ಜ್ಞಾನ, ಕೌಶಲಗಳು ಅವಶ್ಯ

Contributed bymahesh.adali@gmail.com|Vijaya Karnataka
Subscribe

ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಮಹಿಳಾ ಸಬಲೀಕರಣ ಮತ್ತು ಸ್ಪರ್ಧಾತ್ಮಕ ಕೌಶಲ ತರಬೇತಿ ಕುರಿತು ಕಾರ್ಯಾಗಾರ ನಡೆಯಿತು. 21ನೇ ಶತಮಾನದ ಭಾರತದಲ್ಲಿ ಮಹಿಳೆಯರ ಪಾತ್ರ ಮಹತ್ವದ್ದು ಎಂದು ಗ್ರಂಥಪಾಲಕ ಪ್ರೊ.ಗವಿಸಿದ್ದಪ್ಪ ಎ. ಹೇಳಿದರು. ಜ್ಞಾನ ಮತ್ತು ಕೌಶಲಗಳು ಸವಾಲು ಎದುರಿಸಲು ಅಗತ್ಯ ಎಂದರು. ಯುಪಿಎಸ್‌ಸಿ ಪರೀಕ್ಷೆಗಳ ಬಗ್ಗೆಯೂ ಮಾಹಿತಿ ನೀಡಲಾಯಿತು. ಕಾರ್ಯಾಗಾರ ಯಶಸ್ವಿಯಾಗಿ ನಡೆಯಿತು.

the need for knowledge and skills for womens empowerment

ಯಶಸ್ಸು ಕುರಿತ ಕಾರ್ಯಾಗಾರ | ಗ್ರಂಥಪಾಲಕ ಪ್ರೊ.ಗವಿಸಿದ್ದಪ್ಪ ಎ. ಹೇಳಿಕೆ

ಜ್ಞಾನ, ಕೌಶಲಗಳು ಅವಶ್ಯ

ವಿಕ ಸುದ್ದಿಲೋಕ ವಿಜಯಪುರ

‘‘21ನೇ ಶತಮಾನದ ಭಾರತವನ್ನು ರೂಪಿಸುವಲ್ಲಿಮಹಿಳಾ ಸಬಲೀಕರಣದ ಪಾತ್ರ ಅತ್ಯಂತ ಮುಖ್ಯವಾಗಿದ್ದು, ಶೈಕ್ಷಣಿಕ, ವೃತ್ತಿಪರ ಮತ್ತು ಸಾಮಾಜಿಕ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಜ್ಞಾನ ಮತ್ತು ಕೌಶಲಗಳು ಅವಶ್ಯ,’’ ಎಂದು ಮಹಿಳಾ ವಿವಿಯ ಗ್ರಂಥಪಾಲಕ ಪ್ರೊ.ಗವಿಸಿದ್ದಪ್ಪ ಎ. ಹೇಳಿದರು.

ನಗರದ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿವಾಣಿಜ್ಯ ಮತ್ತು ವ್ಯವಹಾರ ಅಧ್ಯಯನ ವಿಭಾಗ ಹಾಗೂ ಸ್ಪರ್ಧಾತ್ಮಕ ಪರೀಕ್ಷಾ ಅಕಾಡೆಮಿ ಸಹಯೋಗದಲ್ಲಿಹಮ್ಮಿಕೊಂಡಿದ್ದ 21ನೇ ಶತಮಾನದ ನವ ಗ್ರೇಟ್ ಭಾರತ್ : ಮಹಿಳಾ ಸಬಲೀಕರಣ , ಸ್ಪರ್ಧಾತ್ಮಕ ಕೌಶಲ ತರಬೇತಿಯಲ್ಲಿಯಶಸ್ಸು ಕುರಿತ ಎರಡು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬೆಂಗಳೂರಿನ ತುಳಸಿದಾಸ್ ಮತ್ತು ರಾಜ್ ಇನ್ ಸ್ಟಿಟ್ಯೂಟ್ ನ ನಿರ್ದೇಶಕಿ ತುಳಸಿ ದಾಸ್ ಜಿ. ಯುಪಿಎಸ್ ಸಿ ಮತ್ತು ನಾಗರಿಕ ಸೇವಾ ಪರೀಕ್ಷೆಗಳಿಗೆ ಅಗತ್ಯವಾದ ಸಿದ್ಧತೆ, ಕೌಶಲಗಳು ಮತ್ತು ಮೀಸಲಾತಿ ನೀತಿಗಳ ಬಗ್ಗೆ ವಿವರಿಸಿದರು.

ಟಿಆರ್ ಐಕೆಎಸ್ ವಿಜಯಪುರದ ಶಿಕ್ಷಕ ಸುರೇಶ ನಿಮಂಗಾರಿ ಮತ್ತು ವಿಜಯಕುಮಾರ್ ಮಾಮದಾಪೂರ್ , Üಂಪನ್ಮೂಲ ವ್ಯಕ್ತಿ ಮಲ್ಲಿಕಾರ್ಜುನ್ ಹಟ್ಟಿ ಉಪನ್ಯಾಸ ನೀಡಿದರು. ಕಾರ್ಯಕ್ರಮದ ಸಂಯೋಜಕಿ ಪ್ರೊ.ಅನಿತಾ ನಾಟಿಕರ್ , ಸ್ಪರ್ಧಾತ್ಮಕ ಪರೀಕ್ಷಾ ಅಕಾಡೆಮಿಯ ಸಂಯೋಜಕ ಡಾ.ಎಸ್ .ಆರ್ .ಗಣೇಶ ಹಾಗೂ ನಾನಾ ವಿಭಾಗದ ಸಿಬ್ಬಂದಿ, ವಿದ್ಯಾರ್ಥಿನಿಯರು ಇದ್ದರು.

ವಿವಿ-ಬಿಜೆಪಿ27

ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿನಡೆದ ಕಾರ್ಯಾಗಾರವನ್ನು ಗ್ರಂಥಪಾಲಕ ಪ್ರೊ.ಗವಿಸಿದ್ದಪ್ಪ ಎ. ಉದ್ಘಾಟಿಸಿದರು.

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ