ಸೋಲೂರು ಡೇರಿಗೆ ಅಧ್ಯಕ್ಷ , ಉಪಾಧ್ಯಕ್ಷರ ಅವಿರೋಧ ಆಯ್ಕೆ

Contributed bysulibeleprashanth@gmail.com|Vijaya Karnataka
Subscribe

ಸೋಲೂರು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ರುಕ್ಮಿಣಿಯಮ್ಮ ಅಧ್ಯಕ್ಷರಾಗಿ, ಆವಲಳಪ್ಪ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸರಕಾರದ ಅನುದಾನ ಹಾಗೂ ಯೋಜನೆಗಳ ಮಾಹಿತಿ ಎಲ್ಲ ಸದಸ್ಯರಿಗೂ ತಲುಪಿಸಿ ಡೇರಿ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ತಾಪಂ ಮಾಜಿ ಸದಸ್ಯ ಸೋಲೂರು ಎಸ್‌.ಬಿ. ಮುನಿರಾಜು ತಿಳಿಸಿದ್ದಾರೆ. ಹೈನುಗಾರಿಕೆ ಕಡಿಮೆಯಾಗುತ್ತಿರುವುದು ಕಳವಳಕಾರಿ ವಿಷಯವಾಗಿದೆ. ರೈತರು ಹೈನುಗಾರಿಕೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದ್ದಾರೆ.

election of new president and vice president for soluru dairy

ಹೊಸಕೋಟೆ ಗ್ರಾಮಾಂತರ : ಸರಕಾರದಿಂದ ಬರುವ ಅನುದಾನ ಹಾಗು ಯೋಜನೆಗಳ ಮಾಹಿತಿಗಳನ್ನು ಎಲ್ಲಸದಸ್ಯರಿಗೂ ಮುಟ್ಟಿಸುವ ಮೂಲಕ ಡೇರಿ ಅಭಿವೃದ್ಧಿಗೆ ನೂತನ ಅಧ್ಯಕ್ಷ ರು ಶ್ರಮಿಸಬೇಕು ಎಂದು ತಾಪಂ ಮಾಜಿ ಸದಸ್ಯ ಸೋಲೂರು ಎಸ್ .ಬಿ. ಮುನಿರಾಜು ತಿಳಿಸಿದ್ದಾರೆ. ತಾಲೂಕು ಜಡಿಗೇನಹಳ್ಳಿ ಹೋಬಳಿ ಸೋಲೂರು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಅಭಿನಂದಿಸಿ ಅವರು ಮಾತನಾಡಿದರು. ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿಒಟ್ಟು 12 ಸದಸ್ಯರಿದ್ದು, ತೆರವಾಗಿದ್ದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿಅಧ್ಯಕ್ಷ ಸ್ಥಾನಕ್ಕೆ ರುಕ್ಮಿಣಿಯಮ್ಮ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಆವಲಳಪ್ಪ ಹೊರತುಪಡಿಸಿ ಯಾರೊಬ್ಬರೂ ನಾಮಪತ್ರ ಸಲ್ಲಿಸದ ಕಾರಣ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಚುನಾವಣಾಧಿಕಾರಿ ಮಾದವರೆಡ್ಡಿ ಅವಿರೋಧ ಆಯ್ಕೆ ಮಾಡಿ ಘೋಷÜಣೆ ಹೊರಡಿಸಿದರು. ತಾಪಂ ಮಾಜಿ ಸದಸ್ಯ ಸೋಲೂರು ಎಸ್ .ಬಿ. ಮುನಿರಾಜು ಮಾತನಾಡಿ, ರಾಜ್ಯದಲ್ಲಿಹೈನುಗಾರಿಕೆ ಕಡಿಮೆಯಾಗುತ್ತಾ ಬಂದಿದ್ದು, ಶುದ್ಧ ಹಾಲು ಮಾರಾಟವೂ ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿಹೈನುಗಾರಿಕೆ ಸ್ಥಗಿತವಾದರೆ ರಾಜ್ಯ ದೇಶದಲ್ಲೇ ಪೌಷ್ಟಿಕ ಹಾಲಿನ ಕೊರತೆ ಹೆಚ್ಚಾಗುತ್ತದೆ ಆದ್ದರಿಂದ ರೈತರು ಹೆಚ್ಚಾಗಿ ಹೈನುಗಾರಿಕೆಯಲ್ಲಿತೊಡಗಿಸಿ ಕೊಳ್ಳಬೇಕು. ಹಾಲು ಸರಬರಾಜಿನಲ್ಲಿನಮ್ಮ ತಾಲೂಕು ನಾಲ್ಕನೇ ಸ್ಥಾನದಲ್ಲಿತ್ತು ಆದರೆ, ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿದೆ. ಆದ್ದರಿಂದ ಸರಕಾರದಿಂದ ಹಾಲು ಡೇರಿಗಳಿಗೆ ಬರುವ ಅನುದಾನ ಹಾಗೂ ಯೋಜನೆಗಳ ಮಾಹಿತಿಗಳನ್ನು ಎಲ್ಲಸದಸ್ಯರಿಗೂ ಮುಟ್ಟುವಂತೆ ಡೇರಿ ಅಭಿವೃದ್ದಿಗೆ ನೂತನ ಅಧಕ್ಷರು. ಉಪಾಧÜ್ಯಕ್ಷರು ಶ್ರಮ ವಹಿಸಬೇಕು ಎಂದರು ಮಾಜಿ ಅದ್ಯಕ್ಷ ರಮೇಶ್ . ನಿಕಟಪೂರ್ವ ಕಾರ್ಯದರ್ಶಿ ಭತ್ಯಪ್ಪ, ಡೇರಿ ಕಾರ್ಯದರ್ಶಿ ಸದಾಶಿವ ಸೇರಿದಂತೆ ಹಾಲು ಡೇರಿ ನಿರ್ದೇಶಕರು ಹಾಜರಿದ್ದರು

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ