ಮಾಮರ ಸೌಹಾರ್ದ ಸಹಕಾರಿ ಸಂಘದ ಕಚೇರಿಗೆ ಚಾಲನೆ

Contributed bymamaramediacentre@gmail.com|Vijaya Karnataka
Subscribe

ಮಳವಳ್ಳಿ ಪಟ್ಟಣದಲ್ಲಿ ಮಾಮರ ಸೌಹಾರ್ದ ಸಹಕಾರಿ ಸಂಘದ ಕಚೇರಿಗೆ ಚಾಲನೆ ನೀಡಲಾಯಿತು. ಸುತ್ತೂರು ವೀರಸಂಸ್ಥಾನ ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಸಂಘವು ಜನಸಾಮಾನ್ಯರ ಆರ್ಥಿಕ ಪ್ರಗತಿಗೆ ಸೇವೆ ಸಲ್ಲಿಸಿ ಬೆಳೆಯಲಿ ಎಂದು ಹಾರೈಸಿದರು. ಸಹಕಾರ ಸಂಘಗಳ ಪಾತ್ರ ಆರ್ಥಿಕ ಪ್ರಗತಿಗೆ ಅಪಾರ ಎಂದು ಅವರು ಅಭಿಪ್ರಾಯಪಟ್ಟರು. ಹಲವು ಮಠಾಧೀಶರು ಹಾಗೂ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

inauguration of mamara sahakara sangha office participation of sri shivaratri deshikendra swamiji

ವಿಕ ಸುದ್ದಿಲೋಕ ಮಳವಳ್ಳಿ

ಮಾಮರ ಸೌಹಾರ್ದ ಸಹಕಾರಿ ಸಂಘವು ಸಹಕಾರ ತತ್ತ$್ವದ ಅಶಯ ಅಳವಡಿಸಿಕೊಂಡು ಜನಸಾಮಾನ್ಯರ ಅರ್ಥಿಕ ಪ್ರಗತಿಗೆ ಸೇವೆ ನೀಡುವ ಮೂಲಕ ಹೆಮ್ಮರವಾಗಿ ಬೆಳೆಯಲಿ ಎಂದು ಸುತ್ತೂರು ವೀರಸಂಸ್ಥಾನ ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ಪಟ್ಟಣದ ಕಾಳಮ್ಮ ದೇವಸ್ಥಾನದ ರಸ್ತೆಯಲ್ಲಿರುವ ಖುಬಾ ಕಟ್ಟಡದಲ್ಲಿಅಯೋಜಿಸಿದ್ದ ಮಾಮರ ಸೌಹಾರ್ದ ಸಹಕಾರಿ ಸಂಘದ ಕಚೇರಿಗೆ ಚಾಲನೆ ನೀಡಿ ಮಾತನಾಡಿ, ಜನಸಾಮಾನ್ಯರ ಅರ್ಥಿಕ ಪ್ರಗತಿಗೆ ಸಹಕಾರ ಸಂಘಗಳ ಪಾತ್ರ ಅಪಾರ ಎಂದರು.

ಇದೇ ಸಂದರ್ಭದಲ್ಲಿಖುಬಾ ಮಳಿಗೆಗೆ ಪ್ರಥಮವಾಗಿ ಅಗಮಿಸಿದ ಶ್ರೀಗಳನ್ನು ಅಂಗಡಿ ಮಾಲೀಕರು ಗೌರವಿಸಿದರು. ಕುಂದೂರು ರಸಸಿದ್ದೇಶ್ವರ ಮಠದ ಶ್ರೀ ನಂಜುಂಡ ಸ್ವಾಮೀಜಿ, ರಾಗಿಬೊಮ್ಮನಹಳ್ಳಿ ಮಠದ ಶ್ರೀ ಪ್ರಭುಲಿಂಗ ಸ್ವಾಮೀಜಿ, ಡಿ.ಹಲಸಹಳ್ಳಿ ಗವಿಮಠದ ಶ್ರೀ ಷಡಕ್ಷರಿ ಸ್ವಾಮೀಜಿ, ನಾಡಗೌಡರ ಕುಟುಂಬದ ರತ್ನಮ್ಮ ಜಿ.ಮಹದೇವಪ್ಪ, ಸಹಕಾರ ಸಂಘದ ಅಧ್ಯಕ್ಷ ಎಂ.ಶಿವಕುಮಾರ್ , ಉಪಾಧ್ಯಕ್ಷ ಗುರುಮೂರ್ತಿ, ವಕೀಲ ಎಂ.ಎಸ್ . ಶ್ರೀಕಂಠಸ್ವಾಮಿ, ನಿರ್ದೇಶಕರು, ಸಿಬ್ಬಂದಿ, ಸದಸ್ಯರು, ಸಮುದಾಯದ ಮುಖಂಡರು ಇದ್ದರು.

ಚಿತ್ರ-31-2

ಮಾಮರ ಸೌಹಾರ್ದ ಸಹಕಾರಿ ಸಂಘದ ಕಚೇರಿಗೆ ಆಗಮಿಸಿದ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರನ್ನು ಗೌರವಿಸಲಾಯಿತು.

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ