ಪರಿಷ್ಕೃತ... ಎಲೆಕ್ಟ್ರಿಕ್ ಬೈಕ್ ಬೆಂಕಿಗಾಹುತಿ

Contributed byumeshganachari@yahoo.in|Vijaya Karnataka

ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದಲ್ಲಿ ಎಲೆಕ್ಟ್ರಿಕ್ ಬೈಕ್ ಬೆಂಕಿಗೆ ಆಹುತಿಯಾಗಿದೆ. ಕಂಠಿ ವೃತ್ತದಲ್ಲಿ ವಿಷ್ಣು ಇಂದರಗಿ ಎಂಬುವರ ಬೈಕ್ ಹೊತ್ತಿ ಉರಿದಿದೆ. ಬೆಳಗಿನ ಜಾವ ವಾಯು ವಿಹಾರಕ್ಕೆ ಹೊರಟಿದ್ದಾಗ ಬೈಕ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ವಾಹನ ಸಂಪೂರ್ಣ ಸುಟ್ಟು ಕರಕಲಾಗಿದೆ. ಬೈಕ್ ಸವಾರ ವಿಷ್ಣು ಇಂದರಗಿ ಅವರು ಎಲೆಕ್ಟ್ರಿಕ್ ಬೈಕ್ ಶೋರೂಂ ಮ್ಯಾನೇಜರ್ ಆಗಿದ್ದಾರೆ.

purified electric bike catches fire

ಎಲೆಕ್ಟ್ರಿಕ್ ಬೈಕ್ ಬೆಂಕಿಗಾಹುತಿ

ವಿಕ ಸುದ್ದಿಲೋಕ ಇಳಕಲ್ (ಬಾಗಲಕೋಟೆ)

ಎಲೆಕ್ಟ್ರಿಕ್ ಬೈಕ್ ಹೊತ್ತಿ ಉರಿದ ಘಟನೆ ಶನಿವಾರ ನಗರದ ಕಂಠಿ ವೃತ್ತದಲ್ಲಿನಡೆದಿದೆ.

ವಿಷ್ಣು ಇಂದರಗಿ ಅವರ ಬೈಕ್ ಸುಟ್ಟು ಕರಕಲಾಗಿದೆ. ವಿಷ್ಣು ಅವರು ಬೆಳಗಿನ ಜಾವ ವಾಯು ವಿಹಾರಕ್ಕೆ ಹೊರಟಿದ್ದಾಗ ಬೈಕ್ ನಲ್ಲಿಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಸ್ಟಾತ್ರ್ಯಂಡ್ ಹಚ್ಚಿ ನಿಲ್ಲಿಸುವಷ್ಟರಲ್ಲಿವಾಹನ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಜನರು ಬೆಂಕಿ ನಂದಿಸುವ ಪ್ರಯತ್ನ ಮಾಡಿದರಾದರೂ ಪ್ರಯೋಜನವಾಗಲಿಲ್ಲ. ಬೈಕ್ ಸವಾರ ವಿಷ್ಣು ಇಂದರಗಿ ಅವರು ಎಲೆಕ್ಟ್ರಿಕ್ ಬೈಕ್ ಶೋರೂಂ ಮ್ಯಾನೇಜರ್ ಎಂದು ತಿಳಿದು ಬಂದಿದೆ.

(ಫೋಟೊ:11-ಐಎಲ್ಕೆ-3)-

ಇಳಕಲ್ ದಲ್ಲಿಬೆಂಕಿ ಕಾಣಿಸಿಕೊಂಡು ಸುಟ್ಟು ಕರಕಲಾದ ಎಲೆಕ್ಟ್ರಿಕ್ ಬೈಕ್ .