ನಗರ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ * ನೆರೆ ಮನೆ ಮಹಿಳೆಯ ಸಮಯಪ್ರಜ್ಞೆ
ವಿಕ ಸುದ್ದಿಲೋಕ ಮಂಗಳೂರು
ನಗರದ ಅಪಾರ್ಟ್ ಮೆಂಟ್ ವೊಂದರಲ್ಲಿವಾಸಿಸುತ್ತಿದ್ದ ಹಿರಿಯ ನಾಗರಿಕ ಮಹಿಳೆಯೊಬ್ಬರನ್ನು ಡಿಜಿಟಲ್ ಅರೆಸ್ಟ್ ಗೊಳಪಡಿಸಿ 17 ಲಕ್ಷ ರೂ. ವಂಚಿಸಿದ ಪ್ರಕರಣವನ್ನು ನಗರ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ ಸಂತ್ರಸ್ತೆ ಕಳೆದುಕೊಂಡಿದ್ದ ಹಣವನ್ನು ಮರಳಿ ಖಾತೆಗೆ ಜಮೆ ಮಾಡಿಸುವಲ್ಲಿಯಶಸ್ವಿಯಾಗಿದ್ದಾರೆ.
ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿನಗರ ಕಾನೂನು ಮತ್ತು ಸುವ್ಯವಸ್ಥಾ ವಿಭಾಗದ ಉಪಆಯುಕ್ತ ಮಿಥುನ್ ಮಾತನಾಡಿ, ಅ. 23ರಂದು ಬೆಳಗ್ಗೆ 10ಗಂಟೆ ಸುಮಾರಿಗೆ ಬಿಜೈ ನಿವಾಸಿ 79ರ ಹರೆಯದ ಮಹಿಳೆಗೆ ಪೊಲೀಸ್ ಸಮವಸ್ತ್ರದಲ್ಲಿದ್ದ ವ್ಯಕ್ತಿಯೊಬ್ಬ ವಾಟ್ಸ್ ಆ್ಯಪ್ ಮೂಲಕ ವಿಡಿಯೋ ಕರೆ ಮಾಡಿ ಮಹಿಳೆಯ ಬಳಿ ನಿಮಗೆ ಪ್ರಕರಣವೊಂದರಲ್ಲಿಅರೆಸ್ಟ್ ವಾರೆಂಟ್ ಜಾರಿಯಾಗಿದ್ದು, ಬಂಧನದ ಬೆದರಿಕೆಯೊಡ್ಡಿದ್ದಾನೆ. ಬಂಧನದಿಂದ ಪಾರಾಗಲು ಕೂಡಲೇ ನಿಮ್ಮ ಖಾತೆಯಲ್ಲಿರುವ ಹಣವನ್ನು ಠೇವಣಿ ಮಾಡುವಂತೆ ಹಾಗೂ ಪರಿಶೀಲನೆ ಬಳಿಕ ಹಣವನ್ನು ವರ್ಗಾಯಿಸುವುದಾಗಿ ತಿಳಿಸಿದ್ದಾನೆ. ಪ್ರಕ್ರಿಯೆ ಪೂರ್ಣಗೊಳ್ಳುವ ತನಕ ಈ ಮಾಹಿತಿಯನ್ನು ಯಾರಿಗೂ ತಿಳಿಸದಂತೆ ಭಯ ಹುಟ್ಟಿಸಿ ಸುಮಾರು 5 ಗಂಟೆಗಳ ಕಾಲ ಡಿಜಿಟಲ್ ಅರೆಸ್ಟ್ ನಲ್ಲಿಮಹಿಳೆಯನ್ನು ಇರಿಸಲಾಗುತ್ತದೆ. ಈ ಅವಧಿಯಲ್ಲಿಮಹಿಳೆ ಬ್ಯಾಂಕ್ ಗೆ ತೆರಳಿ ತನ್ನ ಸ್ಥಿರ ಠೇವಣಿ ಖಾತೆಯಲ್ಲಿದ್ದ 17 ಲಕ್ಷ ರೂ. ಹಣವನ್ನು ತನ್ನ ಬ್ಯಾಂಕ್ ಶಾಖೆಗೆ ತೆರಳಿ ಆರೋಪಿಯ ಖಾತೆಗೆ ಸಂಜೆ 3ರ ವೇಳೆಗೆ ವರ್ಗಾಯಿಸಿದ್ದಾರೆ.
ನೆರೆ ಮನೆ ಮಹಿಳೆಯ ಸಮಯಪ್ರಜ್ಞೆ: ಹಣ ವರ್ಗಾವಣೆಯಾದ ಬಳಿಕ ಸಂತ್ರಸ್ತ ಹಿರಿಯ ನಾಗರಿಕ ಮಹಿಳೆ ನೆರೆಯ ಫ್ಲ್ಯಾಟ್ ನಿವಾಸಿ ಮಹಿಳೆಯೊಬ್ಬರಿಗೆ ಬಳಿ ತಿಳಿಸಿದ್ದಾರೆ. ಕೂಡಲೇ ಮಹಿಳೆಯ ಜತೆಗೆ ಸೈಬರ್ ಅಪರಾಧ ಪೊಲೀಸ್ ಠಾಣೆಗೆ ತೆರಳಿ ದೂರು ನೀಡುತ್ತಾರೆ. ತಕ್ಷಣ ಠಾಣಾ ಠಾಣಾಧಿಕಾರಿ 1930 ಸಹಾಯವಾಣಿ ಮೂಲಕ ಬ್ಯಾಂಕ್ ಖಾತೆಯಲ್ಲಿದ್ದ 17 ಲಕ್ಷ ರೂ.ಗಳನ್ನು ಬ್ಲಾಕ್ ಮಾಡಿಸುವಲ್ಲಿಯಶಸ್ವಿಯಾಗಿದ್ದಾರೆ. ಅ. 24ರಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಅನುಮತಿ ಪಡೆದು ಅ.27ರಂದು ನ್ಯಾಯಾಲಯ ಹಣ ಬಿಡುಗಡೆಗೆ ಆದೇಶ ನೀಡಿದೆ. ಆ ಆದೇಶದಂತೆ ಸಂತ್ರಸ್ತೆಯ ಖಾತೆಗೆ ಹಣ ವರ್ಗಾವಣೆ ಮಾಡಲಾಗಿದೆ.
ಪೊಲೀಸರ ಕ್ಷಿಪ್ರ ಕಾರ್ಯಾಚರಣೆ: ಪ್ರಕರಣದಲ್ಲಿತ್ವರಿತಗತಿಯಲ್ಲಿಸಂತ್ರಸ್ತೆ ದೂರು ನೀಡಿದ ಕಾರಣ ಕ್ಷಿಪ್ರಗತಿಯ ಕಾರ್ಯಾಚರಣೆ ಮೂಲಕ ಪೊಲೀಸರು ಸಂತ್ರಸ್ತೆ ಬ್ಯಾಂಕ್ ಖಾತೆಯಿಂದ ಸೈಬರ್ ಖದೀಮರ ಖಾತೆಗೆ ವರ್ಗಾವಣೆಯಾಗುತ್ತಿದ್ದ ಹಣವನ್ನು ತಡೆಯಲು ಸಾಧ್ಯವಾಗಿದೆ. ಈ ಮೂಲಕ ಪೂರ್ಣ ಹಣ ವಶಪಡಿಸಿಕೊಳ್ಳಲು ಸಾಧ್ಯವಾಗಿದೆ. ಇಂತಹ ಬಹುತೇಕ ಪ್ರಕರಣಗಳಲ್ಲಿಸಂತ್ರಸ್ತರು ದೂರು ನೀಡುವಾಗ ವಿಳಂಬವಾಗಿ ಹಣ ಕಳೆದುಕೊಳ್ಳುತ್ತಾರೆ. ಆದರೆ ಈ ಪ್ರಕರಣದಲ್ಲಿಗೋಲ್ಡನ್ ಅವರ್ ಬಳಕೆ ಮಾಡಿದ ಕಾರಣ ಸಂತ್ರಸ್ತರಿಗೆ ಹಣ ವಾಪಸ್ ನೀಡಲಾಗಿದೆ.
ಹಿರಿಯ ನಾಗರಿಕರೇ ಟಾರ್ಗೆಟ್ ! (ಬಾಕ್ಸ್ )
ಮಂಗಳೂರು ನಗರ ವ್ಯಾಪ್ತಿಯಲ್ಲಿಈ ವರ್ಷ 8 ಪ್ರಕರಣಗಳಲ್ಲಿ ಸೈಬರ್ ಖದೀಮರು ವಂಚನೆ ಗೈದಿದ್ದು, ಇದರಲ್ಲಿ35.98 ಲಕ್ಷ ರೂ.ಗಳನ್ನು ವಶಪಡಿಸಲಾಗಿದೆ. ಡಿಜಿಟಲ… ಅರೆಸ್ಟ್ ಹೆಸರಿನಲ್ಲಿಹಿರಿಯ ನಾಗರಿಕರು ಹೆಚ್ಚಾಗಿ ಬಲಿಪಶುಗಳಾಗುತ್ತಿದ್ದಾರೆ. ವಾಟ್ಸ್ ಆ್ಯಪ್ ಕರೆಗಳ ಮೂಲಕ ಅಪರಿಚಿತ ವ್ಯಕ್ತಿಗಳು ಕರೆ ಆನ್ ಲೈನ್ ಮೂಲಕ ಹಣ ವರ್ಗಾವಣೆ ಒತ್ತಾಯಿಸಿದಾಗ ವಿಚಲಿತರಾಗದೆ, ಭಯಗೊಳ್ಳದೆ ಕರೆ ಕಟ್ ಮಾಡಿ ತಕ್ಷಣ ಸೈಬರ್ ಅಪರಾಧ ಪೊಲೀಸ್ ಠಾಣೆಗೆ ಸಂಪರ್ಕಿಸಬೇಕು ಎಂದು ಡಿಸಿಪಿ ಮಿಥುನ್ ತಿಳಿಸಿದ್ದಾರೆ.
ಹೂಡಿಕೆ ನೆಪದಲ್ಲೂವಂಚನೆ: ಕಮಿಷನರ್
ಆನ್ ಲೈನ್ ವಂಚಕರು ತನ್ನ ವಂಚನಾ ಜಾಲಕ್ಕೆ ನಾನಾ ರೀತಿ ಐಡಿಯಾಗಳನ್ನು ಹೆಣೆಯುತ್ತಾರೆ. ಇದೀಗ ಡಿಜಿಟಲ್ ಹೂಡಿಕೆ ಹಗರಣಗಳು ಹೆಚ್ಚುತ್ತಿದ್ದು, ಹೆಚ್ಚಿನ ಲಾಭ ನೀಡುವ ನೆಪದಲ್ಲಿವಂಚನೆ ಮಾಡುತ್ತಿದ್ದಾರೆ. ಷೇರು ಮಾರುಕಟ್ಟೆ ಹೂಡಿಕೆ ಆರ್ ಬಿಐ/ಸೆಬಿಯ ಮಾನ್ಯತೆ ಪಡೆದಿದೆಯೋ ಇಲ್ಲವೋ ಎಂಬ ಸಂಪೂರ್ಣ ಮಾಹಿತಿ ತಿಳಿದುಕೊಳ್ಳದೇ ಡಿಮ್ಯಾಚ್ ಅಕೌಂಚ್ ಇಲ್ಲದ ನಕಲಿ ಶೇರ್ ಮಾರ್ಕೆಟ್ ನಲ್ಲಿಹಣ ಹೂಡಿಕೆ ಮಾಡುವುದರಿಂದ ಮೋಸವಾಗುತ್ತಿದೆ. ಈ ಬಗ್ಗೆ ಮನೆ ಮನೆ ಪೊಲೀಸ್ ಅಲ್ಲದೆ, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಮೂಲಕವೂ ಪೊಲೀಸರು ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದರು.
31ಎಂಎನ್ ಜಿ-ಡಿಜಿಟಲ್ ಅರೆಸ್ಟ್ ಲೇಡಿ
ಡಿಜಿಟಲ್ ಅರೆಸ್ಟ್ ಗೊಳಗಾದ ಮಹಿಳೆ ದಾಖಲೆ ಹಸ್ತಾಂತರ
31ಎಂಎನ್ ಜಿ-ಡಿಜಿಟಲ್ ಅರೆಸ್ಟ್ ಹೆಲ್ಪ್
ಹಿರಿಯ ನಾಗರಿಕರಿಗೆ ಸಹಾಯ ಮಾಡಿದ ಮಹಿಳೆ

