ಕೌಶಲ ವಂಚಿತರಿಗೆ ತರಬೇತಿ, ಕ್ರೀಡಾ ಚಟುವಟಿಕೆ

Contributed byjamkhandikar.sushant080@gmail.com|Vijaya Karnataka

ಚಿಕ್ಕೋಡಿಯಲ್ಲಿ ಕೌಶಲ ವಂಚಿತ ವಿದ್ಯಾವಂತರಿಗೆ ಸಿಎನ್‌ಸಿ ಆಪರೇಟರ್, ವಾಹನ ಚಾಲನೆ, ಮೋಟರ್ ವೈಂಡಿಂಗ್ ತರಬೇತಿಗಳು ಜ.16 ರಿಂದ ಆರಂಭವಾಗಲಿವೆ. ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಅವರ ಜನ್ಮದಿನದ ಅಂಗವಾಗಿ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಲಾಗಿದೆ. ಮಹಾಂತೇಶ ಕವಟಗಿಮಠ ಟ್ರಫ್ ಸ್ಪೋರ್ಟ್ಸ್ ಅರೆನಾ ಕಾಂಪ್ಲೆಕ್ಸ್ ಸಿದ್ಧಗೊಂಡಿದೆ. ಈ ಕ್ರೀಡಾ ಮಳಿಗೆಯ ಉದ್ಘಾಟನೆಯನ್ನು ಗಣ್ಯರು ನೆರವೇರಿಸಲಿದ್ದಾರೆ.

employment opportunities for skill deficient training and sports activities

ಚಿಕ್ಕೋಡಿ: ಇಲ್ಲಿನ ಎಂ.ಕೆ.ಕವಟಗಿಮಠ ಫೌಂಡೇಶನ್ , ಸಿಎಲ್ ಇ ಸಂಸ್ಥೆ ಸಹಯೋಗದಲ್ಲಿತಾಲೂಕಿನ ಕೌಶಲ ವಂಚಿತ ವಿದ್ಯಾವಂತರಿಗೆ ಜ.16 ರಿಂದ ಸಿಎನ್ ಸಿ ಅಪರೇಟರ್ , ವಾಹನ ಚಾಲನೆ , ಮೋಟರ್ ವೈಂಡಿಂಗ್ ತರಬೇತಿಗಳನ್ನು ಪ್ರಾರಂಭಿಸಲಾಗುತ್ತಿದೆ. ಇದೇ ವೇಳೆ ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಅವರ ಜನ್ಮದಿನದ ನಿಮಿತ್ತ ನಾನಾ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಿದ್ದು, ಇದಕ್ಕಾಗಿ ಮಹಾಂತೇಶ ಕವಟಗಿಮಠ ಟ್ರಫ್ ಸ್ಪೋರ್ಟ್ಸ್ ಅರೆನಾ ಕಾಂಪ್ಲೆಕ್ಸ್ ಸಜ್ಜುಗೊಳಿಸಲಾಗಿದೆ. ಈ ಸುಸಜ್ಜಿತ ಆಟದ ಮಳಿಗೆ ಉದ್ಘಾಟನೆಯನ್ನು ನಿಡಸೋಸಿ ಸಿದ್ಧಸಂಸ್ಥಾನ ಮಠದ ಶ್ರೀ ಪಂಚಮ ಶಿವಲಿಂಗೇಶ್ವರ ಸ್ವಾಮಿಗಳು, ಸಂಪಾದನ ಚರಮೂರ್ತಿ ಮಠದ ಸಂಪಾದನ ಸ್ವಾಮಿಗಳು ಹಾಗೂ ಶ್ರೀ ಚಿಂಚಣಿ ಸಿದ್ಧಸಂಸ್ಥಾನ ಮಠದ ಶಿವಪ್ರಸಾದ ದೇವರು ನೆರವೇರಿಸಲಿದ್ದಾರೆ ಎಂದು ಸಿಎಲ್ ಇ ಸಂಸ್ಥೆ ಕಾರ್ಯದರ್ಶಿ ಜಗದೀಶ ಕವಟಗಿಮಠ ಪತ್ರಿಕಾ ಪ್ರಕಟಣೆಯಲ್ಲಿತಿಳಿಸಿದ್ದಾರೆ.