ನಾಯಿಗಳ ಹಾವಳಿಗೆ ಬ್ರೇಕ್ ಹಾಕಿ

Contributed byblokesh71@yahoo.com|Vijaya Karnataka
Subscribe

ಚಳ್ಳಕೆರೆ ನಗರಸಭೆಯಲ್ಲಿ ಶಿಲ್ಪಾ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಬೀದಿ ನಾಯಿಗಳ ಹಾವಳಿ, ಕಸದ ರಾಶಿ, ಸ್ಮಶಾನಗಳ ಮೂಲ ಸೌಲಭ್ಯಗಳ ಬಗ್ಗೆ ಚರ್ಚಿಸಲಾಯಿತು. ನಾಯಿಗಳನ್ನು ಹಿಡಿಯಲು ಟೆಂಡರ್ ಪ್ರಕ್ರಿಯೆ ಮರುಪ್ರಾರಂಭಿಸುವುದಾಗಿ ಪೌರಾಯುಕ್ತರು ತಿಳಿಸಿದರು. ನಗರದ ಸ್ವಚ್ಛತೆ ಮತ್ತು ಸ್ಮಶಾನಗಳ ಸುಧಾರಣೆಗೆ ಕ್ರಮ ಕೈಗೊಳ್ಳುವ ಭರವಸೆ ನೀಡಲಾಯಿತು. ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಅನುಮೋದನೆ ನೀಡಲಾಯಿತು.

urgent measures required for dog attacks

ಶಿಲ್ಪಾ ಅಧ್ಯಕ್ಷತೆಯಲ್ಲಿಕೌನ್ಸಿಲ್ ಸಾಮಾನ್ಯ ಸಭೆ | ಬೀದಿಯೊಂದರಲ್ಲಿ50 ನಾಯಿಗಳು | ವಿಧಿಲೇಧಿವಾಧಿರಿಧಿಯಾಧಿಗದ ಕಧಿಸ ಕಿಧಿಡಿ(ಧಿಕಿಧಿಕ್ಕರ್ )

ನಾಯಿಗಳ ಹಾವಳಿಗೆ ಬ್ರೇಕ್ ಹಾಕಿ

-----

ವಿಕ ಸುದ್ದಿಲೋಕ ಚಳ್ಳಕೆರೆ

ನಗರದ ಒಂದೊಂದು ಬೀದಿಯಲ್ಲಿ50 ಬೀದಿ ನಾಯಿಗಳಿದ್ದು, ಕಳೆದ ಎಂಟು ತಿಂಗಳಿಂದ ನಾಯಿಗಳನ್ನು ಸೆರೆ ಹಿಡಿಯುವಂತೆ ತಿಳಿಸುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕೂಡಲೇ ನಾಯಿಗಳ ಹಾವಳಿಗೆ ಬ್ರೇಕ್ ಹಾಕಿ ಎಂದು ನಗರಸಭೆಯ ಸದಸ್ಯರು ಆಗ್ರಹಿಸಿದರು.

ನಗರಸಭೆ ಸಭಾಂಗಣದಲ್ಲಿಶುಕ್ರವಾರ ಶಿಲ್ಪಾ ಅಧ್ಯಕ್ಷತೆಯಲ್ಲಿನಡೆದ ಕೌನ್ಸಿಲ್ ಸಾಮಾನ್ಯ ಸಭೆಯಲ್ಲಿಬೀದಿ ನಾಯಿಗಳ ಹಾವಳಿ, ಕಸದ ರಾಶಿ, ಸ್ಮಶಾನಗಳ ಮೂಲ ಸೌಲಭ್ಯ ಬಗ್ಗೆ ಸಭೆಯಲ್ಲಿಚಧಿರ್ಚಿಧಿಸಧಿಲಾಧಿಯಿತು.

ಸದಸ್ಯ ಸಿ.ಎಂ.ವಿಶುಕುಮಾರ್ ಮಾತನಾಡಿ, ಬೀದಿಯೊಂದರಲ್ಲಿ50 ನಾಯಿಗಳು ಕಾಣಿಸಿಕೊಳ್ಳುತ್ತಿದ್ದು, ಸೆರೆ ಹಿಡಿಯುವಂತೆ 8 ತಿಂಗಳಿಂದ ಹೇಳುತ್ತಾ ಬರುತ್ತಿದ್ದೇವೆ ಎಂದಾಗ ಪೌರಾಯುಕ್ತ ಜಗರೆಡ್ಡಿ ಟೆಂಡರ್ ಕರೆಯಲಾಗಿತ್ತು. ಸಿಂಗಲ್ ಟೆಂಡರ್ ಬಂದ ಹಿನ್ನೆಲೆಯಲ್ಲಿ, ರದ್ದುಗೊಳಿಸಲಾಗಿತ್ತು. ಮತ್ತೆ ಮರು ಟೆಂಡರ್ ಕರೆದು ನಾಯಿಗಳನ್ನು ಹಿಡಿಯುವ ಕೆಲಸ ಮಾಡಲಾಗುವುದು ಎಂದರು.

ಸದಸ್ಯ ವಿ.ವೈ.ಪ್ರಮೋದ್ ಮಾತನಾಡಿ, ನಮ್ಮ ವಾರ್ಡ್ ನಲ್ಲಿಬೀದಿನಾಯಿ ಕಚ್ಚಿದ್ದು, ತುರ್ತು ಇರುವುದರಿಂದ ಹಳೆ ಟೆಂಡರ್ ಗೆ ಡಿಸಿ ಬಳಿ ಒಪ್ಪಿಗೆ ಪಡೆದು ನಾಯಿ ಹಿಡಿಯಿರಿ ಎಂದರೆ, ಸದಸ್ಯ ಸಿ. ಶ್ರೀನಿವಾಸ್ ಪ್ರತಿಕ್ರಿಯಿಸಿ ಸಿಂಗಲ್ ಟೆಂಡರ್ ರದ್ದುಪಡಿಸುವುದು ಬಿಟ್ಟು, ತುರ್ತು ಕೆಲಸವಿರುವುದರಿಂದ ಡಿಸಿ ಬಳಿ ಅನುಮತಿ ಪಡೆಯಿರಿ, 31 ಸದಸ್ಯರು ಒಪ್ಪಿಗೆ ನೀಡಿದ್ದೇವೆ. ಡಿಸಿ ಸುಪ್ರೀಂ ಆದರೆ, ಕೌನ್ಸಿಲ್ ಬಾಡಿಗೆ ಬೆಲೆಯೇ ಇಲ್ಲವೇ ಎಂದು ಪ್ರಶ್ನೆ ಮಾಡಿದಾಗ ಎಇಇ ವಿನಯ್ ಇಂದಿನಿಂದ ಪ್ರಕ್ರಿಯೆ ಆರಂಭಿಸುವುದಾಗಿ ತಿಳಿಸಿದರು.

=ಧಿ=ಧಿ=ಧಿ=ಧಿ=

‘ಪೌರಾಯುಕ್ತರೇ ವಾರ್ಡ್ ಸುತ್ತಿಧಿ’

ಎಸ್ .ಜಯಣ್ಣ ಮಾತನಾಡಿ, ನಗರಸಭೆಯಲ್ಲಿ5 ಜನ ಆರೋಗ್ಯ ನಿರೀಕ್ಷರಿದ್ದರೂ ಮುಖ್ಯ ರಸ್ತೆಯೇ ಸ್ವಚ್ಛವಾಗಿರಲ್ಲ. ನಮ್ಮ ಅವಧಿ ಮುಗಿದಿತು. ಪೌರಾಯುಕ್ತ ಸ್ವಾಮಿಗಳೇ ವಾರ್ಡ್ ಗಳನ್ನು ಸುತ್ತು ಹಾಕಿ, ಆಗ ನಗರದ ಸಮಸ್ಯೆ, ಕಸದ ಬಗ್ಗೆ ತಿಳಿಯುವುದು. ಹಿಂದೆ ಹನುಮಂತರಾಯ ಅವರು ವಾರ್ಡ್ ಸುತ್ತು ಹೊಡೆಯುತ್ತಿದ್ದರು ಎಂದರು.

ಸದಸ್ಯೆ ಜಯಲಕ್ಷಿತ್ರ್ಮೕ ಮಾತನಾಡಿ, ಎಲ್ಲೆಂದರಲ್ಲಿಕಸದ ರಾಶಿ ಕಾಣುತ್ತಿದ್ದು, ವಿಲೇವಾರಿ ಮಾಡುತ್ತಿಲ್ಲಎಂದು ಕಿಡಿಕಾರಿದರೆ, ಸದಸ್ಯ ಶ್ರೀನಿವಾಸ್ ಮುಖ್ಯ ರಸ್ತೆಯಲ್ಲೇ ಕಸ ಸುರಿಯುವ ಅಂಗಡಿಯವರಿಗೆ 5 ಸಾವಿರ ದಂಡ ಹಾಕಿ ಮತ್ತು ಕಸ ಗಾಡಿಗಳ ಚಾಲಕರಿಗೆ ಡ್ರೈವಿಂಗ್ ಲೈಸನ್ಸ್ ಇಲ್ಲ, ಕೆಲವರು ಕುಡಿದು ವಾಹನ ಚಾಲನೆ ಮಾಡುವುದರಿಂದ ಚಿಕ್ಕ ಗಲ್ಲಿಗಳಲ್ಲಿಮಕ್ಕಳ ಮೇಲೆ ವಾಹನ ನುಗ್ಗಿ ಅಪಘಾತವಾದರೇ ನೀವು ಜೈಲಿಗೆ ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದರು.

=ಧಿ=ಧಿ=ಧಿ=ಧಿ=

ಸ್ಮಶಾನ ಸ್ವಚ್ಛತೆಗೆ ಆಧಿಗ್ರಹ

ಸದಸ್ಯ ಎಸ್ .ಜಯಣ್ಣ ನಗರಸಭೆ ಮರ್ಯಾದೆ ಹೋಗುವ ಮುನ್ನ ಕಸ ಗಾಡಿ ಡ್ರೈವರ್ ಗಳಿಗೆ ಲೈಧಿಸೆನ್ಸ್ ಮಾಡಿಸಿ ಕೊಡಿ ಎಂದು ಎಚ್ಚರಿಸಿದರು. ವಿ.ವೈ.ಪ್ರಮೋದ್ ಮಾತನಾಡಿ, ನಗರದಲ್ಲಿಸ್ಮಶಾನಗಳಿಗೆ ಜಾಗ ಸಿಗುತ್ತಿಲ್ಲ, ಸಾರ್ವಜನಿಕ ಸ್ಮಶಾನ ತುಂಬಿಕೊಂಡಿರುವುದರಿಂದ ಬರ್ನಿಂಗ್ ಯಂತ್ರ ವ್ಯವಸ್ಥೆ ಮಾಡಿ ಎಂದರೆ, ಸದಸ್ಯ ಶ್ರೀನಿವಾಸ್ ಸ್ಮಶಾನಗಳ ಸ್ವಚ್ಛತೆಗೊಳಿಸಿ ಎಂಬ ಆಗ್ರಹಕ್ಕೆ ಎಇಇ ವಿನಯ್ ಸ್ವಚ್ಛಗೊಳಿಸಲಾಗುವುದು ಎಂಬ ಭರವಸೆ ನೀಡಿದರು.

---

ಬಾಧಿಕ್ಸ್

ಹಧಿಲವು ಕಾಧಿಮಧಿಗಾಧಿರಿಗೆ ಅಧಿನುಧಿಮೋಧಿದಧಿನೆ

ಸಭೆಯಲ್ಲಿನಗರಸಭೆ ಇ-ಆಫೀಸ್ ಅನುಷ್ಠಾನಗೊಳಿಸಲು ಯುಪಿಎಸ್ , ಲಾನ್ ಕೇಬಲ್ ಮತ್ತು ಇತರೆ ಸಾಮಗ್ರಿಗಳ ಖರೀದಿ, ಐ ಲವ್ ಚಳ್ಳಕೆರೆ ನಾಮಫಲಕ್ಕೆ ಎಸ್ ಎಸ್ ಗ್ರಿಲ್ ಅಳವಡಿಕೆ, ಕಚೇರಿಗೆ ವಾಹನಗಳ ಸೇವೆ ಸೇರಿದಂತೆ ಸಿಸಿ ಚರಂಡಿ, ಇಂಟರ್ ಲಾಕಿಂಗ್ ಫೇವರ್ಸ್ ಅಳವಡಿಕೆ, ಡೆಕ್ ಸ್ಲಾಬ್ ನಿರ್ಮಾಣ, ರಸ್ತೆಗಳಿಗೆ ನಾಯಕರ ಹೆಸರು ಮತ್ತು ಮಹನೀಯ ಹೆಸರಿನಲ್ಲಿವೃತ್ತ ನಿರ್ಮಾಣಕ್ಕೆ ಸಭೆಗೆ ಅನುಮೋದನೆ ನೀಡಿತು.

-----

31ಸಿಎಲ್ ಕೆ 1

ಚಳ್ಳಕೆರೆ ನಗರಸಭೆಯಲ್ಲಿಶುಕ್ರವಾರ ನಡೆದ ಕೌನ್ಸಿಲ್ ಸಾಮಾನ್ಯ ಸಭೆಯಲ್ಲಿಪೌರಾಯುಕ್ತ ಜಗರೆಡ್ಡಿ ಮಾಹಿತಿ ನೀಡುತ್ತಿರುವುದು.

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ