ನ.5 ರಂದು ‘ಕೆರೆ ನೀರಿಗಾಗಿ ಕಾಲ್ನಡಿಗೆ’

Contributed bymaheshmadahalli.vk@gmail.com|Vijaya Karnataka
Subscribe

ಗುಂಡ್ಲುಪೇಟೆ ತಾಲೂಕಿನ ಕೆರೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ನ.5 ರಂದು 'ಕೆರೆ ನೀರಿಗಾಗಿ ಕಾಲ್ನಡಿಗೆ' ಹಮ್ಮಿಕೊಳ್ಳಲಾಗಿದೆ. ಮಾಜಿ ಶಾಸಕ ಸಿ.ಎಸ್‌.ನಿರಂಜನ್‌ಕುಮಾರ್‌ ಅವರು ಈ ಮಾಹಿತಿ ನೀಡಿದರು. ಶಾಸಕರು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೆರೆಗಳು ಬತ್ತಿ ಹೋಗಿವೆ ಎಂದು ಅವರು ಆರೋಪಿಸಿದರು. ಈ ಪ್ರತಿಭಟನೆಯಲ್ಲಿ ಸಂಸದ ಯದುವೀರ ಕೃಷ್ಣದತ್ತ ಒಡೆಯರ್‌ ಅವರು ಚಾಲನೆ ನೀಡುವರು. ಎಲ್ಲರೂ ಪಾಲ್ಗೊಳ್ಳುವಂತೆ ಮನವಿ ಮಾಡಲಾಗಿದೆ.

on nov 5 farmers protest warning to cm

ವಿಕ ಸುದ್ದಿಲೋಕ ಗುಂಡ್ಲುಪೇಟೆ ತಾಲೂಕಿನ ರೈತರ ಆತಂಕದ ವಿಷಯದಲ್ಲಿಕಣ್ಣು, ಕಿವಿ ಇಲ್ಲದಂತೆ ವರ್ತಿಸುತ್ತಿರುವ ಸರಕಾರ, ಶಾಸಕರು ಮತ್ತು ಅಧಿಕಾರಿಗಳನ್ನು ಎಚ್ಚರಿಸುವ ಮೂಲಕ ತಾಲೂಕಿನ ಕೆರೆಗಳಿಗೆ ನೀರು ತುಂಬಿಸಲು ‘ ಕೆರೆ ನೀರಿಗಾಗಿ ಕಾಲ್ನಡಿಗೆ ’ಯನ್ನು ನ.5 ರಂದು ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ, ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್ .ನಿರಂಜನ್ ಕುಮಾರ್ ತಿಳಿಸಿದರು. ‘‘ನಮ್ಮ ಸರಕಾರದ ಅವಧಿಯಲ್ಲಿಸರಕಾರ ಮತ್ತು ಸಚಿವರ ಕಾಳಜಿ ಮತ್ತು ನನ್ನ ಆಸಕ್ತಿ ಮತ್ತು ಜವಾಬ್ದಾರಿ ಫಲವಾಗಿ ಸತತ ಮೂರು ವರ್ಷಗಳು ಕೆರೆಗಳು ಭರ್ತಿಯಾಗಿದ್ದವು. ಜತೆಗೆ ಮಳೆ ಕಾರಣಕ್ಕೂ ಅಂತರ್ಜಲ ವೃದ್ಧಿಯಾಗಿ ಸಮೃದ್ಧಿಯಿಂದ ತಾಲೂಕಿನ ರೈತರು ನೀರಾವರಿ ಕೃಷಿ ಮಾಡುತ್ತಿದ್ದರು. ಆದರೆ ಈಗಿನ ಸರಕಾರದಲ್ಲಿಕೆರೆಗಳಿಗೂ ನೀರಿಲ್ಲ. ಮಳೆಯೂ ಇಲ್ಲದ ಕಾರಣ ಅಂತರ್ಜಲ ಕುಸಿತ ಕಾಣುತ್ತಿದ್ದು, ಮುಂದೇನು ಎಂಬ ಆತಂಕ ರೈತರನ್ನು ಕಾಡುತ್ತಿದೆ,’’ ಎಂದರು. ‘‘ಕ್ಷೇತ್ರದ ಶಾಸಕರು ರೈತರ ಹೋರಾಟದ ನಂತರ ಕೆರೆಹಳ್ಳಿ ಪಂಪ್ ಹೌಸ್ ಗೆ ತೆರಳಿ ಮೋಟಾರು ಕೆಟ್ಟಿದೆ. ನವೆಂಬರ್ ತಿಂಗಳಲ್ಲಿಕೆರೆಗಳಿಗೆ ನೀರು ಹರಿಸಲಾಗುತ್ತದೆ ಎಂಬ ಹೇಳಿಕೆ ನೀಡಿ ಸುಮ್ಮನಾಗಿದ್ದಾರೆ. ಪ್ರತಿ ವರ್ಷ ಜನರಿವರಿಯಿಂದ ಜೂನ್ ವರೆಗಿನ ಅವಧಿಯಲ್ಲಿಮೋಟಾರು ಇತರೆ ಪರಿಕರಗಳ ನಿರ್ವಹಣೆ ಬಗ್ಗೆ ಗಮನ ಕೊಡಬೇಕಾಗಿರುತ್ತದೆ. ಇದರ ಪರಿವೇ ಇವರಿಗೆ ಇಲ್ಲ. ಜಿಲ್ಲಾಧಿಕಾರಿಗಳ ಸಭೆಯಲ್ಲೂಕೆರೆಗಳಿಗೆ ನೀರು ತುಂಬಿಸುವ ವಿಷಯದಲ್ಲಿಶಾಸಕರು ಮಾತನಾಡಿಲ್ಲ. ಜನ ತನ್ನನ್ನು ಆಯ್ಕೆ ಮಾಡಿದ್ದು, ನಾನು ಮನೆ ಯಜಮಾನನಂತೆ ಇರಬೇಕು ಎಂಬುದನ್ನು ಇವರು ಮರೆತಿದ್ದಾರೆ. ರೈತರು ಸೇರಿ ತನಗೆ ಯಾರೂ ಬೇಡ ಎಂಬಂತೆ ವರ್ತಿಸುತ್ತಿದ್ದಾರೆ. ಇವರಿಗೆ ರೈತರ ಬಗ್ಗೆ ಯಾಕಿಷ್ಟು ನಿರ್ಲಕ್ಷ್ಯ, ಇವರಿಗೆ ಸಂಬಂಧ ಇಲ್ಲವೇ ಅಥವಾ ಕಷ್ಟ ಅರ್ಥ ಆಗುತ್ತಿಲ್ಲವಾ ಎಂಬುದೇ ಅರ್ಥವಾಗುತ್ತಿಲ್ಲ,’’ ಎಂದು ಪತ್ರಿಕಾಗೋಷ್ಠಿಯಲ್ಲಿಬೇಸರ ವ್ಯಕ್ತಪಡಿಸಿದರು. ‘‘ತಮ್ಮ ವೈಫಲ್ಯ ಮುಚ್ಚಿಕೊಳ್ಳಲು, ಪ್ರತಿಭಟನೆ ನಡೆಸುವ ರೈತರ ಮೇಲೆ ಸಿಟ್ಟು ತೋರಿಸುವ ಬದಲು ಕೆಲಸದಲ್ಲಿಶಾಸಕರು ಸಿಟ್ಟು ತೋರಿಸಬೇಕು. ಜನರ ನಂಬಿಕೆ ವಿಶ್ವಾಸ ಕಳೆದುಕೊಂಡು ನಾಟಕೀಯದ ವರ್ತನೆ ತೋರಬಾರದು,’’ ಎಂದು ಸಲಹೆ ನೀಡಿದರು. ‘‘ಕೆರೆಗಳಿಗೆ ನೀರು ತುಂಬಿಸುವ ವಿಷಯವನ್ನು ಪಕ್ಷವು ಬೆಳಗಾವಿಯಲ್ಲಿನಡೆಯುವ ಚಳಿಗಾಲದ ಅಧಿವೇಶನದಲ್ಲಿಪ್ರಸ್ತಾಪಿಸುತ್ತದೆ. ಇದಲ್ಲದೇ ಮುಂದಿನ ಹೋರಾಟದ ಬಗ್ಗೆಯೂ ಚಿಂತಿಸಲಾಗುತ್ತಿದೆ,’’ ಎಂದು ಹೇಳಿದರು. ‘‘ನ.5 ರಂದು ಶಿವಪುರ ಬಳಿಯ ಕಲ್ಲುಕಟ್ಟೆ ಕೆರೆ ಬಳಿ ಕೆರೆ ನೀರಿಗಾಗಿ ಕಾಲ್ನಡಿಗೆಗೆ ಮೈಸೂರು-ಕೊಡಗು ಕ್ಷೇತ್ರದ ಸಂಸದರು ಮತ್ತು ರಾಜ ವಂಶಸ್ಥರಾದ ಯದುವೀರ ಕೃಷ್ಣದತ್ತ ಒಡೆಯರ್ ಚಾಲನೆ ನೀಡುವರು. ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಎನ್ .ಮಹೇಶ್ , ಮಾಜಿ ಸಂಸದ ಪ್ರತಾಪ್ ಸಿಂಹ, ಮಾಜಿ ಶಾಸಕರಾದ ಎಸ್ .ಬಾಲರಾಜು ಮತ್ತು ಜಿಲ್ಲೆಯ ಎಲ್ಲಾಪಕ್ಷದ ಮುಖಂಡರು ಪಾಲ್ಗೊಳ್ಳಲಿದ್ದಾರೆ. ಆದ್ದರಿಂದ ತಾಲೂಕಿನ ಎಲ್ಲಾರೈತರು, ಸಾರ್ವಜನಿಕರು ಕೆರೆ ನೀರಿಗಾಗಿ ಕಾಲ್ನಡಿಗೆಯಲ್ಲಿಪಾಲ್ಗೊಳ್ಳಬೇಕು,’’ ಎಂದು ಮನವಿ ಮಾಡಿದರು. ಪಕ್ಷದ ಮಂಡಲ ಅಧ್ಯಕ್ಷ ಸಿ.ಮಹದೇವಪ್ರಸಾದ್ , ಮುಖಂಡರಾದ ಎಲ್ .ಸುರೇಶ್ , ಎನ್ .ಮಲ್ಲೇಶ್ , ನವೀನ್ ಮೌರ್ಯ ಹಾಜರಿದ್ದರು.

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ