ಬದಿಯಡ್ಕದಲ್ಲಿಏಕತಾ ಓಟ

Contributed byprasadsarali@gmail.com|Vijaya Karnataka
Subscribe

ಬದಿಯಡ್ಕದಲ್ಲಿ ರಾಷ್ಟ್ರೀಯ ಏಕತಾ ದಿನದ ಅಂಗವಾಗಿ 'ರನ್‌ ಎಗೈನ್ಸ್ಟ್‌ ಡ್ರಗ್ಸ್‌ ಸೇ ನೋ ಟು ಡ್ರಗ್ಸ್‌' ಎಂಬ ಘೋಷಣೆಯಡಿ ಗುಂಪು ಓಟ ನಡೆಯಿತು. ಬದಿಯಡ್ಕ ಪೊಲೀಸ್ ಠಾಣೆ ನೇತೃತ್ವದಲ್ಲಿ ನಡೆದ ಈ ಓಟದಲ್ಲಿ ಎಸ್‌ಪಿಸಿ, ಜನಮೈತ್ರಿ ಪೊಲೀಸ್, ರೆಡ್‌ಕ್ರಾಸ್‌, ಸ್ಕೌಟ್‌ ಗೈಡ್ಸ್‌, ವ್ಯಾಪಾರಿಗಳು, ನಾನಾ ಕ್ಲಬ್‌ಗಳು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಬದಿಯಡ್ಕದಿಂದ ಆರಂಭವಾದ ಓಟ ಬೋಳುಕಟ್ಟೆ ಮೈದಾನದ ಮೂಲಕ ಪೊಲೀಸ್ ಠಾಣೆಯಲ್ಲಿ ಸಂಪನ್ನಗೊಂಡಿತು.

run against drugs event organized in badiyadka

ಬದಿಯಡ್ಕ : ಬದಿಯಡ್ಕ ಪೊಲೀಸ್ ಠಾಣೆ ನೇತೃತ್ವದಲ್ಲಿ, ಎಸ್ ಪಿಸಿ, ಜನಮೈತ್ರಿ ಪೊಲೀಸ್ , ರೆಡ್ ಕ್ರಾಸ್ , ಸ್ಕೌಟ್ ಗೈಡ್ಸ್ , ವ್ಯಾಪಾರಿಗಳು ಮತ್ತು ಕೇರಳ ವ್ಯಾಪಾರ ವ್ಯವಸಾಯಿ ಏಕೋಪನಾ ಸಮಿತಿ ಬದಿಯಡ್ಕ ಘಟಕ ಮತ್ತು ನಾನಾ ಕ್ಲಬ್ ಗಳು ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ‘ರನ್ ಎಗೈನ್ಸ್ಟ್ ಡ್ರಗ್ಸ್ ಸೇ ನೋ ಟು ಡ್ರಗ್ಸ್ ’ ಎಂಬ ಘೋಷಣೆಯಡಿ ಗುಂಪು ಓಟ ಆಯೋಜಿಸಲಾಯಿತು.

ಬದಿಯಡ್ಕ ಗ್ರಾಪಂ ಉಪಾಧ್ಯಕ್ಷ ಅಬ್ಬಾಸ್ ಧ್ವಜಾರೋಹಣ ನೆರವೇರಿಸಿದ ರಾರ ಯಲಿಯಲ್ಲಿಬದಿಯಡ್ಕದಿಂದ ಪ್ರಾರಂಭವಾಗಿ ಬೋಳುಕಟ್ಟೆ ಮೈದಾನದ ಮೂಲಕ ಪೊಲೀಸ್ ಠಾಣೆಯಲ್ಲಿಕೊನೆಗೊಂಡಿತು. ಕೇರಳ ವ್ಯಾಪಾರ ವ್ಯವಸಾಯಿ ಏಕೋಪನಾ ಸಮಿತಿ ಬದಿಯಡ್ಕ ಘಟಕದ ಅಧ್ಯಕ್ಷ ನರೇಂದ್ರ ಬಿ.ಎನ್ ., ಎನ್ ಎಚ್ ಎಸ್ ಎಸ್ ಬದಿಯಡ್ಕ, ಎಸ್ ಡಿಪಿಎ, ಎಚ್ ಎಸ್ ಎಸ್ ಧರ್ಮತಡ್ಕ ಶಾಲೆಗಳ ವಿದ್ಯಾರ್ಥಿಗಳು, ಎಲ್ಲ ಪೊಲೀಸ್ ಅಧಿಕಾರಿಗಳು ಮತ್ತು ಶಿಕ್ಷಕರು ಭಾಗವಹಿಸಿದ್ದರು. ಬದಿಯಡ್ಕ ಎಸ್ ಐ ಸವ್ಯಸಾಚಿ, ಎಎಸ್ ಐ ಸುಕುಮಾರನ್ ರಾರ ಯಲಿಯನ್ನು ಸ್ವಾಗತಿಸಿದರು.

(31 ಬಿಎ ಬದಿಯಡ್ಕ)

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ