ನಾಳೆ ವೀರ ಮದಕರಿ ನಾಯಕ ಜಯಂತ್ಯುತ್ಸವ

Contributed bydevimanjum@gmail.com|Vijaya Karnataka
Subscribe

ನಗರದಲ್ಲಿ ನ.2ರಂದು ಶ್ರೀ ರಾಜ ವೀರ ಮದಕರಿ ನಾಯಕರ ಜಯಂತ್ಯುತ್ಸವ ನಡೆಯಲಿದೆ. ಯುವ ಬ್ರಿಗೇಡ್‌ ಮತ್ತು ತಾಲೂಕು ನಾಯಕ ಸಂಘದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಬೆಳಗ್ಗೆ ವಾಲ್ಮೀಕಿ ವೃತ್ತದಿಂದ ಮೆರವಣಿಗೆ ಆರಂಭವಾಗಲಿದೆ. ಬಳಿಕ ಡಾ. ಎಚ್‌.ಎನ್‌. ಕಲಾಭವನದಲ್ಲಿ ವೇದಿಕೆ ಕಾರ್ಯಕ್ರಮ ಜರುಗಲಿದೆ. ಸಮುದಾಯದ ಯುವಕರನ್ನು ಒಗ್ಗೂಡಿಸುವ ಉದ್ದೇಶ ಇದರಲ್ಲಿದೆ. ಹಲವು ಗಣ್ಯರು ಭಾಗವಹಿಸಲಿದ್ದಾರೆ.

tomorrow madakari nayaka jayantyutsav walmiiki community protest

ವಿಕ ಸುದ್ದಿಲೋಕ ಗೌರಿಬಿದನೂರು

ವೀರ ಮದಕರಿ ಯುವ ಬ್ರಿಗೇಡ್ ಮತ್ತು ತಾಲೂಕು ನಾಯಕ ಸಂಘದ ವತಿಯಿಂದ ನ.2ರಂದು ನಗರದಲ್ಲಿಮೊಟ್ಟಮೊದಲ ಬಾರಿಗೆ ನಾಡ ದೊರೆ ಶ್ರೀ ರಾಜ ವೀರ ಮದಕರಿ ನಾಯಕರ ಜಯಂತ್ಯುತ್ಸವ ಹಮ್ಮಿಕೊಳ್ಳಲಾಗಿದೆ ಎಂದು ನಾಯಕ ಸಮುದಾಯದ ಮುಖಂಡ ಆರ್ . ಅಶೋಕ್ ಕುಮಾರ್ ತಿಳಿಸಿದರು.

ನಗರದಲ್ಲಿಯುವ ಬ್ರಿಗೇಡ್ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ನ.2ರಂದು ಬೆಳಗ್ಗೆ 9 ಗಂಟೆಗೆ ನಗರದ ವಾಲ್ಮೀಕಿ ವೃತ್ತದಿಂದ ನಗರದ ರಾಜಬೀದಿಗಳಲ್ಲಿಕಲಾತಂಡಗಳೊಂದಿಗೆ ಶ್ರೀ ರಾಜ ವೀರಮದಕರಿ ನಾಯಕರ ಭಾವಚಿತ್ರದೊಂದಿಗೆ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದರು.

ವೇದಿಕೆ ಕಾರ್ಯಕ್ರಮವನ್ನು ನಗರದ ಡಾ. ಎಚ್ .ಎನ್ . ಕಲಾಭವನದಲ್ಲಿಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದಲ್ಲಿಮಾಜಿ ಸಚಿವ ರಾಜುಗೌಡ ನರಸಿಂಹನಾಯಕ, ವಿಶೇಷ ಆಹ್ವಾನಿತರಾಗಿ ರವಿ ಡಿ ಚನ್ನಣ್ಣವರ್ , ಆಂಧ್ರ ಸಂಸದ ಅಂಬಿಕಾ ಲಕ್ಷಿತ್ರ್ಮೕನಾರಾಯಣ್ , ಸಮುದಾಯದ ಹಿರಿಯ ಮುಖಂಡರು ಭಾಗವಹಿಸಲಿದ್ದಾರೆ ಎಂದರು.

ಸಮುದಾಯದ ಮುಖಂಡ ಬಿ.ಎಲ್ . ರಂಗನಾಥ್ ಮಾತನಾಡಿ, ಯುವಕರನ್ನು ಮುಖ್ಯವಾಹಿನಿಗೆ ತರುವ ಹಾಗೂ ಸಂಘಟನಾ ಶಕ್ತಿ ತುಂಬುವ ಸಲುವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಸಂಖ್ಯೆಯ ಸಮುದಾಯದವರು ಕಾರ್ಯಕ್ರಮದಲ್ಲಿಪಾಲ್ಗೊಳ್ಳಲಿದ್ದಾರೆ ಎಂದರು.

ಯುವ ಮುಖಂಡ ಎಸ್ .ವಿ.ಟಿ. ಲೋಕೇಶ್ ಮಾತನಾಡಿ, ವಾಲ್ಮೀಕಿ ಸಮುದಾಯದ ಯುವಕರು ಒಗ್ಗೂಡಿ ಈ ಬೃಹತ್ ಜಯಂತ್ಯುತ್ಸವ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದಲ್ಲಿನೂರಾರು ಸಂಖ್ಯೆಯಲ್ಲಿಯುವಕರು ಬೈಕ್ ರಾರ ಯಲಿ ನಡೆಸಲಿದ್ದಾರೆ ಎಂದರು.

ಸರಕಾರಿ ನೌಕರರ ಸಂಘದ ಅಧ್ಯಕ್ಷ ಎನ್ .ಆರ್ . ಮಂಜುನಾಥ್ , ಪ್ರಶಾಂತ್ ಮಾತನಾಡಿದರು.

ಸುದ್ದಿಗೋಷ್ಠಿಯಲ್ಲಿಸಮುದಾಯದ ಹಿರಿಯ ಮುಖಂಡರಾದ ಕರೇತಿಮ್ಮಯ್ಯ, ನಿರಂಜನ್ , ನಾರಾಯಣಸ್ವಾಮಿ, ನಾಗರಾಜಪ್ಪ, ನವೀನ್ , ಮೂರ್ತಿ, ಗಂಗಾಧರಪ್ಪ, ನಾಗರಾಜ್ , ಟಿ.ವಿ. ಮಂಜುನಾಥ್ ಭಾಗವಹಿಸಿದ್ದರು.

ಚಿತ್ರ31ಜಿಬಿಡಿ-1

ಯುವ ಬ್ರಿಗೇಡ್ ಮತ್ತು ತಾಲೂಕು ನಾಯಕ ಸಂಘದಿಂದ ನ.2ರಂದು ನಗರದಲ್ಲಿಮೊಟ್ಟಮೊದಲ ಬಾರಿಗೆ ನಾಡ ದೊರೆ ಶ್ರೀ ರಾಜ ವೀರ ಮದಕರಿ ನಾಯಕರ ಜಯಂತ್ಯುತ್ಸವ ಕುರಿತು ಸುದ್ದಿಗೋಷ್ಠಿ ನಡೆಯಿತು.

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ