ಪತಿಯನ್ನು ಕೊಂದ ಪತ್ನಿ, ಪ್ರಿಯಕರನಿಗೆ ಜೀವಾವಧಿ ಶಿಕ್ಷೆ

Contributed bypramod6703@gmail.com|Vijaya Karnataka
Subscribe

ಪತಿಯನ್ನು ಕೊಂದ ಪತ್ನಿ ಹಾಗೂ ಆಕೆಯ ಪ್ರಿಯಕರನಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಇವರಿಬ್ಬರು ಸೇರಿ ಪತಿಯನ್ನು ಕೊಂದು ಶೌಚಾಲಯ ಗುಂಡಿಯಲ್ಲಿ ಮುಚ್ಚಿಹಾಕಿದ್ದರು. ಮೃತದೇಹ ದುರ್ವಾಸನೆ ಬರುತ್ತಿದ್ದರಿಂದ ಪ್ರಕರಣ ಬೆಳಕಿಗೆ ಬಂದಿತ್ತು. ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ನ್ಯಾಯಾಲಯ ಈ ಆದೇಶ ಹೊರಡಿಸಿದೆ. ಸರಕಾರಿ ಅಭಿಯೋಜಕರು ವಾದ ಮಂಡಿಸಿದ್ದರು.

wife and lovers murder plot life sentence given

ವಿಕ ಸುದ್ದಿಲೋಕ ಕೊಳ್ಳೇಗಾಲ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಂದು ಶೌಚಾಲಯ ಗುಂಡಿಯಲ್ಲಿಮುಚ್ಚಿಹಾಕಿದ್ದ ಪತ್ನಿ ಹಾಗೂ ಆಕೆಯ ಪ್ರಿಯಕರನಿಗೆ ಅಪರ ಜಿಲ್ಲಾಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ. ಹನೂರು ತಾಲೂಕಿನ ಗುಂಡಿಮಾಳ ಗ್ರಾಮದ ನಂದಿನಿ(30) ಹಾಗೂ ದಿನಕರ(26) ಶಿಕ್ಷೆಗೊಳಗಾದವರು. ಗುಂಡಿಮಾಳ ಗ್ರಾಮದ ರಾಜಶೇಖರಮೂರ್ತಿ(ಕೊಲೆಯಾದ ವ್ಯಕ್ತಿ) ಎಂಬುವವರ ಜತೆ ನಂದಿನಿಯನ್ನು ಮದುವೆ ಮಾಡಿಕೊಡಲಾಗಿತ್ತು. 13 ವರ್ಷ ಸಂಸಾರ ನಡೆಸಿದ್ದರು. ನಂತರ ಅದೇ ಗ್ರಾಮದ ದಿನಕರ ಎಂಬುವವನ ಜತೆ ನಂದಿನಿ ಅಕ್ರಮ ಸಂಬಂಧ ಬೆಳೆಸಿದ್ದಳು. ಗ್ರಾಮದಲ್ಲಿಮುಖಂಡರ ಸಮ್ಮುಖದಲ್ಲಿನ್ಯಾಯ ಪಂಚಾಯಿತಿ ಮಾಡಿಸಿದ್ದರೂ ಮತ್ತೆ ಇವರಿಬ್ಬರು ಅದೇ ಚಾಳಿ ಮುಂದುವರಿಸಿದ್ದರು. 2021ರ ಜೂನ್ 23ರಂದು ಮನೆಗೆ ದಿನಕರ ಬಂದಿದ್ದು, ಸ್ವಲ್ಪ ಹೊತ್ತಿನಲ್ಲೇ ರಾಜಶೇಖರಮೂರ್ತಿ ಹಿಂದಿರುಗಿದಾಗ ಇವರಿಬ್ಬರು ಒಟ್ಟಿಗೆ ಇರುವುದನ್ನು ನೋಡಿ ಗಲಾಟೆ ಮಾಡಿದರು.. ಆಗ ನಂದಿನಿ ಪತಿ ಕಣ್ಣಿಗೆ ಖಾರದ ಪುಡಿ ಎರಚಿ ದೊಣ್ಣೆಯಿಂದ ಹಲ್ಲೆಮಾಡಿದ್ದಳು. ಬಳಿಕ ಆಕೆಯ ಪ್ರಿಯಕರ ಅದೇ ದೊಣ್ಣೆಯನ್ನು ಕಿತ್ತುಕೊಂಡು ರಾಜಶೇಖರ ಮೂರ್ತಿಯ ಮುಖಕ್ಕೆ ಹೊಡೆದ ಪರಿಣಾಮ ಅವರು ಮೃತಪಟ್ಟಿದ್ದರು. ಈ ಹತ್ಯೆಯನ್ನು ಮರೆಮಾಚಲು ಇಬ್ಬರು ಸೇರಿ ಮೃತದೇಹವನ್ನು ಮನೆಯ ಹಿಂಭಾಗದಲ್ಲಿದ್ದ ಟಾಯ್ಲೆಟ್ ಗುಂಡಿಗೆ ಹಾಕಿ ಸಿಮೆಂಟ್ ನಿಂದ ಮುಚ್ಚಿದ್ದರು. ಮೃತನ ತಂದೆಗೆ ತಮ್ಮ ಮಗ ಕೆಲಸಕ್ಕೆ ಹೋಗಿದ್ದಾರೆ ಎಂದು ನಂಬಿಸಿದ್ದರು. ಮಗ ಮನೆಗೆ ಬಾರದೆ ಇದ್ದುದರಿಂದ ತಂದೆ ದೂರು ನೀಡಿದ್ದರು. ಬಳಿಕ ಮನೆಯ ಹಿಂಭಾಗ ದುರ್ವಾಸನೆ ಬರುತ್ತಿದ್ದರಿಂದ ಪರಿಶೀಲನೆ ನಡೆಸಿದಾಗ ಕೊಳೆತ ಸ್ಥಿತಿಯಲ್ಲಿಮೃತದೇಹ ಪತ್ತೆಯಾಗಿತ್ತು. ಈ ಎಲ್ಲಾಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ಅಪರ ಜಿಲ್ಲಾಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಟಿ.ಸಿ.ಶ್ರೀಕಾಂತ್ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ರೂ. ದಂಡವನ್ನು ವಿಧಿಸಿ ಶುಕ್ರವಾರ ಆದೇಶ ಹೊರಡಿಸಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಗಿರೀಶ್ ವಾದ ಮಂಡಿಸಿದ್ದರು.

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ