ಸರ್ದಾರ್ ಪಟೇಲ್ ರ ಸಾಧನೆ ಮಾದರಿ: ಟೆಂಗಿನಕಾಯಿ

Contributed byKalmesh Pattandavar|Vijaya Karnataka
Subscribe

ಹು-ಧಾ ಮಧಿಹಾಧಿನಧಿಗರ ಜಿಲ್ಲಾಬಿಧಿಜೆಪಿ ಘಧಿಟಧಿಕವು ಶುಧಿಕ್ರಧಿವಾರ ಹಧಿಮ್ಮಿಧಿಕೊಂಡ ಏಧಿಕತಾ ನಧಿಡಿಧಿಗೆಗೆ ಶಾಧಿಸಕ ಮಧಿಹೇಶ ಟೆಂಗಿಧಿನಧಿಕಾಧಿಯಿ ಚಾಧಿಲನೆ ನೀಧಿಡಿಧಿದರು. ಸರ್ದಾರ್‌ ವಲ್ಲಭಾಯಿ ಪಟೇಲರ 150ನೇ ಜನ್ಮ ದಿಧಿನದ ಅಂಗಧಿವಾಗಿ ಈ ನಧಿಡಿಧಿಗೆ ಆಯೊಧಿಜನೆ ಗೊಳಿಧಿಸಧಿದ್ದಧಿತು. ದೇಶದ ಗೃಹ ಸಚಿವರಾಗಿ ಪಟೇಲರು ಮಾಡಿದ ಸಾಧನೆಗಧಿಳು ಮಾದರಿಯಾಗಿವೆ ಎಂದು ಶಾಸಕರು ಅಭಿಪ್ರಾಯ ಪಧಿಟ್ಟಧಿದರು.

the achievement of nationalist sardar patel success of bjp organized unity march
ಹುಬ್ಬಳ್ಳಿಯಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲರ 150ನೇ ಜನ್ಮದಿನದ ಅಂಗವಾಗಿ ಬಿಜೆಪಿ ಏರ್ಪಡಿಸಿದ್ದ ' ಏಕತಾ ನಡಿಗೆ 'ಗೆ ಶಾಸಕ ಮಹೇಶ ಟೆಂಗಿನಕಾಯಿ ಚಾಲನೆ ನೀಡಿದರು. ದೇಶದ ಗೃಹ ಸಚಿವರಾಗಿ ಪಟೇಲರು ಮಾಡಿದ ಸಾಧನೆಗಳು, ಅಖಂಡ ಭಾರತ ನಿರ್ಮಾಣದಲ್ಲಿ ಅವರ ಪಾತ್ರ, ಮತ್ತು ಪ್ರಧಾನಿ ನರೇಂದ್ರ ಮೋದಿಯವರು ಪಟೇಲರ ಮಾರ್ಗದಲ್ಲಿ ದೇಶವನ್ನು ಮುನ್ನಡೆಸುತ್ತಿರುವ ಬಗ್ಗೆ ಈ ಸಂದರ್ಭದಲ್ಲಿ ಮಾತನಾಡಲಾಯಿತು. ದೇಶದಾದ್ಯಂತ ಬಿಜೆಪಿ ಏಕತಾ ನಡಿಗೆಯನ್ನು ಆಯೋಜಿಸಿದೆ.

ಹು-ಧಾ ಮಹಾನಗರ ಜಿಲ್ಲಾ ಬಿಜೆಪಿ ಘಟಕವು ಶುಕ್ರವಾರ ಈ ಏಕತಾ ನಡಿಗೆಯನ್ನು ಹಮ್ಮಿಕೊಂಡಿತ್ತು. ಶಾಸಕ ಮಹೇಶ ಟೆಂಗಿನಕಾಯಿ ಅವರು ನಡಿಗೆಗೆ ಚಾಲನೆ ನೀಡಿ, ಸರ್ದಾರ್ ವಲ್ಲಭಭಾಯಿ ಪಟೇಲರು ದೇಶದ ಗೃಹ ಸಚಿವರಾಗಿ ಮಾಡಿದ ಸಾಧನೆಗಳು ಮಾದರಿಯಾಗಿವೆ ಎಂದು ಶ್ಲಾಘಿಸಿದರು. ಹಿಂದಿನ ಹೈದರಾಬಾದ್ ಕರ್ನಾಟಕದ ಪರಿಸ್ಥಿತಿಯನ್ನು ನೆನಪಿಸಿಕೊಂಡು, ಅಖಂಡ ಭಾರತ ಉಳಿಯುತ್ತದೆಯೋ ಇಲ್ಲವೋ ಎಂಬ ಸಂದರ್ಭದಲ್ಲಿ ಪಟೇಲರು ದಿಟ್ಟ ನಿರ್ಧಾರ ತೆಗೆದುಕೊಂಡು ದೇಶವನ್ನು ಒಗ್ಗೂಡಿಸಿದರು ಎಂದು ಹೇಳಿದರು.
"ಸರ್ದಾರ್ ವಲ್ಲಭಭಾಯಿ ಪಟೇಲರು ಹಾಕಿಕೊಟ್ಟ ಮಾರ್ಗದಲ್ಲಿ ಇಂದಿನ ಪ್ರಧಾನಿ ನರೇಂದ್ರ ಮೋದಿ ಯಶಸ್ವಿಯಾಗಿ ದೇಶವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಜಗತ್ತಿಗೆ ಭಾರತ ಜಗನ್ಮಾತೆಯಾಗಿ ಬೆಳಗಬೇಕು ಎಂಬುದು ನಮ್ಮೆಲ್ಲರ ಕಲ್ಪನೆಯಾಗಿದ್ದು, ಈ ನಿಟ್ಟಿನಲ್ಲಿ ಪಟೇಲರು ತಾಳಿದ್ದ ಯೋಚನೆಗಳನ್ನು ಕಾರ್ಯಗತಗೊಳಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಬಹುದೊಡ್ಡ ಯಶಸ್ಸು ಕಂಡಿದ್ದಾರೆ. ಆ ಕಾರಣಕ್ಕಾಗಿ ದೇಶಾದ್ಯಂತ ಬಿಜೆಪಿಯಿಂದ ಏಕತಾ ನಡಿಗೆ ಆಯೋಜಿಸಿದೆ" ಎಂದು ಟೆಂಗಿನಕಾಯಿ ತಿಳಿಸಿದರು.

ಹು-ಧಾ ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ ಮಾತನಾಡಿ, ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲರ ಜನ್ಮದಿನದ ಅಂಗವಾಗಿ, ಭಾರತದ ಏಕತೆಗಾಗಿ ಬಿಜೆಪಿಯಿಂದ ದೇಶ ಹಾಗೂ ರಾಜ್ಯದ ಪ್ರತಿ ಜಿಲ್ಲೆಗಳಲ್ಲೂ ಏಕತಾ ನಡಿಗೆ ಹಮ್ಮಿಕೊಳ್ಳಲಾಗಿದೆ ಎಂದರು. ಈ ನಡಿಗೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡುವ ಮೂಲಕ ಕಾರ್ಯಕರ್ತರಲ್ಲಿ ಹುಮ್ಮಸ್ಸು ಮೂಡಿಸಿದ್ದಾರೆ ಎಂದು ಅವರು ಹೇಳಿದರು.

ನಂತರ, ಇಲ್ಲಿನ ಮೂರು ಸಾವಿರ ಮಠದಿಂದ ಆರಂಭಗೊಂಡ ಏಕತಾ ನಡಿಗೆಯು ದುರ್ಗದ ಬೈಲುವರೆಗೆ ನಡೆಯಿತು. ಈ ಸಂದರ್ಭದಲ್ಲಿ ಮೇಯರ್ ಜ್ಯೋತಿ ಪಾಟೀಲ, ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ಶಿವು ಮೆಣಸಿನಕಾಯಿ, ಉಮೇಶಗೌಡ ಕೌಜಗೇರಿ, ಮಂಜುನಾಥ ಕಾಟಿಕರ, ಸಿದ್ದು ಮೊಗಲಿಶೆಟ್ಟರ, ಮಂಜುನಾಥ ಚಿಂತಗಿಂಜಲ್, ಪ್ರಭು ನವಿಲಗುಂದಮಠ, ಕೃಷ್ಣಾ ಗಂಡಗಾಳೇಕರ, ಪ್ರವೀಣ್ ಪವಾರ, ರಾಜು ಕೋರ್ಯಾಣಮಠ, ಮಂಜುನಾಥ ಬಿಜವಾಡ, ಅಮೃತ ಕಲ್ಪವೃಕ್ಷ, ರವಿ ನಾಯಕ, ಮಹಿಳಾ ಮೋರ್ಚಾ ಅಧ್ಯಕ್ಷೆ ಸೀಮಾ ಲದ್ವಾ, ಅಕ್ಕಮ್ಮಾ ಹೆಗಡೆ, ವಿಜಯಲಕ್ಷ್ಮೇ ತಿಮ್ಮೊಳಿ, ಸುಮ ಶಿವನಗೌಡ್ರ, ನಾಗರತ್ನ ಬಳ್ಳಾರಿ, ಸಿರೋಜಾ ಛಬ್ಬಿ, ಲಕ್ಷ್ಮೇ ದೊಡ್ಡಮನಿ, ಲೀಲಾವತಿ ಪಾಸ್ತೆ, ಮೇಘನಾ ಶಿಂಧೆ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಫೋಟೋ: 31 ಸಂತೋಷ ಬಿಜೆಪಿ ಹುಬ್ಬಳ್ಳಿಯಲ್ಲಿ ನಡೆದ ಏಕತಾ ನಡಿಗೆಗೆ ಶಾಸಕ ಮಹೇಶ ಟೆಂಗಿನಕಾಯಿ ಚಾಲನೆ ನೀಡಿದರು.

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ