ಕುಂದಾಪುರ : ಅಸ್ಸಯ್ಯಿದ್ ಜಾಫರ್ ಅಸ್ಸಖಾಫ್ ಕೋಟೇಶ್ವರ ತಂಙಳ್ ಅವರ ನೇತೃತ್ವದಲ್ಲಿನಡೆಯುವ 15ನೇ ವರ್ಷದ ಹುಬ್ಬು ರಸೂಲ್ ಬುರ್ದಾ ಮಜ್ಲಿಸ ಹಾಗೂ ವಾರ್ಷಿಕ ಮಹಾಸಮ್ಮೇಳನದ ಘೋಷಣಾ ಸಮಾವೇಶ ಕಾರ್ಯಕ್ರಮ ಬುಧವಾರ ಮೂಡುಗೋಪಾಡಿ ಐಬಿಟಿ ಗಾರ್ಡನ್ ನಲ್ಲಿಜರುಗಿತು.
ಸಯ್ಯಿದ್ ಜುನೈದ್ ಅರ್ರಿಫಾಯೀ ತಂಙಳ್ ರಂಗಿನಕೆರೆ ದುವಾ ನೆರವೇರಿಸಿದರು. ಉಡುಪಿ ಜಿಲ್ಲಾಎಸ್ ಜೆಯು ಅಧ್ಯಕ್ಷ ಇಸ್ಮಾಯಿಲ್ ಮದನಿ ಮಾವಿನಕಟ್ಟೆ ಸಮಾವೇಶ ಉದ್ಘಾಟಿಸಿ ಮಾತನಾಡಿ, ಅಸ್ಸಯ್ಯಿದ್ ಜಾಫರ್ ಅಸ್ಸಖಾಫ್ ಕೋಟೇಶ್ವರ ತಂಙಳ್ 2008ರಲ್ಲಿಕೇರಳದಿಂದ ಕುಂದಾಪುರಕ್ಕೆ ಬಂದು ನೆಲೆಸಿದ್ದರು. ಇಲ್ಲಿದೀನಿ ಸಂಸ್ಥೆ ಸ್ಥಾಪನೆ ಮಾಡಿ ಆ ಮೂಲಕ ಧಾರ್ಮಿಕ ಸೇವೆ ಆರಂಭಿಸಿದರು. ಕಳೆದ 14 ವರ್ಷದಿಂದ ನಿರಂತರ ಬುರ್ದಾ ಮಜ್ಲಿಸ ಆಯೋಜಿಸುವ ಮೂಲಕ ಸರ್ವ ಸಹೋದರರಿಗೂ ಚಿರಪರಿಚಿತರಾಗಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಐಬಿಟಿ ಗಾರ್ಡನ್ ಚೇರೆಮೆನ್ ಸಯ್ಯಿದ್ ಜಾಫರ್ ಅಸ್ಸಖಾಫ್ ಡಿ.27 ರಂದು ನಡೆಯುವ 15ನೇ ಹುಬ್ಬುರ್ರಸೂಲ್ ಗ್ರ್ಯಾಂಡ್ ಬುರ್ದಾ ಕಾನ್ಫರೆನ್ಸ್ ಪೋಸ್ಟರ್ ಬಿಡುಗಡೆಗೊಳಿಸಿದರು. ಉಡುಪಿ ಜಿಲ್ಲೆಸುನ್ನೀ ಕೋ- ಓರ್ಡಿನೇಷನ್ ಅಧ್ಯಕ್ಷಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ, ಉಡುಪಿ ಜಿಲ್ಲಾಎಸ್ .ವೈ.ಎಸ್ . ಅಧ್ಯಕ್ಷ ಅಬ್ದುಲ್ ಲತೀಫ್ ಫಾಳಿಲಿ, ಉಡುಪಿ ಜಿಲ್ಲಾಎಸ್ ಜೆಎಂ ಅಧ್ಯಕ್ಷ ಅಬ್ದುರ್ರಝಾಕ್ ಖಾಸಿಮಿ ಕಾಪು, ಮೂಡು ಗೋಪಾಡಿ ಆರ್ ಜೆಎಂ ಖತೀಬರಾದ ಖುಬೈಬ್ ಸಖಾಫಿ, ಎಂಜೆಎಂ ಕೋಡಿ ಮುದರ್ರಿಸ್ ರಾಶಿದ್ ಸಖಾಫಿ ಕೋಡಿ, ಐಬಿಟಿ ಗಾರ್ಡನ್ ಪ್ರಿನ್ಸಿಪಾಲ್ ಸಯ್ಯಿದ್ ಅಲೀ ಯಾಸಿರ್ ಅಸ್ಸಖಾಫ್ ಅಹ್ಸನಿ, ಕುಂದಾಪುರ ತಾಲೂಕು ಎಸ್ ಜೆಯು ಪ್ರಧಾನ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಸಖಾಫಿ ಕೋಡಿ, ಹಂಗಳೂರು ಎಂಜೆಎಂ ಮುದರ್ರಿಸ್ ಸಿದ್ದೀಕ್ ಸಖಾಫಿ, ಗುಲ್ವಾಡಿ ಎಂಜೆಎಂ ಖತೀಬರಾದ ಸಫ್ವಾನ್ ಸಅದಿ, ಉಡುಪಿ ಜಿಲ್ಲಾಕೆಎಂಜೆ ಅಧ್ಯಕ್ಷ ಬಿಎಸ್ ಎಫ್ ರಫೀಕ್ ಹಾಜಿ, ಐಬಿಟಿ ಗಾರ್ಡನ್ ಬಿಲ್ಡಿಂಗ್ ಸಮಿತಿ ಅಧ್ಯಕ್ಷ ಶಾಬಾನ್ ಹಂಗ್ಲೂರ್ , ಚೆರಿಯಬ್ಬ ಹಾಜಿ ಮಾವಿನಕಟ್ಟೆ, ಅಂದುಮೈ ಹಾಜಿ ನಾವುಂದ, ಅಬೂ ಮುಹಮ್ಮದ್ , ಅಷ್ಪಾಕ್ ಕೌನ್ಸಿಲರ್ ಕುಂದಾಪುರ, ಕರ್ನಾಟಕ ರಾಜ್ಯ ಎಸ್ ಎಂಎ ಕೋಶಾಧಿಕಾರಿ ಮನ್ಸೂರ್ ಕೋಡಿ, ಹನೀಫ್ ಹಾಜಿ ಅಂಬಾಗಿಲು, ಮೊಹಮ್ಮದ್ ಹಾಜಿ ಮೂಡುಗೋಪಾಡಿ, ವಸೀಂ ಬಾಷಾ ಕುಂದಾಪುರ, ಮೋನಾಕ ಕೋಡಿ, ಉಡುಪಿ ಜಿಲ್ಲಾಎಸ್ ಎಂಎ ಜಿಲ್ಲಾಧ್ಯಕ್ಷ ಹುಸೇನ್ ಮೋನಾಕ ಕೋಟ ಪಡುಕರೆ, ಮೂಡುಗೋಪಾಡಿ ಆರ್ ಜೆಎಂ ಜಿ.ಮೊಹಮ್ಮದ್ ಉಪಸ್ಥಿತರಿದ್ದರು. ಐಬಿಟಿ ಗಾರ್ಡನ್ ಪ್ರಧಾನ ಕಾರ್ಯದರ್ಶಿ ಬಿ.ಎಂ.ಅಬ್ದುಲ್ ನಾಸಿರ್ ಮೂಡುಗೋಪಾಡಿ ಸ್ವಾಗತಿಸಿದರು. ಐಬಿಟಿ ಗಾರ್ಡನ್ ಜನರಲ್ ಮ್ಯಾನೇಜರ್ ಅಮೀರ್ ಖಾನ್ ಅಹ್ಸನಿ ವಂದಿಸಿದರು.
ಪೋಟೊ//31ಕೆ-ಜಿಪಿಡಿ//

