೋವುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವಾಹನ ಹಿಡಿದ ಕೆಲ ಯವಕರು ವಾಹನವನ್ನು ಪೊಲೀಸ್ ಠಾಣೆಗೆ ಒಪ್ಪಿಸಿದ್ದರು. ಸ್ಥಳಕ್ಕೆ ಆಗಮಿಸಿದ ಕೆಲವು ಅನ್ಯ ಕೋಮಿನ ಯುವಕರು ಗಲಾಟೆ ಮಾಡಿದ್ದರು. ಇದಲ್ಲದೆ ಗೋ ರಕ್ಷಣೆ ಮಾಡಿದ್ದ ಯುವಕರನ್ನು ಠಾಣೆಯಿಂದ ಹೊರ ತಂದು ಹಲ್ಲೆಮಾಡಿದ್ದರು. ಈ ವೇಳೆ ಮಧ್ಯ ಪ್ರವೇಶ ಮಾಡಿದ್ದ ಪೊಲೀಸರು ಉದ್ರಿಕ್ತ ಗುಂಪಿನ ವಿರುದ್ಧ ಲಘು ಲಾಠಿ ಪ್ರಹಾರ ನಡೆಸಿದ್ದರು. ಇದರಿಂದ ಕೋಪಗೊಂಡ ಯುವಕರು ಪೊಲೀಸರ ಮೇಲೆ ಕಲ್ಲುತೂರಾಟ ನಡೆಸಿದ್ದರು. ಸ್ವಯಂಪ್ರೇರಿತ ಪ್ರಕರಣ ದಾಖಲು: ಪ್ರಕರಣ ನಡೆದ ಕೆಲವು ದಿನಗಳ ನಂತರ ಪೊಲೀಸ್ ಇಲಾಖೆ ಸ್ವಯಂ ಪ್ರೇರಿತವಾಗಿ ದೂರು ದಾಖಲು ಮಾಡಿಕೊಂಡು 13 ಆರೋಪಿಗಳ ವಿರುದ್ಧ
ಚಾಜ್ ರ್ ಶೀಟ್ ಸಹ ಸಲ್ಲಿಕೆ ಮಾಡಿದ್ದರು.

