ಮಾದರಿ ಗ್ರಾಪಂ ಕಟ್ಟಡಗಳ ನಿರ್ಮಾಣ

Contributed bydevarajuvksira@gmail.com|Vijaya Karnataka
Subscribe

ಶಿರಾ ತಾಲೂಕಿನಲ್ಲಿ ಅತ್ಯುತ್ತಮ ಗುಣಮಟ್ಟದ ಮಾದರಿ ಗ್ರಾಮ ಪಂಚಾಯಿತಿ ಕಟ್ಟಡಗಳು ನಿರ್ಮಾಣವಾಗುತ್ತಿವೆ. ಗ್ರಾಮ ಸ್ವರಾಜ್‌ ಯಶಸ್ವಿಯಾಗಲು ಉತ್ತಮ ಕಟ್ಟಡಗಳ ಅಗತ್ಯವಿದೆ ಎಂದು ವಿಧಾನ ಪರಿಷತ್‌ ಸದಸ್ಯ ಚಿದಾನಂದ ಎಂ. ಗೌಡ ಹೇಳಿದರು. ಚಿಕ್ಕನಹಳ್ಳಿ ಗ್ರಾಪಂ ನೂತನ ಕಟ್ಟಡ ಉದ್ಘಾಟನೆಗೊಂಡಿತು. ಸ್ಥಳೀಯ ಸಂಪನ್ಮೂಲಕ್ಕೆ ಆದ್ಯತೆ ನೀಡಿ ಅಭಿವೃದ್ಧಿಗೆ ಸಹಕರಿಸುವಂತೆ ಮನವಿ ಮಾಡಲಾಯಿತು. ಗ್ರಾಪಂಗೆ 5 ಲಕ್ಷ ರೂ. ಅನುದಾನ ಘೋಷಿಸಲಾಯಿತು.

model gram panchayat building construction in shira taluk

ವಿಕ ಸುದ್ದಿಲೋಕ ಶಿರಾ ಗ್ರಾಮಸ್ವರಾಜ್ ಕನಸು ಕೈಗೂಡಬೇಕೆಂದರೆ ಗ್ರಾಮ ಪಂಚಾಯಿತಿ ಹಾಗೂ ಸ್ಥಳೀಯ ಆಡಳಿತ ಸ್ವತಂತ್ರವಾಗಿ ಕಾರ ್ಯ ನಿರ್ವಹಿಸಬೇಕು. ಶಿರಾ ತಾಲೂಕಿನಲ್ಲಿರಾಜ್ಯದಲ್ಲಿಯೇ ಮಾದರಿಯಾದ ಗ್ರಾಮ ಪಂಚಾಯಿತಿ ಕಟ್ಟಡಗಳು ಅತ್ಯಂತ ಗುಣಮಟ್ಟದಲ್ಲಿನಿರ್ಮಾಣವಾಗುತ್ತಿವೆ. ಗ್ರಾಮ ಸ್ವರಾಜ್ ಯಶಸ್ವಿಯಾಗಲು ಉತ್ತಮ ಕಟ್ಟಡಗಳ ಅಗತ್ಯವಿದೆ ಎಂದು ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ. ಗೌಡ ಹೇಳಿದರು. ಶಿರಾ ತಾಲೂಕು ಚಿಕ್ಕನಹಳ್ಳಿ ಗ್ರಾಪಂ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿಮಾತನಾಡಿದ ಅವರು, ಸ್ಥಳೀಯ ಸಂಪನ್ಮೂಲಕ್ಕೆ ಹೆಚ್ಚಿನ ಆದ್ಯತೆ ನೀಡಿ ಅಭಿವೃದ್ಧಿಗೆ ಎಲ್ಲರೂ ಸಹಕರಿಸಿ. ನೂತನವಾಗಿ ಉದ್ಘಾಟನೆಯಾಗಿರುವ ಚಿಕ್ಕನಹಳ್ಳಿ ಗ್ರಾಪಂಗೆ ಮೂಲ ಸೌಲಭ್ಯಗಳಿಗಾಗಿ 5 ಲಕ್ಷ ರೂ. ಅನುದಾನ ನೀಡುತ್ತೇನೆ ಎಂದರು. ನೂತನ ಗ್ರಾಮ ಪಂಚಾಯಿತಿ ಕಟ್ಟಡ ಉದ್ಘಾಟಿಸಿ ಮಾತನಾಡಿದ ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್ .ಆರ್ . ಗೌಡ, ಗ್ರಾಮೀಣ ಭಾಗದಲ್ಲಿಮೂಲ ಸೌಕರ ್ಯ ಒದಗಿಸುವ ಕಾರ ್ಯ ಗ್ರಾಪಂನದ್ದಾಗಿದ್ದರೂ ಗ್ರಾಮಸ್ಥರೂ ಸಣ್ಣ ಪುಟ್ಟ ಕೆಲಸಗಳಿಗೆ ಕೈಜೋಡಿಸಬೇಕು. ಆಗ ಮಾತ್ರ ಪಂಚಾಯಿತಿ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು. ತಾಪಂ ಇಒ ಹರೀಶ್ ಮಾತನಾಡಿ, ನಾವು ಕನಸುಗಳನ್ನು ಬಿತ್ತಬಹುದು. ಆದರೆ ಅಲ್ಲಿನ ಗ್ರಾಪಂ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳ ಇಚ್ಛಾಶಕ್ತಿಯಿಂದ ಮಾತ್ರ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಸಾಧ್ಯ. ಶಿರಾ ತಾಲೂಕಿನಲ್ಲಿಹಲವು ಶಿಥಿಲಗೊಂಡ ಗ್ರಾಪಂ ಕಟ್ಟಡಗಳನ್ನು ಕೆಡವಿ ಹೊಸದಾಗಿ ನಿರ್ಮಾಣ ಮಾಡುವ ಕಾರ್ಯಗಳಿಗೆ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಸಂಸದರು ತಮ್ಮ ಅನುದಾನದಲ್ಲಿಸಹಾಯ ಮಾಡುತ್ತಿದ್ದಾರೆ ಎಂದರು. ಗ್ರಾಪಂ ಅಧ್ಯಕ್ಷ ರೂಪಶ್ರೀ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಉಪಾಧ್ಯಕ್ಷ ಕೆ.ಆರ್ . ಲೋಕೇಶ್ ಹಾಗೂ ಸದಸ್ಯರು, ಗ್ರಾಮಸ್ಥರು ಇದ್ದರು.

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ