ಯಂತ್ರಶ್ರೀ ಪದ್ಧತಿಯ ಭತ್ತ ನಾಟಿ

Contributed bykvkampli@gmail.com|Vijaya Karnataka
Subscribe

ಕಂಪ್ಲಿತ ತಾಲೂಕಿನ ಚಿಕ್ಕಜಾಯಗನೂರಿನಲ್ಲಿ ಯಂತ್ರಶ್ರೀ ಪದ್ಧತಿಯಲ್ಲಿ ಭತ್ತ ನಾಟಿ ಮಾಡುವ ಬಗ್ಗೆ ರೈತರಿಗೆ ತರಬೇತಿ ನೀಡಲಾಯಿತು. ರೈತ ಸಂಪರ್ಕ ಕೇಂದ್ರ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಿತು. ಯಾಂತ್ರಿಕ ನಾಟಿ ಪದ್ಧತಿಯಿಂದಾಗುವ ಅನುಕೂಲಗಳ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು. ಸಸಿ ಮಡಿ ತಯಾರಿ, ಕಳೆ ನಿರ್ವಹಣೆ, ಕಟಾವು ಹಾಗೂ ಖರ್ಚಿನ ಬಗ್ಗೆಯೂ ತಿಳಿಸಲಾಯಿತು.

easy rice cultivation using mechanized method training workshop

ಯಂತ್ರಶ್ರೀ ಪದ್ಧತಿಯ ಭತ್ತ ನಾಟಿ

ವಿಕ ಸುದ್ದಿಲೋಕ ಕಂಪ್ಲಿ

ತಾಲೂಕಿನ ಚಿಕ್ಕಜಾಯಗನೂರಿನಲ್ಲಿರೈತ ಸಂಪರ್ಕ ಕೇಂದ್ರ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಶ್ರಯದಲ್ಲಿಕೃಷಿ ವಿಸ್ತರಣಾ ಕಾರ್ಯಕ್ರಮದಡಿ ಯಂತ್ರಶ್ರೀ ಯೋಜನೆ ಬಗ್ಗೆ ರೈತ ಕ್ಷೇತ್ರ ಪಾಠಶಾಲೆ ತರಬೇತಿ ಶುಕ್ರವಾರ ನಡೆಯಿತು.

ಗ್ರಾಮದ ಪ್ರಗತಿಪರ ರೈತ ಜಿ.ಅಮರೇಗೌಡ 5ಎಕರೆ ಪ್ರದೇಶದಲ್ಲಿಯಂತ್ರಶ್ರೀ ಪದ್ಧತಿಯಲ್ಲಿಭತ್ತ ನಾಟಿದ್ದರಿಂದ ರೈತ ಕ್ಷೇತ್ರ ಪಾಠಶಾಲೆ ನಡೆಯಿತು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ನಾಜನಿನ್ ನದಾಫ್ ಮಾತನಾಡಿ, ‘‘ರೈತರು ಯಾಂತ್ರೀಕರಣದ ಮೂಲಕ ಭತ್ತ ನಾಟಿ ಮಾಡಿದರೆ ಹಲವು ಅನುಕೂಲಗಳಿವೆ. ಇಲಾಖೆ ಸಹಾಯ, ಸಹಕಾರದಿಂದ ಭತ್ತ ಬೆಳೆಯು ವುದನ್ನು ಸರಳೀಕರಣ ಮಾಡಿಕೊಳ್ಳಬೇಕು,’’ ಎಂದರು.

ಗ್ರಾಮಾಭಿವೃದ್ಧಿ ಯೋಜನೆ ಕೃಷಿ ಅಧಿಕಾರಿ ಸಂಜು ಕುಮಾರ್ ಮಾತನಾಡಿ, ‘‘ಯಂತ್ರಶ್ರೀ ಪದ್ಧತಿಯಡಿ ಸಸಿ ಮಡಿ ತಯಾರಿ, ಕಳೆ ನಿರ್ವಹಣೆ, ಬೆಳೆ ಕಟಾವು ಬಗ್ಗೆ ಹಾಗೂ ಭತ್ತ ಕೈ ನಾಟಿ ಮತ್ತು ಯಂತ್ರದ ಮೂಲಕ ನಾಟಿಗೆ ತಗುಲುವ ಖರ್ಚುಗಳ ಮಾಹಿತಿ ನೀಡಿದರು.

ಹಂಪಾದೇವನಹಳ್ಳಿ ಗ್ರಾಪಂಅಧ್ಯಕ್ಷೆ ಕವಿತಾ ಪಂಪನಗೌಡ, ಕೃಷಿ ಅಧಿಕಾರಿ ಜ್ಯೋತಿ, ತಾಂತ್ರಿಕ ವ್ಯವಸ್ಥಾಪಕ ರೇಣುಕಾರಾಜ್ ಇತರರಿದ್ದರು.

ಪೊ.ಶೀ.31ಕೆಎಂಪಿ1;- ಕಂಪ್ಲಿತಾಲೂಕಿನ ಚಿಕ್ಕಜಾಯಗನೂರಿನಲ್ಲಿ ಯಂತ್ರಶ್ರೀ ಯೋಜನೆ ಬಗ್ಗೆ ರೈತ ಕ್ಷೇತ್ರ ಪಾಠಶಾಲೆ ತರಬೇತಿ ಶುಕ್ರವಾರ ನಡೆಯಿತು.

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ