ಮೆಲ್ಬೋರ್ನ್ : ಜೋಶ್ ಹೇಜಲ್ ವುಡ್ ಅವರ ಮಾರಕ ದಾಳಿ ಸೇರಿದಂತೆ ಆಸ್ಪ್ರೇಲಿಯಾ ತಂಡದ ಸಂಘಟಿತ ಬೌಲಿಂಗ್ ದಾಳಿಗೆ ತತ್ತರಿಸಿದ ಭಾರತ ತಂಡ ದ್ವಿತೀಯ ಟಿ20 ಪಂದ್ಯದಲ್ಲಿನಿರುತ್ತರಗೊಂಡಿತು. ಇಧಿದಧಿರೊಂದಿಧಿಗೆ ಐದು ಪಂದ್ಯಗಳ ಸರಣಿಯಲ್ಲಿಆತಿಥೇಯ ತಂಡ ಆಸ್ಪ್ರೇಲಿಯಾ 1-0 ಅಂತರದ ಮುನ್ನಡೆ ಸಾಧಿಸಿತು. ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿಶುಕ್ರವಾರ ನಡೆದ ಪಂದ್ಯದಲ್ಲಿಬಲಿಷ್ಠ ಭಾರತ ತಂಡವನ್ನು ಕೇವಲ 125 ರನ್ ಗಳಿಗೆ ಕಟ್ಟಿಹಾಕಿದ ಆಸ್ಪ್ರೇಲಿಯಾ, 40 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್ ಕಳೆದುಕೊಂಡು 126 ರನ್ ಗಳಿಸಿ ಗೆಲುವಿನ ಜೈಕಾರ ಹಾಕಿತು. ಬೌಲರ್ ಗಳ ಬಳಿಕ ನಾಯಕ ಮಿಚೆಲ್ ಮಾಷ್ ರ್ (46), ಟ್ರಾವಿಸ್ ಹೆಡ್ (28) ಮತ್ತು ಜೋಶ್ ಇಂಗ್ಲಿಸ್ (20) ಆತಿಥೇಯರ ಗೆಲುವನ್ನು ಸುಲಭಗೊಳಿಸಿಧಿದರು. ಈ ಸೋಲಿನೊಂದಿಗೆ ಭಾರತ ಟಿ20ಯಲ್ಲಿ2008ರ ನಂತರ 2ನೇ ಅತಿದೊಡ್ಡ ಸೋಲು ಕಂಡಿತು. ಈ ಹಿಂದೆ ಆಸೀಸ್ ವಿರುದ್ಧವೇ 52 ಎಸೆತಗಳು ಬಾಕಿ ಇದ್ದಾಗಲೇ ಸೋಲು ಕಂಡಿತ್ತು. ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾದ ಕಾರಣ ಉಭಯ ತಂಡಗಳು ಮುನ್ನಡೆ ಸಾಧಿಸುವ ಗುರಿಯೊಂದಿಗೆ ಕಣಕ್ಕಿಳಿದವು. ಟಾಸ್ ಸೋತು ಬ್ಯಾಟಿಂಗ್ ಗೆ ಆಹ್ವಾನ ಪಡೆದ ಭಾರತ, ಉತ್ತಮ ಆರಂಭ ಪಡೆಯಲು ವಿಫಲಗೊಂಡಿತು. ನಥಾನ್ ಎಲಿಸ್ ಮತ್ತು ಹೇಜಲ್ ವುಡ್ ಅವರ ಮಾರಕ ದಾಳಿಗೆ ತತ್ತರಿಸಿದ ಪ್ರವಾಸಿ ಬ್ಯಾಟರ್ ಗಳು ತರಗೆಲೆಯಂತೆ ಉದುರಿದರು. 7.3 ಓವರ್ ಗಳಲ್ಲಿ49ಕ್ಕೆ 5 ವಿಕೆಟ್ ಕಳೆದುಕೊಂಡ ಭಾರತ, ಮೂರಂಕಿ ಮೊತ್ತ ಮುಟ್ಟುವ ಅನುಮಾನ ಮೂಡಿಸಿತ್ತು. ಇದರ ನಡುವೆಯೂ ಆರಂಭಿಕ ಅಭಿಷೇಕ್ ಶರ್ಮ (68; 37 ಎಸೆತ, 8 ಫೋರ್ , 2 ಸಿಕ್ಸರ್ ) ಮತ್ತು ಹರ್ಷಿತ್ ರಾಣಾ (35; 33 ಎಸೆತ) ತಂಡದ ಗೌರವಾನ್ವಿತ ಮೊತ್ತಕ್ಕೆ ಕಾರಣರಾದರು. ನಾಲ್ವರು ಶೂನ್ಯ ಸಂಪಾದನೆ ಸೇರಿದಂತೆ 9 ಬ್ಯಾಟರ್ ಗಳು ಒಂದಂಕಿಗೆ ಸೀಮಿತಗೊಂಡಿದ್ದು, ಆತಿಥೇಯ ತಂಡದ ಬೌಲಿಂಗ್ ಪರಾಕ್ರಮವನ್ನು ಅನಾವರಣಗೊಳಿಸಿತು. ಇತ್ತಂಡಗಳ 3ನೇ ಪಂದ್ಯ ನ.2ರಂದು ಹೋಬರ್ಟ್ ನಲ್ಲಿನಡೆಯಲಿದೆ.

