ದಲಿತ ಸಿಎಂ ವಿಚಾರದಲ್ಲಿಸಚಿವ ಮಹದೇವಪ್ಪ ಮಾರ್ಮಿಕ ಮಾತು

Contributed byKENCHE GOWDA|Vijaya Karnataka
Subscribe

ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ವಿಚಾರದಲ್ಲಿ ಪಕ್ಷದ ಹೈಕಮಾಂಡ್ ಸೂಕ್ತ ಸಮಯಕ್ಕಾಗಿ ಕಾಯುತ್ತಿದೆ ಎಂದು ಸಚಿವ ಎಚ್‌.ಸಿ. ಮಹದೇವಪ್ಪ ಹೇಳಿದ್ದಾರೆ. ಅಂಬೇಡ್ಕರ್ ಅವರ ಮಾತಿನಲ್ಲಿ ನಂಬಿಕೆ ಇಟ್ಟು ಮುಂದುವರಿಯುವುದಾಗಿ ತಿಳಿಸಿದ್ದಾರೆ. ರಾಜಕೀಯ ಅವಕಾಶಗಳಿಗಾಗಿ ಹೋರಾಟ ನಿರಂತರವಾಗಿ ನಡೆಯಲಿದೆ. ಕಾಂಗ್ರೆಸ್ ಹೈಕಮಾಂಡ್ ದಲಿತರ ಪರವಾಗಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಸಂಪುಟ ಸಭೆಯಲ್ಲಿ ಯಾವುದೇ ಜಟಾಪಟಿ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.

mahadeveppas statement on the power of dalit cm in the state
ಬೆಂಗಳೂರು: ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ (ಸಿಎಂ) ಸ್ಥಾನದ ಅವಕಾಶದ ಬಗ್ಗೆ ಪಕ್ಷದ ಹೈಕಮಾಂಡ್ ಸೂಕ್ತ ಸಮಯಕ್ಕಾಗಿ ಕಾಯುತ್ತಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಿಮ್ಮ ಉದ್ಧಾರ ನಿಮ್ಮ ಕೈಯಲ್ಲೇ ಇದೆ" ಎಂಬ ಅಂಬೇಡ್ಕರ್ ಅವರ ಮಾತನ್ನು ಉಲ್ಲೇಖಿಸಿ, ದಲಿತ ಸಿಎಂ ಸಾಧ್ಯವಿಲ್ಲ ಎಂದು ಯಾರೂ ಭಾವಿಸಬಾರದು ಎಂದರು. ಮಗುವಿನ ಹಸಿವನ್ನು ತಾಯಿ ಅರ್ಥಮಾಡಿಕೊಳ್ಳುವಂತೆ, ಪಕ್ಷದ ಹೈಕಮಾಂಡ್ ಕೂಡ ಪರಿಸ್ಥಿತಿಯನ್ನು ಅರಿತು ಸೂಕ್ತ ನಿರ್ಧಾರ ಕೈಗೊಳ್ಳುತ್ತದೆ ಎಂದು ಅವರು ಮಾರ್ಮಿಕವಾಗಿ ಹೇಳಿದರು. ರಾಜಕೀಯ ಅವಕಾಶಗಳಿಗಾಗಿ ಹೋರಾಟ ನಿರಂತರವಾಗಿದ್ದು, ದಲಿತರ ನೋವು-ಸಂಕಟಗಳನ್ನು ದಲಿತರೇ ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ. ಕಾಂಗ್ರೆಸ್ ಹೈಕಮಾಂಡ್ ದಲಿತರ ಪರವಾಗಿದ್ದು, ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರು 'ಜೈ ಭೀಮ್, ಜೈ ಬಾಪು, ಜೈ ಸಂವಿಧಾನ'ವನ್ನು ಪ್ರತಿಪಾದಿಸುತ್ತಿದ್ದಾರೆ ಎಂದು ಮಹದೇವಪ್ಪ ತಿಳಿಸಿದರು.

ಗುರುವಾರದ ಸಂಪುಟ ಸಭೆಯಲ್ಲಿ ನಡೆದ ಗಂಗಾ ಕಲ್ಯಾಣ ಯೋಜನೆಯ ಟೆಂಡರ್ ಕುರಿತ ಚರ್ಚೆಯ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಯಾವುದೇ ಜಟಾಪಟಿ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು. ವಿದ್ಯುತ್ ಸಂಪರ್ಕಕ್ಕೆ ಖರ್ಚು ಹೆಚ್ಚಾಗುತ್ತಿರುವುದರಿಂದ ಎನರ್ಜೈಸಿಂಗ್ ಕಾಸ್ಟ್ ಸಾಕಾಗುವುದಿಲ್ಲ ಎಂಬುದು ಇಂಧನ ಸಚಿವರ ವಾದವಾಗಿತ್ತು. ಈ ಬಗ್ಗೆ ಚರ್ಚೆ ನಡೆದಿತೇ ಹೊರತು ಬೇರೇನೂ ಆಗಿಲ್ಲ ಎಂದು ಅವರು ಹೇಳಿದರು.
ಮಗುವಿಗೆ ಹಸಿವಾದಾಗ ತಾಯಿಗೆ ಗೊತ್ತಾಗಬೇಕು, ಆಗ ತಾಯಿ ಹಾಲು ಕೊಡುತ್ತಾಳೆ. ನಮ್ಮ ಮಗು ಆರೋಗ್ಯವಾಗಿದೆ, ಅಳುವ ಪರಿಸ್ಥಿತಿ ಇಲ್ಲ. ತಾಯಿಯ ಕರುಣೆ ಇರುವುದರಿಂದ ಎಲ್ಲವೂ ಸರಿಯಾಗಿ ನಡೆಯುತ್ತಿದೆ. ಇಲ್ಲದಿದ್ದರೆ ಮಗು ಅಪೌಷ್ಟಿಕತೆಯಿಂದ ಬಳಲುತ್ತಿತ್ತು ಅಲ್ಲವೇ? ಎಂದು ಮಹದೇವಪ್ಪ ಪ್ರಶ್ನಿಸಿದರು. ರಾಜಕೀಯ ಅವಕಾಶಗಳಿಗಾಗಿ ಹೋರಾಟ ಇದ್ದೇ ಇದೆ. ಯಾವಾಗ ನಿರ್ಧಾರ ಆಗುತ್ತದೋ ಅದು ವರಿಷ್ಠರಿಗೆ ಬಿಟ್ಟದ್ದು. ದಲಿತರ ನೋವು, ಸಂಕಟ ದಲಿತರಿಗೆ ಅರ್ಥವಾಗುತ್ತದೆ. ಬೇರೆಯವರಿಗೆ ಅಷ್ಟು ಸುಲಭವಾಗಿ ಗೊತ್ತಾಗುವುದಿಲ್ಲ. ಹಾಗಾಗಿ ಹೋರಾಟದಲ್ಲಿ ನಿರಂತರತೆ ಅಗತ್ಯ. ಕಾಂಗ್ರೆಸ್ ಹೈಕಮಾಂಡ್ ದಲಿತರ ಪರವಾಗಿಯೇ ಇದೆ. ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರು 'ಜೈ ಭೀಮ್, ಜೈ ಬಾಪು, ಜೈ ಸಂವಿಧಾನ' ಪ್ರತಿಪಾದನೆ ಮಾಡುತ್ತಿದ್ದು, ರಾಜ್ಯದಲ್ಲಿ ನಾನು ಈ ಕೆಲಸ ಮಾಡುತ್ತಿದ್ದೇನೆ ಎಂದು ಅವರು ಹೇಳಿದರು.

ಸಂಪುಟದಲ್ಲಿ ಯಾವುದೇ ಸಂಘರ್ಷ ನಡೆದಿಲ್ಲ. ವಿಷಯಗಳು ಬಂದಾಗ ಚರ್ಚೆ ಆಗುತ್ತದೆ. ಗಂಗಾ ಕಲ್ಯಾಣ ಯೋಜನೆಯ ಟೆಂಡರ್ ಮುಂದುವರಿಸುವ ಕುರಿತ ವಿಷಯ ಚರ್ಚೆ ವೇಳೆ ವಿದ್ಯುತ್ ಸಂಪರ್ಕಕ್ಕೆ ಖರ್ಚು ಹೆಚ್ಚಾಗುತ್ತಿದೆ. ಹಾಗಾಗಿ ಎನರ್ಜೈಸಿಂಗ್ ಕಾಸ್ಟ್ ಸಾಕಾಗುವುದಿಲ್ಲ ಎಂಬುದು ಇಂಧನ ಸಚಿವರ ವಾದವಾಗಿತ್ತು. ಈ ಬಗ್ಗೆ ಚರ್ಚೆ ನಡೆಯಿತೇ ಹೊರತು ಬೇರೇನೂ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ