ವೃತ್ತಿಪರತೆ ಅಳವಡಿಕೆ ಇಂದಿನ ಅಗತ್ಯ

Contributed bynijaguni.dindalkoppa@timesofindia.com|Vijaya Karnataka
Subscribe

ಧಾರವಾಡದ ಕರ್ನಾಟಕ ಕಲಾ ಕಾಲೇಜಿನಲ್ಲಿ ಪ್ರಥಮ ವರ್ಷದ ವಾಣಿಜ್ಯ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ನಡೆಯಿತು. ಕಾರ್ಪೊರೇಟ್ ಕ್ಷೇತ್ರದಲ್ಲಿ ಅವಕಾಶಗಳಿಗೆ ವೃತ್ತಿಪರತೆ ಅಗತ್ಯ ಎಂದು ಡಾ. ಐ.ಸಿ. ಮುಳಗುಂದ ಹೇಳಿದರು. ವಿದ್ಯಾರ್ಥಿಗಳು ಶಿಸ್ತು, ಸಮಯ ಪಾಲನೆ, ತಂತ್ರಜ್ಞಾನ ಬಳಕೆಯಲ್ಲಿ ಹಿಡಿತ ಸಾಧಿಸಬೇಕು. ಬ್ಯಾಂಕ್ ಮತ್ತು ಕಾರ್ಪೊರೇಟ್ ವಲಯದಲ್ಲಿ ಉದ್ಯೋಗಾವಕಾಶಗಳು ಇವೆ ಎಂದು ಅಶೋಕ ಹೀರಬನ್ನವರ ತಿಳಿಸಿದರು. ವಿದ್ಯಾರ್ಥಿಗಳು ಗುರಿ ಸಾಧನೆಗೆ ಪ್ರಯತ್ನಿಸಬೇಕು.

preparing for professionalism from arts to blue chip job goals

ಕೆಸಿಡಿಯ ಪ್ಥಮ ವರ್ಷದ ಕಾಮರ್ಸ್ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ

ವಿಕ ಸುದ್ದಿಲೋಕ ಧಾರವಾಡ

ಕಾರ್ಪೊರೇಟ್ ಕ್ಷೇತ್ರದಲ್ಲಿನ ವಿಪುಲವಾದ ಅವಕಾಶಗಳಿಗೆ ಪೂರಕವಾಗಿ ವಾಣಿಜ್ಯ ವಿದ್ಯಾರ್ಥಿಗಳು ವೃತ್ತಿಪರತೆ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಕರ್ನಾಟಕ ಕಲಾ ಕಾಲೇಜಿನ ಡಾ. ಐ.ಸಿ. ಮುಳಗುಂದ ಅಭಿಪ್ರಾಯಪಟ್ಟರು.

ನಗರದ ಕರ್ನಾಟಕ ಕಾಲೇಜಿನ ವಾಣಿಜ್ಯ ವಿಭಾಗದ ಕಾಮರ್ಸ್ ಅಸೋಸಿಯೇಷನ್ ಬಿಬಿಎ ಸಭಾಂಗಣದಲ್ಲಿಆಯೋಜಿಸಿದ ಪ್ರಥಮ ವರ್ಷದ ವಾಣಿಜ್ಯ ವಿಷಯದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಾಣಿಜ್ಯ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿಹೆಚ್ಚು ವೃತ್ತಿಪರ ಅವಕಾಶಗಳಿದ್ದು ಈ ನಿಟ್ಟಿನಲ್ಲಿವಿದ್ಯಾರ್ಥಿಗಳು ನಿರಂತರ ಅಧ್ಯಯನದ ಜೊತೆಗೆ ಶಿಸ್ತು, ಸಮಯ ಪಾಲನೆ ಬೆಳೆಸಿಕೊಳ್ಳಬೇಕು. ತಂತ್ರಜ್ಞಾನ ಮತ್ತು ಮೊಬೈಲ್ ಬಳಕೆ ಮೆಲೆ ಹಿಡಿತ ವಿರಲಿ ಶೈಕ್ಷಣಿಕ ಉದ್ದೇಶಕ್ಕಾಗಿ ಮೊಬೈಲ್ ಬಳಸಿ ಎಂದ ಅವರು ಉತ್ತಮ ಸ್ನೇಹಿತರನ್ನು ಆಯ್ಕೆ ಮಾಡಿ ಸ್ನೇಹ ಬೆಳಸಿ ವರ್ತಮಾನದ ಜೊತೆಗೆ ಭವಿಷ್ಯದ ಕನಸ್ಸನ್ನು ನನಸು ಮಾಡಲು ಪ್ರಯತ್ನಿಸಿ ಎಂದರು.

ಕರ್ನಾಟಕ ಕಾಲೇಜಿನ ಆವರಣದಲ್ಲಿರುವ ಕೆನರಾ ಬ್ಯಾಂಕ್ ಶಾಖೆಯ ವ್ಯವಸ್ಥಾಪಕರಾದ ಅಶೋಕ ಹೀರಬನ್ನವರ ಮಾತನಾಡಿ‘‘ವಿದ್ಯಾರ್ಥಿಗಳು ಸಮಯಕ್ಕೆ ಆದ್ಯತೆ ನೀಡಿವುದರ ಜೊತೆಗೆ ನಿರ್ದಷ್ಟ ಗುರಿಯನ್ನು ಸಾಧಿಸಲು ಪ್ರಯತ್ನಿಸಿ. ವಿದ್ಯಾರ್ಥಿ ಜೀವನ ಉಜ್ವಲವಾಗಿ ಬಳಸಿಕೊಳ್ಳಿ, ವಾಣಿಜ್ಯ ವಿದ್ಯಾರ್ಥಿಗಳಿಗೆ ಬ್ಯಾಂಕ್ ಮತ್ತು ಕಾರ್ಪೊರೇಟ್ ವಲಯದಲ್ಲಿಹೆಚ್ಚು ಉದ್ಯೋಗ ಅವಕಾಶಗಳು ಇವೆ. ವಾಣಿಜ್ಯ ಪದವಿಧರರಿಗೆ ಭವಿಷ್ಯದಲ್ಲಿಒಳ್ಳೆಯ ಅವಕಾಶ ಇವೆ’’ ಎಂದರು.

ಪ್ರೊ.ಕಿರಣಕುಮಾರ ಡಾ. ಇಂದಾಯಣಿ ಕಟ್ಟಿ, ಪ್ರೊ.ಉಲ್ಲಾಸ ದೊಡಮನಿ, ಸದಾಶಿವ ಮೆಣಸಿನಕಾಯಿ, ಸದಾಶಿವ ಅರಕೇರಿ,ಡಾ.ಶಿಲ್ಪಾ ಧಾರವಾಡ, ಸೇರಿದಂತೆ ವಿದ್ಯಾರ್ಥಿ ಕಾರ್ಯದರ್ಶಿಗಳಾದ ಸಂಗೀತಾ. ಸೃಷ್ಠಿ ಹೀರೆಮಠ ಸೌಂದರ್ಯ ಮುದ್ದಪ್ಪನವರ ಇದ್ದರು.

ಫೋಟೊ: 31ನಿಜಗುಣಿ4

ಧಾರವಾಡ ಕರ್ನಾಟಕ ಕಾಲೇಜಿನ ವಾಣಿಜ್ಯ ವಿಭಾಗವು ಬಿಬಿಎ ಸಭಾಂಗಣದಲ್ಲಿಆಯೋಜಿಸಿದ ಪ್ರಥಮ ವರ್ಷದ ವಾಣಿಜ್ಯ ವಿಷಯದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವನ್ನು ಡಾ. ಐ.ಸಿ. ಮುಳಗುಂದ ಉದ್ಘಾಟಿಸಿದರು.

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ