ವಿಕ ಸುದ್ದಿಲೋಕ ಆಳಂದ ಸಣ್ಣ ಹಾಗೂ ಅತಿ ಸಣ್ಣ ರೈತರು ಕೃಷಿ ಇಲಾಖೆಗೆ ಅರ್ಜಿ ಸಲ್ಲಿಸಿ ಹನಿ ನೀರಾವರಿ ಪೈಪ್ ಗಳು ಪಡೆಯಲು ಆಗುತ್ತಿರುವ ವಿಳಂಬ ತಪ್ಪಿಸಲು ಗ್ರಾಮಗಳಿಗೆ ತೆರಳಿ ಫಲಾನುಭವಿ ರೈತರಿಗೆ ಪೈಪಗಳು ವಿತರ ಣೆ ಮಾಡಲಾಗುತ್ತಿದೆ ಎಂದು ಕಲಬುರಗಿ -ಬೀದರ-ಯಾದಗಿರಿ ಕೆಎಂಎಫ್ ಅಧ್ಯಕ್ಷ ಆರ್ .ಕೆ.ಪಾಟೀಲ್ ಹೇಳಿದರು. ತಾಲೂಕಿನ ಮುನ್ನಹಳ್ಳಿ ಗ್ರಾಮದ ಗ್ರಾಪಂ ಆವರಣದಲ್ಲಿರೈತರಿಗೆ ಹನಿ ನೀರಾವರಿ ಪೈಪ್ ಗಳನ್ನು ಫಲಾನುಭವಿ ರೈತರಿಗೆ ವಿತರಿಸಿ ಮಾತನಾಡಿದ ಅವರು, ಈ ಭಾರಿ ಹೆಚ್ಚಿನ ಮಳೆ ಹಾಗೂ ನೀರಿನ ಪ್ರವಾಹದಿಂದ ಮುಂಗಾರು ಬೆಳೆಗಳು ಲಾಸ್ ಆಗಿದ್ದು, ರೈತಾಪಿ ಜನರು ಸಂಕಷ್ಟ ದಲ್ಲಿರುವದನ್ನು ಮನಗಂಡು ರೈತರಿಗೆ ಅನುಕೂಲವಾಗಲು ತೊಗರಿ, ಹಿಂಗಾರು ಬೆಳೆ ಜೋಳ, ಕಡಲೆ, ಗೋದಿ ಮತ್ತಿತ್ತರ ಬೆಳೆಗಳು ಬೆಳೆಗಳಿಗೆ ನೀರುಣಿಸಲು ಅನು ಕೂಲವಾಗಲು ಪೈಪ್ ನೀಡುತ್ತಿದ್ದು, ಇದರ ಲಾಭ ಪಡೆಯುವಂತೆ ಸಲಹೆ ನೀಡಿದರು. ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಿವಪುತ್ರಪ್ಪ ಪಾಟೀಲ್ ಮಾತನಾಡಿದರು. ಗ್ರಾಪಂ ಅಧ್ಯಕ್ಷ ರಾಜಕುಮಾರ ಚವ್ಹಾಣ ಅಧ್ಯಕ್ಷತೆವಹಿಸಿ ದ್ದರು. ತಾಪಂ ಮಾಜಿ ಅಧ್ಯಕ್ಷ ಮೋಹನ ಗೌಡ ಪಾಟೀಲ್ , ಲಾಡ್ಲೇಸಾಬ ಮುಲ್ಲಾ, ಗ್ರಾಪಂ ಸದಸ್ಯ ನಂದಕಿಶೋರ ಭುಜುರುಕೆ, ಕರ್ನಾಟಕ ರಾಜ್ಯ ರೈತ ಸಂಘ, ಹಸೀರು ಸೇನೆ ತಾಲೂಕು ಕಾರ್ಯಾಧ್ಯಕ್ಷ ಸಿದ್ದು ವೇದಶಟ್ಟಿ,ಪಿಕೆಪಿಎಸ್ ಸಂಘದ ಅಧ್ಯಕ್ಷ ವೀರಭದ್ರಪ್ಪ ಕೋರೆ, ಪ್ರಮುಖರಾದ ಹಜರತ್ ಪಟೇಲ್ ಅಂಬೇವಾಡ, ಮಹಾ ದೇವ ಗುಂಡೂರೆ, ಭಾಗಪ್ಪ ತೀರ್ಥ, ರಸೂಲ್ ಸಿದ್ದಕಿ, ರೇವಪ್ಪ ಬಿರಾದಾರ ಸೇರಿ ಮುನ್ನಹಳ್ಳಿ, ಬೋಳನಿ ಗ್ರಾಮಗಳ ರೈತರು ಪಾಲ್ಗೊಂಡಿದ್ದರು. 107 ರೈತರಿಗೆ ಹನಿ ನೀರಾವರಿ ಪೈಪ್ ವಿಧಿತಧಿರಿಧಿಸಧಿಲಾಧಿಯಿಧಿತು.

