ವಿಕ ಫೋಕಸ್ ( ಲೋಕಲ್ ಲೀಡ್ ) ಇಎಸ್ ಐ ಸೌಲಭ್ಯಕ್ಕೆ ವೇತನ ನಿರ್ಬಂಧ

Contributed byadarshkodi15@gmail.com|Vijaya Karnataka
Subscribe

ಕಾರ್ಮಿಕರ ರಾಜ್ಯ ವಿಮಾ ನಿಗಮದ (ಇಎಸ್‌ಐ) ಸೌಲಭ್ಯಕ್ಕೆ ವೇತನ ಮಿತಿ ಬೇಡ ಎಂಬ ಕೂಗು ಹೆಚ್ಚಾಗಿದೆ. ೨೧ ಸಾವಿರ ರೂ.ಗಿಂತ ಹೆಚ್ಚು ವೇತನ ಪಡೆಯುವ ಕಾರ್ಮಿಕರಿಗೆ ಸದ್ಯ ಇಎಸ್‌ಐ ಸೌಲಭ್ಯ ಸಿಗುತ್ತಿಲ್ಲ. ಅಸಂಘಟಿತ ವಲಯದ ಕಾರ್ಮಿಕರಿಗೂ ಆರೋಗ್ಯ ಸೌಲಭ್ಯ ಒದಗಿಸಬೇಕೆಂದು ಕಾರ್ಮಿಕ ಸಂಘಟನೆಗಳು ಆಗ್ರಹಿಸಿವೆ. ಕೇರಳ, ಪಶ್ಚಿಮ ಬಂಗಾಳದ ಮಾದರಿಯಲ್ಲಿ ರಾಜ್ಯದ ಅಸಂಘಟಿತ ಕಾರ್ಮಿಕರಿಗೆ ಇಎಸ್‌ಐ ಮಾದರಿಯಲ್ಲಿ ಆರೋಗ್ಯ ಸೌಲಭ್ಯ ನೀಡಬೇಕು ಎಂದು ಒತ್ತಾಯಿಸಲಾಗಿದೆ.

salary restriction on esi facility workers outrage

ವಿಕ ಫೋಕಸ್ ( ಲೋಕಲ್ ಲೀಡ್ )

‘ಇಎಸ್ ಐ’ಗೆ ವೇತನ ಮಿತಿ ಬೇಡ

ಕನಿಷ್ಠ ವೇತನದ ನಿಯಮಕ್ಕೆ ಅಸಮಾಧಾನ | ಅಸಂಘಟಿತ ಕಾರ್ಮಿಕರಿಗೂ ಸೌಲಭ್ಯ ಒದಗಿಸಲು ಆಗ್ರಹ

ಆದರ್ಶ ಕೋಡಿ ಬೆಂಗಳೂರು ಗ್ರಾಮಾಂತರ

ada್ಟshkಟdಜಿ15ಃಜಞaಜ್ಝಿ.್ಚಟಞ

ಕಾರ್ಮಿಕರ ಆರೋಗ್ಯ ಸೇವೆಗೆ ಅನುಕೂಲವಾಗಲೆಂದು ಕಾರ್ಮಿಕರ ರಾಜ್ಯ ವಿಮಾ ನಿಗಮದ ವತಿಯಿಂದ ಒದಗಿಸುವ ಇಎಸ್ ಐ ಸೌಲಭ್ಯಕ್ಕೆ ವೇತನ ಮಿತಿ ಬೇಡವೆಂಬ ಕೂಗು ಹೆಚ್ಚಾಗಿದೆ.

ರಾಜ್ಯದಲ್ಲಿಸುಮಾರು 1 ಕೋಟಿಗೂ ಹೆಚ್ಚು ಮಂದಿ ಇಎಸ್ ಐ ಸೌಲಭ್ಯವನ್ನು ಪಡೆಯುವ ಕಾರ್ಮಿಕರಿದ್ದಾರೆ. ಇಎಸ್ ಐನಡಿ ನಾನಾ ವಿಮಾ ಆಸ್ಪತ್ರೆಗಳಲ್ಲಿಕಾರ್ಮಿಕರಿಗೆ ಅಗತ್ಯವಾದ ಆರೋಗ್ಯ ಸೌಲಭ್ಯ ಒದಗಿಸಲಾಗುತ್ತಿದೆ. ಆದರೆ ಸರಕಾರ 21 ಸಾವಿರ ರೂಪಾಯಿಗೂ ಹೆಚ್ಚು ವೇತನ ಪಡೆಯುತ್ತಿರುವ ಕಾರ್ಮಿಕರಿಗೆ ಇಎಸ್ ಐ ಸೌಲಭ್ಯ ನೀಡುತ್ತಿಲ್ಲ. ಜತೆಗೆ ಅಸಂಘಟಿತ ವಲಯಕ್ಕೂ ಯಾವುದೇ ಆರೋಗ್ಯ ಸೌಲಭ್ಯಗಳಿಲ್ಲ. ಈ ಬಗ್ಗೆ ಸಾಕಷ್ಟು ಬಾರಿ ಕಾರ್ಮಿಕ ಸಂಘಟನೆಗಳು ಸರಕಾರಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.

ನಾನಾ ಸಂಘಟನೆಗಳಿಂದ ಒತ್ತಡ:

ಕಾರ್ಮಿಕರು ಹಾಗೂ ಮಾಲೀಕರ ಹಣದ ಪಾಲಿನಲ್ಲಿಈ ಸೌಲಭ್ಯವನ್ನು ಒದಗಿಸಲಾಗುತ್ತದೆ. ಎಲ್ಲಾಕಾರ್ಮಿಕರಿಗೂ ಯಾವುದೇ ವೇತನ ಮಿತಿಯಿಲ್ಲದೇ ಈ ಸೌಲಭ್ಯ ನೀಡಬೇಕೆಂದು ಇದೀಗ ನಾನಾ ಕಾರ್ಮಿಕ ಒಕ್ಕೂಟಗಳು ಸರಕಾರಕ್ಕೆ ಆಗ್ರಹಿಸುತ್ತಿವೆ.

ಕಾರ್ಮಿಕರ ವೇತನ 21000 ದಾಟಿದರೆ, ಅವರಿಗೆ ಇಎಸ್ ಐ ಸೌಲಭ್ಯವನ್ನು ನೀಡುವುದಿಲ್ಲ. ಇತ್ತೀಚಿನ ಬೆಲೆ ಏರಿಕೆ ದಿನಗಳಲ್ಲಿಆರೋಗ್ಯ ಕ್ಷೇತ್ರ ಸಾಕಷ್ಟು ದುಬಾರಿಯಾಗಿದೆ. ಇಂತಹ ಪರಿಸ್ಥಿತಿಯಲ್ಲಿದೊಡ್ಡ ಮಟ್ಟದ ಚಿಕಿತ್ಸೆಗಳ ಅಗತ್ಯತೆ ಬಂದರೆ, ಚಿಕಿತ್ಸೆಗೆ ಪರದಾಡಬೇಕಾದ ಪರಿಸ್ಥಿತಿ ಎದುರಾಗಲಿದೆ. ಇದರಿಂದ ಯಾವುದೇ ವೇತನ ಮಿತಿ ಇಲ್ಲದಂತೆ ಇಎಸ್ ಐ ಸೌಲಭ್ಯವನ್ನು ಎಲ್ಲಾಕಾರ್ಮಿಕರಿಗೆ ಒದಗಿಸಬೇಕೆಂದು ಸಿಐಟಿಯು ಕೂಡ ತನ್ನ ಸಮ್ಮೇಳನಗಳಲ್ಲಿನಿರ್ಣಾಯ ಕೈಗೊಂಡು, ಅನುಷ್ಠಾನಕ್ಕೆ ಸರಕಾರವನ್ನು ಆಗ್ರಹಿಸಿದೆ.

ಇತರೆ ರಾಜ್ಯ ಮದರಿಯಾಗಲಿ:

ಕೇರಳ, ಪಶ್ಚಿಮ ಬಂಗಾಳ ಸೇರಿದಂತೆ ಅನೇಕ ರಾಜ್ಯಗಳಲ್ಲಿಬೀದಿ ಬದಿ ವ್ಯಾಪರಸ್ಥರು, ಆಟೊ ಚಾಲಕರು, ಅಂಗನವಾಡಿ ನೌಕರರು, ಕಟ್ಟಡ ಕಾರ್ಮಿಕರು, ನೇಕಾರರು, ವ್ಯಾಪಾರಸ್ಥರಿಗೆ ಪ್ರತ್ಯೇಕ ಕಲ್ಯಾಣ ಮಂಡಳಿಗಳನ್ನು ಸ್ಥಾಪಿಸಿ, ಅವರಿಗೆ ನಾನಾ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಅದರಲ್ಲೂಪ್ರಮುಖವಾಗಿ ಇಎಸ್ ಐ ಮಾದರಿಯಲ್ಲಿಆರೋಗ್ಯ ಸೌಲಭ್ಯ ನೀಡಲಾಗುತ್ತಿದೆ. ಅದರಂತೆ ರಾಜ್ಯದ ಅಸಂಘಟಿತ ಕಾರ್ಮಿಕರಿಗೆ ಇಎಸ್ ಐ ಸೌಲಭ್ಯ ಒದಗಿಸಬೇಕಿದೆ. ಇದರಿಂದ ಅವರು ಆರೋಗ್ಯಕ್ಕಾಗಿ ಮಾಡುವ ವೆಚ್ಚ ಉಳಿಯುವ ಜತೆಗೆ ಗುಣಮಟ್ಟದ ಆರೋಗ್ಯ ಸೌಲಭ್ಯ ಸಿಗಲಿದೆ ಎಂಬುದು ಸಿಐಟಿಯು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಾರ್ಯದರ್ಶಿ ಪಿ.ಎ ವೆಂಕಟೇಶ್ ಅಭಿಪ್ರಾಯ.

ಏನೇನು ಬೇಡಿಕೆ?

* ಇಎಸ್ ಐ ಸೌಲಭ್ಯಕ್ಕಿರುವ ವೇತನ ಮಿತಿ ತೆಗೆಯಬೇಕು

* ಅಸಂಘಟಿತ ಕಾರ್ಮಿಕರಿಗೂ ಆರೋಗ್ಯ ಸೌಲಭ್ಯ ಒದಗಿಸಬೇಕು

* ಎಲ್ಲಾಕೈಗಾರಿಕಾ ಪ್ರದೇಶದಲ್ಲೂಮಲ್ಟಿ ಸ್ಪೆಷಲಿಸ್ಟ್ ಇಎಸ್ ಐ ಆಸ್ಪತ್ರೆ ಬೇಕು

* ಇಎಸ್ ಐ ಆಸ್ಪತ್ರೆಗಳಲ್ಲಿಸಮರ್ಪಕ ಚಿಕಿತ್ಸಾ ವ್ಯವಸ್ಥೆ ಮಾಡಬೇಕು

ಬಾಕ್ಸ್ ...

ಇಎಸ್ ಐ ಅತ್ಯಗತ್ಯ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೈಗಾರಿಕೆಗಳಲ್ಲಿಅನ್ಯ ಜಿಲ್ಲೆ, ರಾಜ್ಯಗಳ ಸಾವಿರಾರು ಕಾರ್ಮಿಕರು ಕೆಲಸದಲ್ಲಿತೊಡಗಿದ್ದಾರೆ. ಕಡಿಮೆ ವೇತನದಲ್ಲಿಇವರು ಜೀವನ ನಿಭಾಯಿಸುತ್ತಿದ್ದಾರೆ. ಆರೋಗ್ಯ ವಿಮೆಗಳ ಸೌಲಭ್ಯ ಪಡೆಯಲು ಹೆಚ್ಚು ಹಣ ಅಗತ್ಯ. ಜತೆಗೆ ಖಾಸಗಿ ಆಸ್ಪತ್ರೆಯಲ್ಲೂಚಿಕಿತ್ಸೆ ದುಬಾರಿ. ಇಂತಹ ಪರಿಸ್ಥಿತಿಯಲ್ಲಿಕಾರ್ಮಿಕರ ಅನುಕೂಲಕ್ಕಾಗಿ ಇಎಸ್ ಐ ಸೌಲಭ್ಯ ಒದಗಿಸಿದರೆ ಅನುಕೂಲ.

ಜಿಲ್ಲೆಯ ಕೈಗಾರಿಕಾ ವಿವರ

* ಬೃಹತ್ ಕೈಗಾರಿಕೆಗಳು: 800

* ಸಣ್ಣ ಪ್ರಮಾಣದ ಕೈಗಾರಿಕೆಗಳು: ಸುಮಾರು 37000

* ಕಾರ್ಮಿಕರು: 1.5ಲಕ್ಷಕ್ಕೂ ಹೆಚ್ಚು

* ಕೈಗಾರಿಕಾ ಪ್ರದೇಶ: 22

ಕೋಟ್ ,

ರಾಜ್ಯದ ಎಲ್ಲಾಕಾರ್ಮಿಕರಿಗೂ 21000 ರೂ. ವೇತನದ ಮಿತಿ ಇಲ್ಲದೇ ಇಎಸ್ ಐ ಸೌÇಭ್ಯ ಕಡ್ಡಾಯವಾಗಿ ನೀಡಬೇಕು. ಅಸಂಘಟಿತ ವಲಯಕ್ಕೂ ಆರೋಗ್ಯ ಸೌಲಭ್ಯ ಒದಗಿಸುವ ವ್ಯವಸ್ಥೆ ಆಗಬೇಕು.

ಡಾ.ಕೆ. ಪ್ರಕಾಶ್ | ರಾಜ್ಯ ಉಪಾಧ್ಯಕ್ಷ, ಸಿಐಟಿಯು

ಕೋಟ್ ,

ಎಲ್ಲವೂ ದುಬಾರಿಯಾಗಿರುವ ಈ ಸಮಯದಲ್ಲಿ25000ರಿಂದ 30000 ರೂ. ವೇತನ ಯಾವುದಕ್ಕೂ ಸಾಲುವುದಿಲ್ಲ. ಇಂತಹ ಸ್ಥಿತಿಯಲ್ಲಿಇಎಸ್ ಐ ಸೌಲಭ್ಯ ಸಾಕಷ್ಟು ಜನರಿಗೆ ಅನುಕೂಲವಾಗಲಿದೆ.

- ಚಂದ್ರಶೇಖರ್ | ಕಾರ್ಮಿಕ, ವಿನಾಯಕನಗರ

ಫೋಟೋ:31ವಿಕೆ1: ಸಾಂದರ್ಭಿಕ ಚಿತ್ರ.

31ವಿಕೆ2: ದೊಡ್ಡಬಳ್ಳಾಪುರದಲ್ಲಿನಿರ್ಮಾಣವಾಗಿರುವ ಇಎಸ್ ಐ ಆಸ್ಪತ್ರೆ.

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ